ಆ ಔಷಧಿಯಿಂದಲೂ ಅಜ್ಜಿಗೆ ಗುಣವಾಗಲಿಲ್ಲ.
ಅದಾದ ಎರಡು ದಿನಗಳ ಮೇಲೆ ಅಜ್ಜಿ ನನ್ನನ್ನು ಸಮಿಪಕ್ಕೆ ಕರೆದು, ನನಗೊಂದು ಕೆಲಸ ವಹಿಸಿಕೊಟ್ಟರು.
"ಒಬ್ಬರು ವಕೀಲರನ್ನ ಕರಕೊಂಡು ಬಾ."
"ವಕೀಲರು ? ವಕೀಲರೆ-ಡಾಕ್ಟರೆ ? ಯಾರಜ್ಜಿ ?"
"ವಕೀಲರು ಕಣೋ. ಕರೆ ಕೋಟು ಹಾಕಿ ಪೇಟ ಇಟ್ಕೋತಾ ರಲ್ಲಾ. ಅಂಥವರು ಕಣೋ--ವಕೀಲರು."
"ಅಂಥವರು ಯಾಕಜ್ಜೀ ?"
"ನೀನು ಕರೊಂಬಾ,ಹೇಳ್ತಿನಿ" ಆದರೆ ಆ ಕರಿಯ ಕೋಟಿನವರೂ ಫೀಸಿನ ಪ್ರಸ್ತಾಪಮಾಡಿದರು. ಅವರನ್ನೂ ಬಡಕಲು ಕುದುರೆಯೊಂದು ನಮ್ಮ ಮನೆಗೆ ಎಳೆದು ತಂದಿತು.
ಅಜ್ಜಿ ಆ ವಕೀಲರ ನೆರವಿನಿಂದ ತಮ್ಮ ಮರಣ ಶಾಸನ ಬರೆಸಿ ದರು. ತಮ್ಮ ಗಂಡನಿಂದ ತಮಗೆ ದೊರೆತಿದ್ದ ಆ ಮನೆ-ಅಂಗಳ ವೆಲ್ಲಾ, ನನಗೆ ಸೇರಿದುದೆಂದು ಅವರು ಬರೆಸಿದರು. ತಾನು ಕಾಹೀಲೆ ಬಿದ್ದಾಗ ತನ್ನನ್ನು ನೋಡಿಕೊಂಡ ನೆರೆಮನೆಯವರಿಗೆ ಉಳಿದಿದ್ದ ಒಂದೇ ಒಂದು ಎಮ್ಮೆಯನ್ನೂ ಅದರ ಕರುವನ್ನೂ ವಹಿಸಿಕೊಟ್ಟರು.
"ಚಂದ್ರೂ ಬರೋತನಕ ಕಷ್ಟ ಪಟ್ಟು ನನ್ನ ನೋಡ್ಕೊಂಡಿರಿ. ಅಷ್ಟೇ ಅಲ್ದೆ,ಆ ಪಾಪಿಗಳು ಯಾರೂ ಸಂಬಂಧಿಕರು ಅಂತ ಬಡ ಕೊಂಡು ಈವರೆಗೆ ಹತ್ತಿರ ಬರದಹಾಗೆ ಮಾಡಿದಿರಿ. ಆ ಋಣಾನೆಲ್ಲಾ ಸಂದಾಯ ಮಾಡೋದು ಸಾದ್ಯವೇ ಇಲ್ಲ...ಆದರೂ ಈ ಎಮ್ಮೇನ ನೀವು ತಗೋಬೇಕು--ಖಂಡಿತಾ ತಗೋಬೇಕು."
ಆ ವಕೀಲರು ಇಪ್ಪತ್ತೈದು ರೂಪಾಯಿ ಸಂಪಾದಿಸಿಕೊಂಡು ತಮ್ಮ ಮನೆಗೆ ಹೋದರು. ಎಮ್ಮೆ ಅಂದಿನಿಂದಲೇ ನೆರೆಮನೆ ಸೇರಿತು.
"ಯಾಕೆ ಹೀಗ್ಮಾಡ್ತಾ ಇದ್ದೀರಿ ಅಜ್ಜಿ ? ನಿಮಗೆ ಗುಣವಾ ಗುತ್ತೆ. ನಾಳೆ ನಾಡಿದ್ದರಲ್ಲಿ ಗುಣವಾಗುತ್ತೆ."
ನಾನೇನೋ ಸಮಾಧಾನದ ಮಾತುಗಳನ್ನಾಡುತ್ತಿದ್ದೆ. ಆದರೆ