ಈ ಪುಟವನ್ನು ಪ್ರಕಟಿಸಲಾಗಿದೆ

........ಅಲ್ಲಿ,ಆ ನಿಚ್ಚಣಿಕೆ ಕೆಳಗೆ,ಆ ಮೂಲೇಲಿ.......ನೋಡ್ಡೇನೋ ಸರಿಯಾಗಿ........ಆ ಮೂಲೇಲಿ ಮರಿ.......ಆಲ್ಲೆ ಕೆಳಕ್ಕೆ ನೆಲ್ಡಲ್ಲೆ.... ಮುನ್ನೂರು ರೂಪಾಯಿ ಕಣೋ......."

ಒಮ್ಮೆಲೆ ಹೃದಯ ಕಿವುಚಿಬಂದ ಹಾಗಾಯಿತು ನನಗೆ. ಅದು ಅವರ ಮಹಾ ಆಸ್ತಿ. ಅದರಿಂದದಾಗಿಯೇ ಅವರ ಕೊನೆಯ ದಿನಗಳ ನೆಮ್ಮದಿ ನಾಶವಾಯಿತು. ಬೇಸರದ ಧ್ವನಿಯಿಂದ, "ಇರಲಿ ಅಜ್ಜೀ. ಹಾಗಿರಲಿ....ನೀವು ಮಲಕ್ಕೊಳ್ಳಿ ಅಜ್ಜೀ." ಎಂದೆ.

ಆಕೆ ಮಲಗಿಕೊಂಡರು. ಮುಚ್ಚಂಚೆಯ ಹೊತ್ತಿಗೆ ಅವರಿಗೆ ಎಚ್ಚರವಾಯ್ತು.

ಬಾಯಾರುತ್ತಿದೆ...ನೀರು...ಎಂದು ಸನ್ನೆ ಮಾಡಿದರು. ಸ್ವಲ್ಪ ನೀರನ್ನು ಆ ಗಂಟಲಲ್ಲಿ ನಾನು ಇಳಿಬಿಟ್ಟೆ. ಗೊರಕ್ ಗೊರಕ್ ಎಂದು ಸದ್ದಾಯಿತು. ಆ ನೀರು ನಡು ಹಾದಿಯಲ್ಲೇ ನಿಂತಿತ್ತು. ಅಜ್ಜಿ ಜೀವಂತರಾಗಿರಲಿಲ್ಲ. ಅಜ್ಜಿ...ಅಜ್ಜಿ..

...ನೆರೆ ಮನೆಯವರು ನೆರವಾದರು. ಅಜ್ಜಿಯ ಜಾತಿಯವ ರನ್ನೆ ಕರೆದುಕೊಂಡು ಬಂದೆ. ಆಕೆಯನ್ನು ಸುಡುಗಾಡಿಗೆ ಒಯ್ದು ಸುಟ್ಟರು. ಆ ದೇಹ ಸುಡುತ್ತಿತ್ತೆಂದು ಖಚಿತವಾದ ಮೇಲೆ ಅವರೆಲ್ಲಾ ಹಿಂತಿರುಗಿದರು. ನಾನು ಅಲ್ಲೆ ನಿಂತೆ. ಛಟಲ್ ಛಟಲ್ ಎಂದು ಬೆಂಕಿಯೊಳಗಿಂದ ಸದ್ದಾಗುತ್ತಿತ್ತು.

ನಾನು ದೀರ್ಘಕಾಲ ಸ್ಮಶಾನ ಭೂಮಿಯಲ್ಲೆ ಕುಳಿತೆ. ನಾನು ಅಳಲಿಲ್ಲ. ಅಳಬೇಕೆಂದು ನನಗೆ ತೋಚಲಿಲ್ಲ.

ಮತ್ತೆ ದಿನಗಳು ಉರುಳಿದವು. ದಿನಗಳೊಡನೆ ನೆನಪುಗಳೂ ಕೂಡ. ಆ ಮನೆ ಭಣಗುಡುತಿತ್ತು. ಕೈಯಲ್ಲಿದ್ದ ಬೊಂಬಾಯಿ ಹಣವೆಲ್ಲಾ ಖರ್ಚಾಗುವತನಕ ಅಲ್ಲಿ ಇಲ್ಲಿ ಏನನ್ನೋ ತಿಂದು ಕುಡಿದು ದೇಹದ ಬೇಡಿಕೆಗಳನ್ನು ಪೂರೈಸುತ್ತಿದ್ದೆ.

ಭವಿಷ್ಯತ್ತಿನ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.

ಪೇಪರು ಮಾರುತ್ತಿದ್ದ ಶೇಷಗಿರಿ ಈಗ ಪತ್ರಿಕೆ ಪುಸ್ತಕಗಳ ಪುಟ್ಟ