ನನ್ನ ಧ್ವನಿ ಕಠಿಣವಾಗಿತ್ತು. ಅಧಿಕಾರಿಯ ಹುಬ್ಬು ಚಲಿಸಿದ
ಹಾಗಾಯಿತು. ಕಣ್ಣುಗಳು ಅರಳಿದವು. ಆತ ಸ್ವರ ಬದಲಿಸಿ
ನುಡಿದ:
- "ಚಂದ್ರಶೇಖರ್, ಏನೋ ಪಾಪ ಅಂತ ಇಷ್ಟು ಹೇಳಿದೆ. ಆದರೆ
ನಿನ್ನ ಎಳೆ ನಿಂಬೇಕಾಯಿತನ ನೀನು ಬಿಡೋ ಲಕ್ಷಣ ಕಾಣಿಸ್ಲಿಲ್ಲ.
ನೀನು ಏನು ಮಾಡ್ತಾ ಇದೀಯಾ ಅನ್ನೋದು ನಿನಗೆ ಗೊತ್ತಾ?"
- "ಏನು ಮಾಡ್ತಾ ಇದೀನಿ ಸಾರ್?"
- "ನಿನ್ಮೇಲೆ ಏನೇನು ಆರೋಪಗಳಿವೆ ಗೊತ್ತಾ?"
- "............"
- "ಇನ್ನೊಬ್ಬರ ಹೆಂಗಸನ್ನ ಓಡಿಸಿಕೊಂಡು ಹೋಗಿದೀಯಾ.
ಆಕೆ ಮನೆಯವರು ದೂರು ಕೊಟ್ಟಿದಾರೆ. ಅವಳು ಪತ್ತೆಯಾಗದೆ
ಹೋದರೆ ನೀನು ಬಚ್ಚಿಟ್ಟಿದೀಯಾಂತ ಇನ್ನೊಂದು ಆರೋಪ."
- ನಾನು ಮುಗುಳು ನಕ್ಕೆ. ಅಧಿಕಾರಿ ಆ ನಗುವನ್ನು ನೋಡಿದ.
ಸ್ವರ ಮತ್ತಷ್ಟು ಗಡಸಾಯಿತು.
- "ಇದೇನೋ ತಮಾಷೆ ಅಂತ ತಿಳ್ಕೊಂಡಿದ್ದೀ ಏನು? ಆರು
ಆರು ವರ್ಷ ಆಗತ್ತೆ. ಆಗ ತಿಳಿದೀತು."
- ........ನನಗೆ ಆರು ಆರು ವರ್ಷಗಳ ಶಿಕ್ಷೆಯಾಗಲಿಲ್ಲ. ಹೆಂಗ
ಸೊಬ್ಬಳನ್ನು ನಾನು ಓಡಿಸಿಕೊಂಡು ಬಂದಿದ್ದೆನೆನ್ನು ವುದಕ್ಕೆ ರುಜುವಾತೇ
ಇರಲಿಲ್ಲ. ಆ ತಾಯಿ ಯಾರ ಕಣ್ಣಿಗೊ ಬೀಳಲಿಲ್ಲ. ನ್ಯಾಯಾಸ್ಥಾನ
ದತ್ತು ಹೋಗದೆ ಪೊಲೀಸು ಅಧಿಕಾರಿ ಆ ಸಂಜೆಯೇ ನನ್ನನ್ನು ಹೊರ
ಬಿಟ್ಟ.ಕಳುಹಿಸಿಕೊಟ್ಟಾಗ ಆತನಲ್ಲಿ ವಿನಯವಿರಲಿಲ್ಲ. ಒರಟು
ಒರಟಾಗಿ ಅವನು ಹೇಳಿದ:
- "ಹುಷಾರ್! ಈ ಸಾರಿ ತಪ್ಪಿಸಿಕೊಂಡೆ. ಇನ್ನೊಮ್ಮೆ ನನ್ನ
ಕೈಗೆ ಸಿಕ್ದೇಂತಂದರೆ ಸೆಂಟ್ರಲ್ ಜೈಲಿಗೇ ರವಾನಿಸ್ತೀನಿ!"
ಮೈ ನಿಡಿದುಕೊಂಡು ನೇಳವಾಗಿ ತಲೆಯೆತ್ತಿ ನಿಶ್ಚಲವಾಗಿ ಆ
ಮಾತುಗಳನ್ನು ಕೇಳುತ್ತಿದ್ದ ನಾನು, ಮಾತು ಪೊರೈಸುವುದಕ್ಕೆ ಮುಂಚೆ
ಯೇ ಸ್ವೇಷನ್ನಿ ನಿಂದ ಹೊರಕ್ಕೆಳಿದೆ.