ಸುತ್ತಾ ಕುಳಿತೆ:"
... ಇತ್ತೀಚೆಗೆ ಇಲ್ಲಿ ಹೈದರಾಬಾದಿನ ಶ್ರೀಮಂತರೊಬ್ಬರ
ಮನೇಲಿ ಲೂಟಿ ಆದ ವಿಷಯ ನಿಮಗೆ ಗೊತ್ತಿರ್ಬೆಕು. ಪತ್ರಿಕೇಲಿ ನೀವು ವಿವರ ಓದಿರ್ಬೆಕು."
"ಓದಿರೋ ಹಾಗೆ ನೆನಪು.
"ದಟ್ಸಟ್. ನೋಡಿದಿರಾ? ನೀವು ಓದಿರ್ತಿರಿ ಅಂತ ನನಗೆ
ಗೊತ್ತಿತ್ತು.....ಅದೇ ಆ ಸಂಬಂಧದಲ್ಲಿ ನಿಮ್ಮಿಂದೇನಾದರೂ ನಮಗೆ ಸಹಾಯ_"
"ಬಹುಮಾನ ಜಾಹೀರು ಮಾಡಿದೀರ?"
"ಬಹುಮಾನ ಇದ್ದೇ ಇದೆ. ಅದಕ್ಕಿಂತಲೂ ಹೆಚ್ಚು, ನಿಮ್ಮನ್ನ
ನಮ್ಮ ಶಾಖೆಗೇ ಸೇರಿಸ್ಕೋತೀವಿ. ಪ್ರಾಯೋಗಿಕ ಜ್ಣಾನ ಇರೋರು ನಮಗೆ ಬೇಕು."
"ಏನು ನಿಮ್ಮ ಊಹೆ?"
"ಒಂದು ದೊಡ್ಡ ಗ್ಯಾಂಗೇ ಇಲ್ಲಿ ಕೆಲಸ ಮಾಡ್ಟೀರೋ ಹಾಗಿದೆ.
ಮದರಾಸಿಗೂ ಇಲ್ಲಿಗೂ ನೇರವಾದ ಸಂಬಂಧ ಇರೋ ಹಾಗಿದೆ."
"ಇಷ್ಟರಲ್ಲೇ ಏನಾದರೂ ಕಂಡು ಹಿಡಿದಿದೀರಾ?"
"ಇನ್ನೂ ಇಲ್ಲ.ಅದಕ್ಕೇ ನಿಮ್ಮಿಂದೇನಾದರೂ ಸಹಾಯ-"
ಅವನ ಮುಖಕ್ಕೆ "ಥೂ" ಎಂದು ಉಗುಳಿ ಅಲ್ಲಿಂದ ಅವನನ್ನು
ಹೊರ ಹಾಕಬೇಕು ಎಂದು ತೋರಿತು. ನಾನು ಎದ್ದು ನಿಂತೆ. ಮನಸ್ಸಿಲ್ಲದಿದ್ದರೂ ಆತನೂ ಏಳಬೇಕಾಯಿತು.
"ದಯವಿಟ್ಟು ಹೊರಹೋಗಿ.ನನಗೆ ಈ ಕೊಲೆ ದರೋಡೆ
ವಿಷಯಗಳಲ್ಲಿ ಆಸಕ್ತಿ ಇಲ್ಲ.ಶಾಂತಿಯಿಂದ ಒಂದಿಷ್ಟು ಕಾದಂಬರಿ ಗೀದಂಬರಿ ಓದೋಕೆ ಅವಕಾಶ ಕೊಡಿ."
" ಆ ಹಾ!"
"ಹೌದು;ಈಗ ಹೊರಟೋಗಿ."
ಎಲ್ಲಾ ಯತ್ನಗಳೂ ವಿಫಲವಾದುವೆಂದು ತಿಳಿದು ಆತ ಕಿಡಿಕಿಡಿ
ಯಾದ.ಜೇಬಿನಿಂದ ಕೈಬೇಡಿಗಳನ್ನು ಹೊರಗೆತೆದು,"ನೋಡಿ