ಈ ಪುಟವನ್ನು ಪ್ರಕಟಿಸಲಾಗಿದೆ

ಕೊಂಡು ನಾನೂ ನೆಟ್ಟ ದೃಷ್ಟಿಯಿಂದ ನೋಡಿದೆ. ಅದು ತಬ್ಬಿಬ್ಬಾಗಲು ಆಕೆಯ ಸರದಿ. ಆಕೆ ಮುಗುಳ್ನಕ್ಕಳು.

"ಬನ್ನಿ. ಒಳಕ್ಕೆ ಬನ್ನಿ. ಮುರಲಿ ಎಲ್ಲಿ ಸಿಕ್ದ?"

ಮುರಲಿ ಮಾತನಾಡಲು ನನಗೆ ಅವಕಶ ಕೊಡಲಿಲ್ಲ.

"ವನೂ, ಇವರಿಂದ ಎಷ್ಟೊಂದು ಉಪಕಾರವಾಯ್ತೊಂತ....

ಬಹಳ. ಒಳ್ಳೇವರು. ಅವರು ಇಲ್ಲ್ದೇ ಇದಿದ್ರೆ. ಪಾರ್ಕ್ನಲ್ಲೇ ನಾನು ಬಿದ್ದಿರ್ತಿದ್ದೆ. ಆ ಮೇಲೆ ನೀನು, ಟಾರ್ಚ್ ತಗೊಂಡು, ಹುಡುಕೋಕೆ ಬರಬೇಕಾಗ್ತಿತ್ತು."

"ಶುದ್ದ ಸಿಲ್ಲಿ!" ಎಂದಳು ವನಜ

ನನ್ನೆಡೆಗೆ ನೋಡಿ, "ಇರಿ, ಬಂದೆ" ಎನ್ನುತಾ ಆಕೆ ಒಳ

ಹೋದಳು.

ಆ ನೋಟ--

ಆಕೆ ಇಲ್ಲದ ಆ ಅವಧಿಯಲ್ಲಿ ಮುರಲಿ ಮತ್ತಷ್ಟು ಮಾಹಿತಿ

ಒದಗಿಸಿದ. ಐದು ವರ್ಷಗಳ ಹಿಂದೆ ಅವರ ತಾಯಿ ತೀರಿ ಹೋದ ವಿಷಯ ನಿಜವಾದ ಒಡತವಲ್ಲಾ ಅವನ ತಂಗಿಯದು.

"ಇನ್ನೂ ನಿಮಗೆ ವನಜಾ ಪರಿಚಯ ಸರಿಯಾಅಗಿ ಇಲ್ಲ ಮಿಸ್ಟರ್

"ರಾಧಾ ಎನ್ನಿ"

"ಸಿರಿಯಪ್ಪಾ, ಮಿಸ್ಟ್ರರ್ ರಾಧಾ."

"ಉಹೂಂ. ಬರೇ ರಾಧಾ."

"ಓ. ಕೆ.--ರಾಧಾ."

ಬೆಳ್ಳಿಯ ತಟ್ಟಿಯಲ್ಲಿ ಮಾವಿನ ಹಣ್ಣಿನ ಹೋಳುಗಳನ್ನು

ಹೊತ್ತು ವನಜ ಬಂದಳು: ಮುರಲಿಯನ್ನು ಕುರಿತು ಗದರಿಕೆಯ ಮಾತನ್ನಾಡುತ್ತಲೇ ಬಂದಳು.

"ಏನೋ ಅದು? ಅದೇನೊ ರಾಧಾ ಅಂತಿದ್ದೀಯಾಅ?"

ಮುರಲಿ ನಗುನಗುತ್ತ ಚೇತರಿಸಿ ಕೊಳ್ಳುತ್ತಿದ್ದ.