"ನಾನು ?"
"ಯಾಕೆ ? ಮಾತಾಡೋದು ಇದೇ ಮೊದಲಿನ ಸಾರಿಯೇನೂ
ಅಲ್ಲವಲ್ಲ?"
"ನಿಮ್ಮಿಷ್ಟ,"
ಸೂಜಿ ಬಿದ್ದರೂ ಸಪ್ಪಳವಾಗುವಂತಹ ನೀರವತೆಯಲ್ಲಿ ಆ ಕಂಠ
ದಿಂದ ಮಧುರವಾದ ಸ್ವರ ಹೊರಡುತಿತ್ತು. ಅರೆತೆರೆದ ಕಣ್ಣುಗಳಿಂದ, ಶ್ರೀಕಂಠ ಅವಳನ್ನೇ ನೋಡಿದ
ಕಾರ್ಯ ನಿಮಿತ್ತದಿಂದ ಶ್ರೀಕಂಠ ಮುಂಬಯಿಗೆ ಹೋದ.
ಅವನಿಲ್ಲಿದಾಗ ನಾನು ಆ ಮನೆಗೆ ಹೋಗಲು ಇಷ್ಟಪಡಲಿಲ್ಲ.... ಶ್ರೀಕಂಠನ ಹುಡುಗನನ್ನು, ಬೆಳೆಯುತಲಿದ್ದ ನಾಗರಾಜುವನ್ನು, ನೋಡದೆ ಇರುವುದು ಕಷ್ಟವಾಗಿತ್ತು. ಆದರೆ ಬೇರೆ ಹಾದಿ ಇರಲಿಲ್ಲ. ಶ್ರೀಕಂಠನಿಲ್ಲದಾಗ ಶಾರದೆಯನ್ನು ನೋಡುವ ಅಗತ್ಯ ನನಗಿರಲಿಲ್ಲ.
ಒಂದು ಮಧ್ಯಾಹ್ನ ಶ್ರೀಕಂಠನ ಮನೆಯ ಆಳು ಬಂದ-ವರ್ಷ ಗಳ ಹಿಂದೆ ಮಗು ಕಾಯಿಲೆ ಮಲಗಿದ್ದಾಗ ನಮ್ಮ ಮನೆಯಿಂದ ಶ್ರೀಕಂಠ ನನ್ನು ಕರೆದಯ್ಯಲು ಬಂದಿದ್ದನಾಗ.
"ಸ್ವಾಮಿಯೇರು ಪುರಸತ್ತು ಮಡ್ಕೊಂಡು ಬಂಧ್ಹೋಗ್ಬೇ
ಕಂತೆ."
"ಯಾಕೊ ? ಪುಟ್ಬುದ್ಢಿಯೋರಿಗೆ ಮೈ ಚೆನ್ನಾಗಿಲ್ವೇನು?"
ಚೆಂದಾಕೈತೆ........ ಪುಟ್ಬುದ್ಢಿಯೋರೂ ಸ್ವಾಮೆರ್ನ ಕೇಳ್ತಾ
ಅವ್ರೆ."
ಮನಸಿಲ್ಲಿದೆ ಇದ್ದರೂ ನಾನು ಶ್ರೀಕಂಠನ ಮನೆಗೆ ನಡೆದು
ಹೋದೆ. ತನ್ನ ಕೊಠಡಿಗೇ ಬರಹೇಳಿದಳು ಶಾರದ, ಬಾಗಿಲಲ್ಲಿ ನಾನು ನಿಂತಾಗ, ನಿಲುವುಗನ್ನದಡಿಯ ಮುಂದೆ ಕುಳಿತು ಅವಳು ಹೆರಳು ಹಾಕಿ ಕೊಳ್ಳುತಿದ್ದಳು. ಹಿಂತಿರುಗಿ ನೋಡದೆಯೇ,"ಬನ್ನಿ" ಎಂದಳು.
"ಹೊರಗೆ ಕೂತಿರ್ತೀನಿ".
"ಪರವಾಗಿಲ್ಲ. ಯಾಕೆ ಹೀಗೆ ಅಪರಿಚಿತರ ಹಾಗೆ ಮಾಡ್ತೀರಿ?"