ಈ ಪುಟವನ್ನು ಪ್ರಕಟಿಸಲಾಗಿದೆ

ಅದು ಸತ್ಯಾಂಶವೆಂಬುದು ನನಗೆ ಮನವರಿಕೆಯಯಿತು .

"ಅಂತೂ ನಾಣೀನ ನೀನು ಹೋಗದೇ ಇರ್ಲಿಲ್ಲ".

"ಕ್ಷಮಿಸು ಕಂಠಿ . ಅದೊಂದು ನನ್ನ ದೌರ್ಬಲ್ಯ ಅಂತಾನೆ ಇಟ್ಕೋ. ಹಾಗೆ ಗಾಳಿ ಸವಾರಿ ಹೋಗಿದ್ದೆ. ನಾಣಿ ಮನೆ ಸಿಗ್ತು .... ಒಂದು ನಿಮಿಷ ನಿಂತು ಬಂದೆ."

"ಆಗಲಿ ಬಿಡು."

"ಅಲ್ಲ ಏನ್ಹೇಳ್ದೆ ಐ.ಜಿ. ಪಿ. ಗೆ?".

"ನಿನ್ನ ನಾನೇ ಅಲ್ಲಿಗೆ ಕಳಿಸ್ಕೋಟ್ಟಿದ್ದು- ಅಂದೆ. ಬೇರೆ ಏನು ಹೇಳಬೇಕಾಗಿತ್ತು?"

"ಸಮಾಧಾನಕರ ಉತ್ತರ."

"ಅದ್ಸರಿಯೇ. ಅಲ್ಲಿ ಬೇರೆ ಯಾರು ಯಾರ್ನ ನೋಡ್ದೆ ಹೇಳು." "ಯಾರೂ ಬಂದಿರಲ್ಲ ಕಂಠಿ." ನನ್ನ ಮೇಲೆ ಸೂಕ್ಷ್ಮ ದೃಷ್ಠಿಯನ್ನೊಮ್ಮೆ ಬೀರಿ ಶ್ರೀಕಂಠ ಸುಮ್ಮನಾದ.

.... ಅಂತಹ ಪರೆಸ್ಥಿತಿಯಲ್ಲಿ ನಾನು, ಕೃಷ್ಣರಾಜನನ್ನು ಕಾಣಲು ನಾರಾಯಣನಲ್ಲಿಗೆ ಹೋಗುವುದು ಸಾಧ್ಯವಿರಲಿಲ್ಲ. ನಾನು ಹೋಗಲೇ ಇಲ್ಲ.

ಹೋಗಿದ್ದರೂ ನಾರಾಯಣನನ್ನು ಕಾಣುವುದಕ್ಕಾಗುತಿರಲಿಲ್ಲ. ಆ ದಿನ ಮಧ್ಯಾಹ್ನ ಬಂಧಿಸಲ್ಪಟ್ಟದ ಹಲವಾರು ಜನರೊಡನೆ ನಾರಾ ಯಣನನ್ನು ಲಾಕಪ್ಪಿಗೆ ಒಯ್ದಿದ್ದರು. ಅಲ್ಲಿಂದ ವಿಚಾರಣೆ ಇಲ್ಲದ ಸ್ಥಾನ ಬದ್ಧತೆಗಾಗಿ ಸೆರೆಮನೆಗೆ ಸಾಗಿಸಿದ್ದರು.

ಆ ಕಮಲಾ, ಪ್ರಾಯಶಃ ಆ ಅಗಲಿಕೆಯನ್ನೂ ದಿಟ್ಟತನ ದಿಂದ ಆಕೆ ಇದಿರಿಸಿದ್ದಳೇನೋ, ಇಬ್ಬರ ಪಾಲಿಗೂ ಬಾಳ್ವೆ, ಬೆವರು- ಕಣ್ಣೀರಿನ ಮಿಶ್ರಣವಾಗಿತ್ತು.

ಅಮೀರನಿಗೆ ಸಂಕಷ್ಟ ಓದಗಿದಾಗ ಶೀಲ ಅನುಭವಿಸುತಿದ್ದ ಯಾತನೆ...... ಚಲಂಗೆ ಅಪಾಯ ಓದಗಿದಾಗ ಸಾವಿತ್ರಿ ಸುರಿಸಿದ ಕಣ್ಣೀರು ..... ಅದಾದ ಮೇಲೆ ಈಗ ಕಮಲಾ ..........