ಈ ಪುಟವನ್ನು ಪ್ರಕಟಿಸಲಾಗಿದೆ

ಆಗೋದು ಖಂಡಿತ."

ಮಾಲೀಕರ ಪರವಾಗಿಯೆ ನಿಂತು ಆತ ಭಾಷಣ ಮಾಡುತ್ತಿದ್ದ ನೆಂಬುದು ನನಗೆ ಸ್ಪಷ್ಟವಾಯಿತು. ಆದರೆ ಅಷ್ಟು ಜನ ಕೆಲಸಗಾರ ರಿಗೆ ಅದೆಲ್ಲ ಅರ್ಥವಾದಂತೆ ತೋರಲಿಲ್ಲ. ಅವರು ಅವನ ಭಾಷಣಕ್ಕೆ ತಲೆದೂಗುತ್ತಿದ್ದರು.... ....

ಭಾಷಣದ ಕೊನೆಯಲ್ಲಿ ಆತ ಹೇಳಿದ:

"ನಾವೀಗ ಏನು ಮಾಡಬೇಕೋ ತಿಳೀದಾಗಿದೆ. ಹೇಗಾ ದರೂ ಮಾಡಿ, ಕೆಟ್ಟುಹೋಗಿರೋ ವಾತಾವರಣಾನ ನಾವು ಸರಿಪಡಿ ಸ್ಬೇಕು.... ಜೈಲಿನಲ್ಲಿರೋ ಮುಖಂಡರ್ನ ಬಿಡಿಸೋದು ಸಾಧ್ಯ ಆಗೋ ಹಾಗೆ ನಾವು ನಡ್ಕೋಬೇಕು."

ಸಭೆಯಲ್ಲಿದ್ದವನೊಬ್ಬ ಕೇಳಿದ:

"ಏನ್ಮಾಡ್ಬೇಕೂಂತ ನೀನು ಹೇಳೋದು?"

"ನಾವೆಲ್ಲ ವಾಪಸು ಕೆಲಸಕ್ಕೆ ಹೋಗ್ಬೇಕು... ...."

ಒಬ್ಬ ಮುದುಕ ಎದ್ದು ನಿಂತು ಕೂಗಾಡಿದ: "ಇದು ಮೋಸ. ನಾವು ಒಪ್ಕೋಬಾರ್ದು....ಕೆಲಸಕ್ಕೋದ್ಮೇಕೆ ನಮ್ಮನ್ನ ಕೇಳೋ ರಿಲ್ಲ."

ಆದರೆ ಆ ಮುದುಕನೆದುರು ಧ್ವನಿವಾಹಕ ಯಂತ್ರವಿರಲಿಲ್ಲ. ಅವನ ಮಾತು ಹಲವರಿಗೆ ಕೇಳಿಸಲಿಲ್ಲ. ಕೆಲವರು ಗಲಾಟೆ ಮಾಡಿ ಅವನನ್ನು ಹಿಡಿದು ಕುಳ್ಳಿರಿಸಿದರು.

ಶ್ರೀಕಂಠ ನಗುತ್ತ, "ಹೋಗೋಣ ಇನ್ನು. ಇಲ್ಲಿ ಎಲ್ಲವೂ ಸರಿಯಾಗಿದೆ....ಇನ್ನು ಯಾವ ಯೋಚ್ನೇನೂ ಇಲ್ಲ" ಎಂದೆ.

.... ....ಕೆಲಸಗಾರರು ಮುಂದಿನ ಎರಡು ಮೂರು ದಿನಗಳಲ್ಲಿ ಕಾರಖಾನೆಗಳಿಗೆ ಹೋದರು. ಮಾಲೀಕರೂ ಹೊರಬರಲಿಲ್ಲ. ಸುಂದರ ರಾಜನ ಗುಂಪು, ಸಂಘದ ಅಧಿಕಾರಸ್ಥಾನಕ್ಕೆ ಬಂತು. ಆಮೇಲೆ ಒಂದು ವಾರದಲ್ಲೆ ಮೂರರಲ್ಲಿ ಒಂದಂಶದಷ್ಟು ಜನ ಕೆಲಸಗಾರರು ಉದ್ಯೋಗದಿಂದ ವಜಾಮಾಡಲ್ಪಟ್ಟರು.

ಒಂದು ಕಾಲದಲ್ಲಿ ಅವರು ಸೆಟೆದು ನಿಂತಿದ್ದ ಕೂಲಿಕಾರರು. ಈಗ ‌‍