೧೦೫
ಯಶೋಧರ ಚರಿತೆ
ಅರೆಯದೆ ಗೆಯ್ದೆಂ ಕ್ಷಮೆಯೆಂ
ದೆರಗೆನೆ ನೃಪನೆಂದನಾವ ಜಾತಿಯದಾರೆ-
ದರೆಯದೆ ಮಿಂದುಂ ಮುರೆಕಿಯು-
ಮರೆಯದ ಮಣಕಿನ ಬಣಂಬೆಗಾನೆರಗುವೆನೇ 49
ಒಂದು ಮೃಗಂ ಬೀಳದು ನೋ-
ಡಿಂದಿನ ಬೇಟೆಯೊಳೆ ಸಿಂಟನಂ ಕಂಡುದರೆ-
ದೆಂದೊಡೆ ಪರದಂ ಪಾಪಂ
ಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ 50
ತನುವಾರ್ಗಮಶುಚಿ ಶುದ್ಧಾ-
ತ್ಮನೆ ಶುಚಿ ಕಾಗೆಯವೊಲೇನೊ ಮಿಂದವನೇಂ ಶು-
ದ್ಧನೆ ಸಂಸ್ಕಾರಶತೇನಾ-
ಪಿ ನ ಗೂಥಃ ಕುಂಕುಮಾಯತೇ ಎಂದರೆಯೆಯಾ 51
_____
ಸದ್ಗುಣಗಳನ್ನು ಇವರು ಪಡೆದಿದ್ದಾರೆ. 49. ‘ನಾನು ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸಬೇಕು’ ಎಂದು ಹೇಳಿ ಅವರ ಪಾದಗಳಿಗೆ ವಂದಿಸಬೇಕು ನೀವು” ಎಂದು ವರ್ತಕನು ತಿಳಿಸಿದನು. ಆಗ ಅಸರನು ಅವನು ಯಾವ ಜಾತಿಯವನು ಯಾರವನು ಎಂದು ಮುಂತಾಗಿ ತಿಳಿದುಕೊಳ್ಳದೆ, ಸ್ನಾನಮಾಡಿಯಾಗಲಿ ನೀರಲ್ಲಿ ಮುಳುಗಿಯಾಗಲಿ ಗೊತ್ತೇ ಇಲ್ಲದೆ ದುರ್ವಾಸನೆಯ ಮುದ್ದೆಗೆ ನಾನು ಮಣಿಯಬೇಕೆ? ಎಂದು ಪ್ರಶ್ನಿಸಿದನು. 50. ಇದೂ ಅಲ್ಲದೆ “ಕೆಟ್ಟನಾತವನ್ನು ಕಂಡ ಕಾರಣ ಇಂದಿನ ಬೇಟೆಯಲ್ಲಿ ಒಂದೇ ಒಂದು ಮೃಗ ಕೂಡ ಬೀಳಲಿಲ್ಲ! ಎಂದು ಧಿಕ್ಕರಿಸಿದನು. “ಸ್ವಾಮಿ ಪÀÅಣ್ಯಮೂರ್ತಿಯನ್ನು ಕಂಡರೆ ಪಾಪ ಬಂದು ಸೇರಲಾರದಲ್ಲ! ಹಾಗಾಗಿಯೆ ನಿಮಗೆ ಬೇಟೆ ದೊರೆಯಲಿಲ್ಲ’ ಎಂದು ಕಲ್ಯಾಣಮಿತ್ರನು ಸಮಾಧಾನ ಹೇಳತೊಡಗಿದನು. 51. “ದೇಹವೆಂಬುದು ಎಲ್ಲರಿಗೂ ಸದಾ ಕೊಳಕಾಗಿಯೇ ಇರುತ್ತದೆ. ಆತ್ಮನು ಮಾತ್ರ ನಿರ್ಮಲನಾಗಿರುತ್ತಾನೆ? ಕಾಗೆ ಸ್ನಾನಮಾಡಿತೆಂದು ನಿರ್ಮಲವೆನ್ನಿಸುತ್ತದೆಯೆ? ಸ್ನಾನಮಾಡಿದವರೆಲ್ಲ ಪರಿಶುದ್ದರಾಗುವರೆ? ನೂರಾರು ಸಂಸ್ಕಾರಗಳನ್ನು