Pages   (key to Page Status)   


ಪೃಥ್ವಿಯ ಮೇಲಣ ಕಲ್ಲ ತಂದು ಮತ್ರ್ಯರೆಲ್ಲರು ಪೂಜಿಸಿ ಶಿವಭಕ್ತಿಯೆಂದು ಮಾಡುತಿಪ್ಪರು ನೋಡಾ. ಕೊಟ್ಟಾತನ ಗುರುವೆಂಬರು; ಕೊಂಡಾತನ ಶಿಷ್ಯನೆಂಬರು. ಕೊಟ್ಟವ ಕೊಂಡವ ಉಭಯಮತ್ರ್ಯರೂ ಮರಣಕ್ಕೊಳಗಾಗಿ ಹೋಹಲ್ಲಿ ಪೃಥ್ವಿಯ ಕಲ್ಲು ಪೃಥ್ವಿಯಲುಳಿಯಿತ್ತು ನೋಡಾ. ಭಕ್ತಿ ಭ್ರಷ್ಟಾಗಿ ಹೋಯಿತ್ತು. ಹೀಂಗಲ್ಲ ಬಿಡಿ
ಇದು ಗುರುಶಿಷ್ಯಸಂಬಂಧವಲ್ಲ. ಅರುಹು ಸಹಿತವಾಗಿ ಗುರುವೆಂದೆಂಬೆ; ಆಚಾರಸಹಿತವಾಗಿ ಗುರುವೆಂದೆಂಬೆ; ನಿಷೆ* ಸಹಿತವಾಗಿ ಲಿಂಗವೆಂದೆಂಬೆ; ಇದು ಪರಮಸೌಖ್ಯ; ಪರಮ ಭಕ್ತಿಯ ಪರಿಣಾಮವು. ಉಳಿದವೆಲ್ಲ ಭ್ರಷ್ಟು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.