Pages   (key to Page Status)   

ಬಿಡು ಬಿಡು ಸಂಗವ
ಸುಡುಸುಡು ವಿಷಯವ
ಎನ್ನೊಡೆಯರು ಬಾಗಿಲಿಗೆ ಬಂದರು
ತಡೆಯದಿರಾ ಮರುಳೆ. ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ
ಇದಕ್ಕೆ ಹಿಡಿಯದಿರು ಸೆರಗನು. ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕ ನರಕ.