ಭವತೀ ಕಾತ್ಯಾಯನೀ/೩೯ನೆಯ ಗ್ರಂಥ/೪ ನೆಯ ಪ್ರಕರಣ



--೧೬--

ಮನಸ್ಸು ಯಾವ ಪದಾರ್ಥಗಳ ಎಷ್ಟೆಷ್ಟು, ಅಂಶಗಳನ್ನು ಕೂಡಿಕೊಂಡು ಪರಿಪೋಷ ವನ್ನು ಹೊಂದಿ ಕೆಲಸಮಾಡಲಿಕ್ಕೆ ಸಮರ್ಥವಾಗುತ್ತದೆಂಬದನ್ನು ಹೇಳಲಿಕ್ಕೆ ಬೇಕಾಗು ತ್ತದೆ. ಈ ಸಂಬಂಧದಿಂದ ಛಾಂದೋಗ್ಯೋಪನಿಷತ್ತಿನಲ್ಲಿ ಹೇಳಿದ್ದೇನಂದರೆ-

" ಅನ್ನಮಶಿತಂ ತ್ರೇಧಾವಿಧೀಯತೇ” ನಾವು ತಿಂದ ಅನ್ನದೊಳಗೆ ಮೂರುಭಾಗ ಗಳಾಗುತ್ತವೆ. ಒಂದು ಸ್ಥೂಲಭಾಗವು ಮಲವಾಗಿ ಹೋಗುತ್ತದೆ. ಮತ್ತೊಂದು ಮಧ್ಯಮಭಾಗವು ಮಾಂಸವಾಗುತ್ತದೆ, ಮೂರನೆಯ ಸೂಕ್ಷ್ಮ ಭಾಗವೇ ಮನಸ್ಸಾಗುತ್ತದೆ. ಇದೇ ಮೇರೆಗೆ ನಾವು ಕುಡಿದ ನೀರೊಳಗಾದರೂ ಮೂರುಭಾಗಗಳಾಗಿ, ಮೊದಲನೆಯ ಸ್ಥೂಲಭಾಗವು ಮೂತ್ರವೂ. ನಡುವಿನ ಮಧ್ಯಮಭಾಗವು ರಕ್ತವೂ, ಮೂರನೆಯ ನ್ಸೂಕ್ಷ್ಮಭಾಗವು ಪ್ರಾಣವೂ ಆಗುತ್ತವೆ. ಇದರಂತೆ ನಾವು ತಿನ್ನುವ ತೇಜಸ್ಸಿನೊಳಗೆ ಮೂರು ಭಾಗಗಳಾಗಿ, ಮೊದಲನೆಯ ಸ್ಥೂಲಭಾಗವು ಎಲವೂ, ಎರಡನೆಯ ಮಧ್ಯಮ ಭಾಗವು ಮಜ್ಜೆ (ಎಲವಿನೊಳಗಿನ ರಸ) ಯೂ, ಮೂರನೆಯ ಸೂಕ್ಷ್ಮ ಭಾಗವು ವಾಣಿಯೂ ಆಗುತ್ತವೆ. ತೇಜಸ್ಸೆಂದರೆ ಘೃತ-ತೈಲ ಮುಂತಾದ ಸ್ನಿಗ್ಧವಸ್ತುವು, ಸೂರ್ಯ- ಚಂದ್ರ-ಅಗ್ನಿ ಮುಂತಾದವಲ್ಲ. ಈ ಸ್ನಿಗ್ಧ ಪದಾರ್ಥಗಳನ್ನು ಯಾವಾಗಲೂ ಉಪ ಯೋಗಿಸುವ ಜನರ ದೇಹದಲ್ಲಿ ಇವು ವಿಲಕ್ಷಣವಾದ ಪ್ರಕಾಶವನ್ನುಂಟುಮಾಡುತ್ತಿರುವದ ರಿಂದ, ಇವಕ್ಕೆ ತೇಜಸ್ಸೆಂಬ ಹೆಸರನ್ನು ನಮ್ಮ ಪ್ರಾಚೀನರು ಇಟ್ಟಿರುತ್ತಾರೆ. ಮತ್ತು "ಜ್ಯೋತಿಶ್ಚರಣಾಭಿಧಾನಾತ್ ” ಎಂಬ ಬ್ರಹ್ಮಸೂತ್ರದ ಭಾಷ್ಯದಲ್ಲಿ "ಮನೋಜ್ಯೋತಿ ರ್ಜುಷತಾಮಾಜ್ಯಂ" ಎಂಬ ವೇದವಾಕ್ಯವನ್ನು ಹಿಡಿದು ಅರ್ಥ ಮಾಡುವಾಗ ತುಪ್ಪ ವನ್ನು ತಿನ್ನುವವರ ಮನಸ್ಸು ಜ್ಯೋತಿರೂಪವಾಗುತ್ತದೆ; ಅಂದರೆ ಜ್ಯೋತಿಸ್ಸಿನಂತೆ ಬಹು ಪದಾರ್ಥಗಳನ್ನು ಪ್ರಕಾಶಿಸುತ್ತದೆ. ಎಂದು ಹೇಳಿರುತ್ತಾರೆ. ಹೀಗಿದ್ದ ಮೂಲಕ ವಾಗಿಯೇ ನಮ್ಮ ಪೂರ್ವಜರು ಹವ್ಯ-ಕವ್ಯ ಮುಂತಾದ ಕರ್ಮಗಳಲ್ಲಿಯೂ, ಹೋಮ ಹವನಾದಿ ಕರ್ಮಗಳಲ್ಲಿಯೂ ಭೋಜನ- ಪ್ರತಿಭೋಜನಗಳಲ್ಲಿಯೂ, ದೇವರದೀಪಗಳ ಲ್ಲಿಯೂ ತುಪ್ಪಕ್ಕೆ ಪ್ರಾಧಾನ್ಯವನ್ನು ಕೊಟ್ಟಿರುವರು. ತುಪ್ಪವಿಲ್ಲದ ಹೊರತು ಬ್ರಾಹ್ಮಣರ ಕ ಮ ೯ ವೇ ಸಾಗುವಂತಿಲ್ಲ. ಈ ಪ್ರಕಾರವಾಗಿ ಅನ್ನದಿಂದ ಮನಸ್ಸೂ , ನೀರಿನಿಂದ ಪ್ರಾಣವೂ, ತೇಜಸ್ಸಿನಿಂದ ವಾಣಿಯೂ ಹುಟ್ಟುತ್ತವೆ. ಒಂದು ದೊಡ್ಡ ಪಾತ್ರೆಯಲ್ಲಿ ಮೊಸರು ಹಾಕಿ ಕಡಗೋಲಿನಿಂದ ಕಡೆಯಹತ್ತಿದರೆ, ಮೇಲಕ್ಕೆ ಬೆಣ್ಣೆಯು ಬರುವದಷ್ಟೆ, ಆ ಬೆಣ್ಣೆಯನ್ನು ಕಾಸಿದರೆ ತುಪ್ಪವಾಗುತ್ತದೆ. ಇದರಲ್ಲಿ ಸ್ಥೂಲಭಾಗವು ಮಜ್ಜಿಗೆ, ಮಧ್ಯಮಭಾಗವು ಬೆಣ್ಣೆಯು, ಸೂಕ್ಷ್ಮ ಭಾಗವೇತುಪ್ಪವು. ಇದರಂತೆ ಮನಸ್ಸು ಮುಂತಾದ್ದ ರಲ್ಲಿಯೂ ಅನ್ನಪಾನಾದಿಗಳ ಮೂರುಭಾಗಗಳ ಸಂಬಂಧದಿಂದ ತಿಳಿದುಕೊಳ್ಳಬೇಕು.

ಮೂಲತಃ ಮನಸ್ಸು ಅಣುಮಾತ್ರವಾಗಿರುತ್ತದೆ. ಹದಿನೈದು ದಿನಗಳವರೆಗೆ ತಿಂದಅನ್ನದಿಂದ ಅದಕ್ಕೆ ಹದಿನೈದು ಅಂಶಗಳು ಕೂಡಿಕೊಳ್ಳುತ್ತವೆ. ಆಗ ಮನಸ್ಸು ಷೋಡಶಕಲಾತ್ಮಕವಾಗಿ ವ್ಯವಹಾರಚತುರವೂ ಕಾರ್ಯಕರಣಸಮರ್ಥವೂ ಆಗುತ್ತದೆ. ನಾವು ಹದಿನೈದು ದಿವಸಗಳವರೆಗೆ ಅನ್ನವನ್ನು ಮುಟ್ಟದೆ ಕೇವಲ ನೀರನ್ನೇ ಕುಡಿದು 

--೧೭--

ಕೊಂಡಿದ್ದರೆ, ಪ್ರಾಣವೇನೂ ಹೋಗುವದಿಲ್ಲ. ಮನಸ್ಸುಮಾತ್ರ ಕ್ಷೀಣವಾಗಿಹೋಗುತ್ತದೆ. ಆಗ ನಾವು ಕಲಿತದ್ದೂ ಕೂಡ ಮರೆತಂತಾಗಿ ಯಾವದೂ ನೆನಪಿಗೆ ಬರುವದಿಲ್ಲ. ಇದು ಅನುಭವದ ಮಾತೇಸರಿ. ನಿರಾಹಾರ ಮಾಡಿದ ಮನುಷ್ಯನಿಗೆ ಯಾವದೂ ಬೇಡಾಗು ತ್ತದೆಂಬುವದು ಸ್ಪಷ್ಟವಿರುವದು. ಬಹುದಿವಸ ನಿರಾಹಾರ ಮಾಡಿದ ಮನುಷ್ಯನು ಮತ್ತೆ ಅನ್ನವನ್ನು ಉಣ ಹತ್ತಿದರೆ ಒಂದೊಂದುದಿವಸದ ಅನ್ನದಿಂದ ಒಂದೊಂದು ಅಂಶದಂತೆ ಹದಿನೈದು ದಿವಸಗಳಲ್ಲಿ ಹದಿನೈದು ಅಂಶಗಳು ಕೂಡಿಕೊಳ್ಳಲಾಗಿ , ಮನಸ್ಸುಪರಿಪೋಷ ವನ್ನು ಹೊಂದಿ ಷೋಡಶಕಲಾತ್ಮಕವಾದ ಕೂಡಲೆ ಮೊದಲಿನಂತೆ ಕಲಿತ ವಿಷಯಗಳೆಲ್ಲ ನೆನಪಿಗೆ ಬರುತ್ತವೆ . ಒಂದು ಬೆಂಕಿಯ ಕಿಡಿಯು ಇರುತ್ತದೆಂದು ತಿಳಿಯೋಣ. ಇದ ರಲ್ಲಿ ದಹನಶಕ್ತಿಯಿದ್ದರೂ ಅಷ್ಟು ವ್ಯಕ್ತವಾಗಿರುವದಿಲ್ಲ. ಅದನ್ನು ಮುಟ್ಟಿದರೆ ಬಹಳ ಸುಡುವದಿಲ್ಲ. ಆದರೆ ಇದಕ್ಕೆ ಒಣತರಗುಗಳನ್ನೂ, ಒಣಹುಲ್ಲನ್ನೂ ಕೂಡಿಸಿ ಗಾಳಿ ಹಾಕಿ ಹೊತ್ತಿಸಿದರೆ ಈ ಸಣ್ಣ ಬೆಂಕಿಯ ಕಿಡಿಯು ಪರಿಪುಷ್ಟವಾಗಿ ಊರಿಗೆ ಊರನ್ನೇ ಸುಡಬಹುದು. ಇದೇ ಮೇರೆಗೆ ಮನಸ್ಸಾದರೂ ಪರಿಪುಷ್ಟವಾಯಿತೆಂದರೆ ಸಕಲವನ್ನೂ ಗ್ರಹಿಸುವ ಸಾಮರ್ಥ್ಯವನ್ನು ಹೊಂದುತ್ತದೆ .

ಈ ಪ್ರಕಾರವಾಗಿ ಮನಸ್ಸು ಅನ್ನಜನ್ಯವೆಂದು ಸಿದ್ದವಾದಬಳಿಕ, ಅದರ ಶುದ್ದಿ

ಯಾದರೂ ಅನ್ನದಿಂದಲೇ ಆಗುತ್ತದೆಂದು ಸಿದ್ದವಾಗುತ್ತದೆ . ಅನ್ನದಲ್ಲಿ ಸಾತ್ವಿಕ,ರಾಜಸ, ತಾಮಸವೆಂದು ಮೂರು ವರ್ಗಗಳಿರುತ್ತವೆ. ಇವುಗಳಲ್ಲಿ ರಾಸಜ-ತಾಮಸಗಳನ್ನು ಬಿಟ್ಟು ಸಾತ್ಬಿಕಾನ್ನವನ್ನೇ ಸ್ವೀಕರಿಸಿ ಮನಸ್ಸಿನ ಪೋಷಣವನ್ನು ಮಾಡಬೇಕು. ಈ ಸಾತ್ವಿಕಾನ್ನದಿಂದ ಸುಶಿಕ್ಷಿತವಾದ ಮನಸ್ಸು ಸಿದ್ದವಾಗುತ್ತದೆ . ಮನಸ್ಸು ಸುಪರಿ ಶುದ್ಧವಾಗಬೇಕಾದರೆ ಯೋಗ್ಯವಾದ ಆಹಾರವನ್ನು ಕೊಡಬೇಕೆಂದು ಛಾಂದೋಗ್ಯದಲ್ಲಿ ಸನತ್ಕುಮಾರ ನಾರದರ ಸಂವಾದದ ಪ್ರಕರಣದಲ್ಲಿ ನಿರೂಪಿಸಲ್ಪಟ್ಟಿದೆ. "ಆಹಾರ ಶುಧ್ಯಾ ಸತ್ವಶುದ್ಧಿಃ ಸತ್ವಶುದ್ದೌ ಧ್ರುವಾಸ್ಮೃತಿಃ ಸ್ಮತಿಲಂಬೇ ಸರ್ವಹೃದಯಗ್ರಂ ಥೀನಾಂ ವಿಪ್ರಮೋಕ್ಷಃ” ಆಹಾರಗಳು ಶುದ್ಧವಾಗೋಣದರಿಂದ ಅಂತಃಕರಣವು ಶುದ್ದ ವಾಗುತ್ತದೆ. ಅಂತಃಕರಣವು ಶುದ್ಧವಾದಮೇಲೆ ನಿಶ್ಚಲವಾದ ಪರಮೇಶ್ವರನ ಸ್ಮರ ಣವು ಹುಟ್ಟುತ್ತದೆ. ಇಂಥ ಸ್ಮರಣದಿಂದ ಮನಸ್ಸಿನ ಗ್ರಂಥಿಗಳು, ಅಂದರೆ ಹೆಂಡಿರು. ಮಕ್ಕಳು ಮುಂತಾದ ವಸ್ತುಗಳಮೇಲಿನ ಸ್ನೇಹದ ಗ್ರಂಥಿಗಳು ದೂರವಾಗುತ್ತವೆ. ಎಂದು ಅಲ್ಲಿ ಹೇಳಿರುತ್ತದೆ.

ಇನ್ನು, ಆಹಾರವೆಂದರೇನು ? ಅನ್ನವೆಂದರೇನು ? ಎಂಬವನ್ನು ವಿಚಾರಿಸುವಾ.

“ಆಹ್ರಿಯಂತಇತ್ಯಾಹಾರಾಃ” ಅಂದರೆ ಪಂಚಜ್ಞಾನೇಂದ್ರಿಯಗಳು ಸೇವಿಸುವ ಶಬ್ದ ಸ್ಪರ್ಶ ಮುಂತಾದ ವಿಷಯಗಳು ಆಹಾರಗಳೆನಿಸುವವು. "ಅದ್ಯತಇತ್ಯನ್ನಂ ” ಅಂದರೆ, ನಾವು ತಿನ್ನುವ ಧಾನ್ಯ.ಫಲ-ಶಾಕ ಮುಂತಾದವುಗಳು ಅನ್ಮಗಳೆನಿಸುವವು .

ಆಹಾರಗಳಲ್ಲಿ ರಾಜಸ.ತಾಮಸಗಳನ್ನು ಬಿಟ್ಟು ಯಾವಾಗಲೂ ಸಾತ್ವಿಕವಾದ

ವನ್ನೇಗಹಿಸುತ ಹೋಗಬೇಕು; ಅಂದರೆ, ಸಾತ್ವಿಕರೂಪವನ್ನೂ, ಸಾತ್ವಿಕರಸವನ್ನೂ,

-೧೮-

ಸಾತ್ವಿಕಗಂಧವನ್ನೂ, ಸಾತ್ವಿಕ ಸ್ಪರ್ಶ ವನ್ನೂ, ಸಾತ್ವಿಕ ಶಬ್ದವನ್ನೂ ಸೇವಿಸುತ್ತಿರಬೇಕು.ಈ ಸಾತ್ವಿಕ ಪದಾರ್ಥಗಳ ಸೇವನದಿಂದ ನಿಶ್ಚಯವಾಗಿ ಸತ್ವಗುಣದ ಪೋಷಣವಾಗಿ,ಅಂತ:ಕರಣವು ಶುದ್ಧವಾಗುತ್ತದೆ ಅಂತ:ಕರಣ ಶುದ್ದಿಯೆಂದರೆ- ರಜಸ್ತಮೋಗುಣಗಳ ಅವನತಿಪೂರ್ವಕವಾಗಿ ಸತ್ವವಿಜೃಂಭಣವು. ಅರ್ಥಾತ್ ಸತ್ವವಿಜೃಂಭಣವಾದರೆ ರಜಸ್ತಮೋಗುಣಗಳ ಅವನತಿಯಾಗುತ್ತದೆ ಸತ್ವವಿಜೃಂಭಣವಾದಾಗ ರಜೋಗುಣವು ಕಾರ್ಯಪ್ರವೃತ್ತಿಯನ್ನೂ, ತಮೋಗುಣವು ಅಜ್ಞಾನವಿಲಾಸವನ್ನೂ ಮಾಡುವದಿಲ್ಲ.ಕೇವಲ ಸತ್ವಕ್ಕೆ ಪ್ರೋತ್ಸಾಹನವಾಗುತ್ತಿರುವದರಿಂದ ಅದರ ಕಾರ್ಯವೆನಿಸುವ ಜ್ಞಾನವೂ, ಸುಖವೂ ತಪ್ಪದ ಆಗುತ್ತವೆ. ಹೀಗಾಗಹತ್ತಿದರೆ ಅಂತಃಕರಣಶುದ್ಧಿಯಾಯಿತೆಂದು ಭಾವಿಸಬೇಕು, ಯಾವಾಗಲೂ ಸಾತ್ವಿಕವಾದ ರೂಪ, ರಸ, ಮುಂತಾದ ಪದಾರ್ಥಗಳ ಸೇವನದಿಂದ ನಮ್ಮ ಅಂತಃಕರಣಕ್ಕೊಂದು ವಿಲಕ್ಷಣವಾದ ಪ್ರಕಾಶ ಸಾಮರ್ಥ್ಯವುಂಟಾಗುತ್ತದೆ ಅದರಿಂದ ಆ ಮನಸ್ಸು ಅತಿಸೂಕ್ಷ್ಮವಾದ ವಸ್ತುವನ್ನೂ, ಅತಿಗಹನವೆನಿಸುವ ವಿಷಯವನ್ನೂ ಸಹ ಹಿಡಿಯುತ್ತದೆ. ಆದ್ದರಿಂದ ಯಾವಜನರು ಕೇವಲ ರಾಜಸತಾಮಸರಾಗಿ ಸತ್ವಹೀನರಾಗಿರುವರೋ ಅಂಥವರ ದರ್ಶನವನ್ನೂ, ಸ್ಪರ್ಶವನ್ನೂ, ಅವರ ಶಬ್ದಶ್ರವಣವನ್ನೂ, ಅವರಗೂಡ ಗ್ವ್ಯವಹಾರವನ್ನೂ, ಹೆಚ್ಚು ಹೇಳುವದೇನು ಅವರ ಮೈಗೆ ತಗಲಿಬಂದ ಗಾಳಿಯನ್ನೂಕೂಡ ಬಿಡಬೇಕು. ಕದಾಚಿತ್ ಅವನ್ನು ಸೇವಿಸ ಹತ್ತಿದರೆ ನಾವು ಎಷ್ಟು ಸಾತ್ವಿಕ ಪದಾರ್ಥಗಳನ್ನು ಉಪಯೋಗಿಸುತ್ತಿದ್ದರೂ, ನಮ್ಮ ಸತ್ವಹಾನಿಯಾಗತಕ್ಕ ಸಂಭವವಿರುತ್ತದೆ. ಇನ್ನು ರಾಜಸ-ತಾಮಸ ಜನರಗೂಡ ಸರ್ವಥಾ ವ್ಯವಹಾರವನ್ನು ಬಿಡುವದು ನಮ್ಮ ಪ್ರಾಪಂಚಿಕರಿಗೆ ಶಕ್ಯವಲ್ಲ, ಯಾವಜನರು ಸರ್ವಸಂಗ ಪರಿತ್ಯಾಗಮಾಡಿ ಅರಣ್ಯವನ್ನು ಸೇರಿಕೊಂಡು ತಪೋನಿಷ್ಠರಾಗಿರುವರೋ, ಅಂಥವರು ಈ ಕೆಲಸವನ್ನು ಮಾಡಬಹುದು. ಅದರೆ ನಾವು ನಮ್ಮ ಸತ್ವವೃತ್ತಿಯನ್ನು ಕಾಯ್ದು ಕೊಂಡು ಕಾರ್ಯಪರತ್ವದಿಂದ ರಾಜಸ-ತಾಮಸರಗೂಡ ವ್ಯವಹಾರವನ್ನಿಡಬೇಕು; ಆದರೆ ಅವರೂ ಕೂಡ ನಮ್ಮ ಪ್ರಜ್ವಲಸತ್ವವನ್ನು ನೋಡಿ ನಮ್ಮ ಗೂಡ ಸಾತ್ವಿಕ ವ್ಯವಹಾರ ವಿಡುವಂತೆ ನಾವು ನಡೆದುಕೊಳ್ಳಬೇಕು. ಇದರಿಂದ ಅವರಿಗೂ ಸಾತ್ವಿಕವ್ಯವಹಾರದ ಚಟ ಯುಬಿದ್ದು, ಕ್ರಮದಿಂದ ಅವರ ವೃತ್ತಿಯೂ ತಿದ್ದುವದು. ಇನ್ನು ಪಂಚೇಂದ್ರಿಯಗಳ ಆಹಾರಗಳ ದಿಗ್ದರ್ಶನವನ್ನು ಸಾಮಾನ್ಯವಾಗಿ ಮಾಡುವಾ:-

೧ ನೇತ್ರೇಂದ್ರಿಯ ವಿಷಯಗಳಾದ ರೂಪಗಳು- ಗೋಮುಂತಾದ ಪ್ರಾಣಿಗಳ

ರೂಪವೂ, ಸತ್ಪುರುಷರರೂಪವೂ, ದೇವರಪ್ರತಿಮೆಗಳರೂಪವೂ, ಇವೇ ಮುಂತಾದ ಭಕ್ತಿ ಜನಕ ರೂಪಗಳು ಸಾತ್ವಿಕರೂಪಗಳು. ಕಾಮಜನಕವಾದ ಸ್ತ್ರೀ ಮುಂತಾದವಸ್ತುಗಳ ರೂಪಗಳು ರಾಜಸಗಳು. ಅಜ್ಞಾನಜನಕಪಾದಮದ್ಯ ಮುಂತಾದ ವಸ್ತುಗಳರೂಪಗಳು ತಾಮಸಗಳು

೨ ರಸನೇಂದ್ರಿಯದ ವಿಷಯಗಳಾದ ರಸಗಳು- ಸಾತ್ವಿಕ ಪದಾರ್ಥಗಳಲ್ಲಿಯ

ರಸಗಳು ಸಾತ್ವಿಕರಸಗಳು, ವೃಂತಾಕ-ಪಲಾಂಡು೦ಶುನ ಮುಂತಾದ ವಸ್ತುಗಳಲ್ಲಿಯ ರಸವು ರಾಜಸಗಳು. ಮದ್ಯ ಮುಂತಾದ ಮಾದಕವಸ್ತುಗಳಲ್ಲಿಯ ರಸಗಳು ತಾಮಸಗಳು. 

-೧೯-

೩ ರಸನೇಂದ್ರಿಯದ ವಿಷಯಗಳಾದ ಗಂಧಗಳು- ದೇವರಲ್ಲಿ ಅರ್ಪಿಸಿ ಪ್ರಸಾದ

ರೂಪವಾಗಿ ತಕ್ಕೊಂಡ ಪುಷ್ಪ ಮುಂತಾದ ಪದಾರ್ಥಗಳಲ್ಲಿಯ ಸುಗಂಧವು ಸಾತ್ವಿಕವು. ಸ್ತ್ರೀಯರು ತಲೆಯಲ್ಲಿ ಮುಡಿದ ಪುಷ್ಪಗಂಧವು ರಾಜಸವು. ಮದಜನಕವಾದ ಮದ್ಯ ಮುಂತಾದ ವಸ್ತುಗಳ ಗಂಧವು ತಾಮಸವು.

೪ ಸ್ಪರ್ಶೇಂದ್ರಿಯದ ವಿಷಯಗಳಾದ ಸ್ಪರ್ಶಗಳು.ಗೋ ಮುಂತಾದ ಸಾತ್ವಿಕ.

ವಸ್ತುಗಳ ಸ್ಪರ್ಶವು ಸಾತ್ವಿಕವು, ಸ್ತ್ರೀ ಮುಂತಾದ ವಸ್ತುಗಳ ಸ್ಪರ್ಶವು ರಾಜಸವು, ಮದ್ಯ ಮುಂತಾದ ಮಾದಕವಸ್ತುಗಳ ಸ್ಪರ್ಶವು ತಾಮಸವು.

೫ ಶೋತ್ರೇಂದ್ರಿಯದ ವಿಷಯಗಳಾದ ಶ್ರವಣಗಳು- ಶ್ರುತಿ-ಸ್ಮೃತಿ-ಪುರಾಣ

ಇತಿಹಾಸಗಳೂ, ಸತ್ಪುರುಷರ ಚರಿತ್ರೆಗಳೂ, ಸತ್ಪುರುಷರ ಬೋಧಪ್ರದ ಉಪದೇಶ ವಾಕ್ಯಗಳೂ, ಸಾತ್ವಿಕಗಳು. ಕೇವಲ ಕಾಮಜನಕವಾದ ಸ್ತ್ರೀ-ಪ್ರರುಷರ ಸಂಸರ್ಗದ ಪ್ರಸಂಗಗಳ ವರ್ಣನಗಳು ರಾಜಸಗಳು. ಮದಜನಕ ವಸ್ತುಗಳ ವರ್ಣನಗಳು ತಾಮಸಗಳು.

ಇವನ್ನೆಲ್ಲ ವಿಚಾರಿಸಿಕೊಂಡು ಸೂಕ್ಷ್ಮರೀತಿಯಾಗಿ ನಮ್ಮಲ್ಲಿ ಸತ್ವಾಭಿವೃದ್ಧಯಾಗು

ವಂತೆ ಯತ ಮಾಡತಕ್ಕದು ನಮ್ಮ ಪವಿತ್ರ ಕರ್ತವ್ಯವಾಗಿದೆ. ಇನ್ನು ಅನ್ನಗಳ ಸಂಬಂಧ ದಿಂದ ವಿಚಾರಮಾಡೋಣ.

ನಾವು ತಿನ್ನುವ ಅನ್ನದಲ್ಲಿ ಸಾತ್ವಿಕ, ರಾಜಸ, ತಾಮಸಗಳೆಂದು ಮೂರುವರ್ಗ

ಗಳನ್ನು ಮಾಡಿರುವೆವಷ್ಟೇ! ಇವೇ ಸಾತ್ವಿಕಗಳೆಂದು ಶಾಸ್ತ್ರಕಾರರುನಿರ್ಣಯಿಸಿದ ಪದಾರ್ಥಗಳಲ್ಲಿ ೧ ಧಾನ್ಯ, ೨ ಫಲ, ೩ ಶಾಕ, ೪ ಸ್ನೇಹ, ಇತರಪದಾರ್ಥಗಳು ಎಂದು ಐದು ಭಾಗಗಳನ್ನು ಮಾಡಿ, ಇವುಗಳ ಪಟ್ಟಿಯನ್ನು ಮುಂದೆ ಕೊಟ್ಟಿರುತ್ತದೆ. ಇವುಗಳನ್ನು ಪಯೋಗಿಸುತ್ತ ವಿಷಯಗಳ ಶುದ್ದಿಯನ್ನಿಟ್ಟುಕೊಳ್ಳಬೇಕು. ಇನ್ನೂ ಹೆಚ್ಚಿನ ಪದಾರ್ಥಗಳನ್ನು ಸಾತ್ವಿಕನಸುಗಳಲ್ಲಿ ಗ್ರಂಥಕಾರರು ಹಿಡಿದಿರುತ್ತಾರೆ; ಆದರೆ ಆ ಪದಾರ್ಥಗಳು ಅಪ್ರಸಿದ ವಿರುವದರಿಂದ ನಾವು ಹೇಳಲಿಲ್ಲ. ನಾವು ಹೇಳಿದ ಪದಾರ್ಥಗಳಿಗಿಂತ ಹೆಚ್ಚು ಪದಾರ್ಥಗಳನ್ನು ಶಾಸ್ತ್ರಾಧಾರದಿಂದಲೂ, ಸತ್ಪುರುಷರ ಮುಖದಿಂದಲೂ ತಿಳಿದು ಸಾತ್ವಿ ಕವೆಂದು ನಿಶ್ಚಯವಾದಲ್ಲಿ ಉಪಯೋಗಿಸಿಕೊಳ್ಳಬಹುದು . ತಿನ್ನುವಪದಾಥರ್ಗಳಲ್ಲಿ ಯಾವದೇ ಪದಾರ್ಥವನ್ನಾಗಲಿ ಒಂದೆರಡುದಿವಸ ಉಪಯೋಗಿಸಿದರೆ ಅದರ ಗುಣ- ದೋಷಜ್ಞಾನವಾಗುವದಿಲ್ಲ. ನಾವು ಸಾತಿ ಕನಸುಗಳನ್ನು ಪ್ರಯೋಗಿಸಿ ಮಾಡಿಕೊಂಡ ಸತ್ವಾಭಿವೃದಿಯ ಬೆಳಕು ನಮ್ಮ ಆತ್ಮರೂಪರಾದ ಮುಂದಿನ ಸಂತತಿಯವರ ಮೇಲೆ ಬಹಳ ಬೀಳುತ್ತದೆ. ಆದ್ದರಿಂದ ಅವರು ನಮಗಿಂತಲೂ ಸಾತ್ವಿಕರಾಗಿ ತೇಜಸ್ವಿಗಳೂ, ಕಾರ್ಯ ಕ್ಷಮರೂ ಆಗುತ್ತಾರೆ. ಹೇಗೆ ಹೇಗೆ ನಮ್ಮ ಸಂತತಿಯವರು ಸತ್ವಾಭಿವೃದಿಯನ್ನು ಹೊಂದಿ ಕಾರ್ಯಕ್ಷಮರಾಗುತ್ತ ಹೋಗುವರೋ ? ಹಾಗೆ ಹಾಗೆ ನಮಗೆ ಇಹ-ಪರಗಳೆ ರಡೂ ಸಾಧಿಸುತ್ತ ಹೋಗುತ ವೆಂಬುವದೇ ಶಾಸ್ತ್ರೀಯಸಿದಾ೦ತವೂ, ಸತ್ಪುರುಷರ

ಬೋಧದಫಲಿತವೂ, ವೇದ-ಶಾಸ್ತ್ರಾಧ್ಯಯನದ ಪ್ರಯೋಜನವೂ, ಪುರಾಣೇತಿಹಾಸಗಳ 

-೩೦-

ಶ್ರವಣದಸಾರವೂ ಆಗಿರುತ್ತದೆ. ಇನ್ನು ಕೆಳಗೆ ಕೊಟ್ಟಿರುವ ಸಾಕಾಹಾರಗಳ ಪಟಿಯನ್ನು ವಾಚಕರು ಅವಲೋಕಿಸಿ, ಅವನ್ನು ಗ್ರಹಿಸುತ್ತ ಚಿತ್ತಶುದ್ಧಿಯನ್ನು ಪಡೆಯತಕ್ಕದ್ದು.

ಸಾತ್ವಿಕಾಹಾರಗಳ ಪಟ್ಟಿಯು-

೧ ಧಾನ್ಯಗಳು- ೧ ನೆಲ್ಲಕ್ಕಿ, ೨ ಜವೆಗೋದಿ, ೩ ಗೋದಿ, ೪ ಎಳ್ಳು, ೫ ಉದ್ದು,

೬ ಸಾವಿ. ೭ ನವಣಿ, ೮ ಹೆಸರು, ೯ ಸಾಸಿವಿ, ೧೦ ಕಡಲಿ (ವಿಕಲ್ಪ), ೧೧ ಜೋಳ(ವಿಕಲ್ಪ),೧೨ ಅವರಿ, ೧೩ ಬಟ್ಟಗಡಲೆ, ೧೪ ಬುಯಿಮೂಗು ಇತ್ಯಾದಿ.

೨ ಫಲಗಳು-೧ ಬಾಳೇಹಣ್ಣು,೨ ಮಾವಿನಹಣ್ಣು, ೩ ಹಲಸು, ೪ ಬೋರೆಹಣ್ಣು ,

೫ ನೇರಲಹಣ್ಣು, ೬ ಖರ್ಜೂರ, ೭ ಹುಣಸೇಹಣ್ಣು. ೮ ದ್ರಾಕ್ಷಿ, ೯ ದಾಳಿಂಬ, ೧೦ ಅಕ್ರೋಡದಹಣ್ಣು , ೧೧ ಕರಬೂಜಿಹಣ್ಣು, ೧೨ ತೆಂಗಿನಕಾಯಿ, ೧೩ ಲಿಂಬಿಯಹಣ್ಣು(ವಿಕಲ್ಪ)

೩ ಶಾಕಗಳು- ೧ಚವಳಿ, ೨ ಸೂರಣಗಡ್ಡಿ, ೩ ಸವತೀಕಾಯಿ, ೪ ಹೀರೇಕಾಯಿ,೫ ಕೊತ್ತುಂಬರಿ, ೬ ಪಡವಲಕಾಯಿ, ೭ ನೆಲ್ಲೀಕಾಯಿ, ೮ ಹಸಿಶುಂಠಿ, ೯ ಒಣಶುಂಠಿ ೧೦ ಮೂಲಂಗಿ, ೧೧ ಮೆಣಸಿನಕಾಯಿ, ೧೨ ಗೆಣಸು.

೪ ಸ್ನೇಹಗಳು-೧ ಆಕಳಹಾಲು, ೨ ಆಕಳಮೊಸರು, ೩ ಆಕಳತುಪ್ಪ, ೪ ಆಕಳ

ಮಜ್ಜಿಗಿ, ೫ ಎಮ್ಮೆಯತುಪ್ಪ, ೬ ಬೆಣ್ಣೆ ತೆಗೆಯದೆಯಿದ್ದ ಎಮ್ಮೆಯ ಮಜ್ಜಿಗೆ, ೭ ಸಕ್ಕರೆ ಕೂಡಿದ ಎಮ್ಮೆಯಹಾಲು ಇತ್ಯಾದಿ.

೫ ಇತರಪದಾರ್ಥಗಳು- ೧ ಕಬ್ಬು, ೨ ಸಕ್ಕರಿ, ೩ ಬೆಲ್ಲ, ೪ ಕಪ್ಪುರ, ೫ ಸಿಂಧು

ಲವಣ, ೬ ಸಮುದ್ರದ ಉಪ್ಪು, ೭ ಅಡಕಿ, ೮ ವೀಳೆಯದೆಲೆ, ೯ ಮೆಣಸು, ೧೦ ಜೇನು ತುಪ್ಪ ಇತ್ಯಾದಿ

ಒಟ್ಟಿಗೆ ಹೇಳತಕ್ಕದ್ದೇನಂದರೆ, ಮನಸ್ಸಿಗೂ-ಇಂದ್ರಿಯಗ

ಳಿಗೂ-ವಿಷಯಗಳಿಗೂ ಪರಸ್ಪರ ಅಪರಿತ್ಯಾಜ್ಯ ಸಂಬಂಧವಿರುವದರಿಂದ ಇವುಗಳವ್ಯವಹಾ ರವು ನಿತ್ಯವಿರುತ್ತದೆ; ಆದ್ದರಿಂದ ನಾವು ವಿಚಾರಪೂರ್ವಕವಾಗಿ ಮನಸ್ಸಿಗೆ ವಿಷಯಗಳ ಸಂಬಂಧವನ್ನು ಮಾಡಿಸತಕ್ಕದ್ದು. ವಿಷಯಗಳ ಪರಿಶೀಲನವೇ ಮನಸ್ಸಿನ ಶುದ್ಧಾಶುದ್ಧ ತೆಗಳಿಗೆ ಕಾರಣವಾಗಿರುವದರಿಂದ, ವಿಷಯಗಳಲ್ಲಿಯ ಗುಣ-ದೋಷಗಳ ಪರಿಜ್ಞಾನವನ್ನು ಮನಸ್ಸಿಗೆ ಅವಶ್ಯವಾಗಿ ಮಾಡಿಕೊಡತಕ್ಕದ್ದು. ಒಂದುಸಾರೆ ಮನಸ್ಸು “ಇವು ದುಷ್ಟ ಪದಾರ್ಥಗಳೆಂದು" ನಿಶ್ಚಯಿಸಿ, ಅವುಗಳಮೇಲೆ ಓಕರಿಸಿದರೆ ಸಾಕು. ಅಂಥ ದುಷ್ಟ ಪದಾರ್ಥಗಳ ಸಂಬಂಧಕ್ಕೆ ಅದು ಒಳಗಾಗುವದಿಲ್ಲ.

------------------

೫ ನೆಯ ಪ್ರಕರಣ-ಬಂಧವಿಮಾಚನ.

" यस्य देवे पराभाक्त यथादेवे तथागुरौ ।

तस्यैते कथिता ह्यथ:प्रकाशते महात्मनः ॥१||

ಹಿಂದಿನ ನಾಲ್ಕು ಪ್ರಕರಣಗಳಲ್ಲಿ, ಮನಸ್ಸು ಅತಿ ಚಂಚಲವಾಗಿದ್ದು ನಿಂತಲ್ಲಿನಿಲ್ಲದೆ

ಯಾವಾಗಲೂ ಕರ್ತವ್ಯಶಾಲಿಯಾಗಿರುವದರಿಂದ, ಅದು, ಇಂದ್ರಿಯಗಳೊಡನೆ ಹೇಯವಾ

 --೨೧--

ಗಿರುವ ವಿಷಯಗಳಮೇಲೆ ಧಾವಿಸುವದು. ಈ ವಿಷಯಗಳು ಆಕರ್ಷಕವಾಗಿರುವದರಿಂದ ಮನಸ್ಸನ್ನು ಕೂಡಲೆ ಕಟ್ಟಿಬಿಡುತ್ತವೆ. ಆಗ ಮನಸ್ಸು ವಿಷಯಪರವಶವಾಗಿ ಮನುಷ್ಯ ನನ್ನು ಸಂಸಾರದಲ್ಲಿ ಕೆಡವುತ್ತದೆ. ತಾನೂ ಈ ಜಡವಿಷಯಗಳ ಸಂಸರ್ಗದಿಂದ ಮಲಿನ ವಾಗಿ ಹೋಗುತ್ತದೆ. ಮನಸ್ಸಿಗೆ ವಿಷಯಗಳ ಸಂಬಂಧದ ಚಟವನು ಸಹಸಾ ಬಿಡಿಸುವದು ಯಾರಿಂದಲೂ ಆಗುವದಿಲ್ಲ. ಆದರೆ ವಿಷಯಗಳನ್ನು ಸಾತ್ವಿಕ, ರಾಜಸ, ತಾಮಸಗಳೆಂದು ಮೂರು ವರ್ಣಗಳಾಗಿ ವಿಂಗಡಿಸಿ ಇವುಗಳಲ್ಲಿ ಆ ಮನಸ್ಸಿಗೆ ಕೇವಲ ಸಾತ್ವಿಕವಿಷಯಗಳನ್ನೇ ಕೊಡುವದರಿಂದ ಮನಸ್ಸಿನ ಶುದ್ಧಿಯೆಂದರೆ ನಿರ್ಮಲತೆಯಾಗು ತ್ತದೆ. ಇದು ನಿರ್ಮಲವಾಗುವದರಿಂದ ಇದರಲ್ಲಿ ಹೆಚ್ಚಿನ ಸ್ಪುರಣಶಕ್ತಿಯು ಉತ್ಪನ್ನವಾ ಗುತ್ತದೆಂಬ ಸಂಗತಿಯನ್ನು ನಿರೂಪಿಸಿದೆವು. ಈ ಪ್ರಕಾರವಾಗಿ ಸುಪರಿಶುದ್ಧಗಳಾದ ಆಹಾರಗಳಿಂದ ಮನಸ್ಸು ನಿರ್ಮಲವಾದಮೇಲೆ ನಾವು ಮಾಡತಕ್ಕ ಕರ್ತವ್ಯವೇನು ?ಎಂಬ ಬಗ್ಗೆ ಈಗ ವಿಚಾರಮಾಡತಕ್ಕದ್ದು. ಈ ರೀತಿ ಮನಸ್ಸಿಗೆ ನೈರ್ಮಲ್ಯಬಂದರೂ ಅದರ ಚಂಚಲಸ್ವಭಾವವು ಹೋಗದಿದ್ದರೆ ಅದನ್ನು ಬಿಗಿದುಹಿಡಿಯುವದು ಹೇಗೆ ? ಅದು 'ನಮ್ಮ ಬಿಗಿಯಲ್ಲಿ ಸಿಗದಿದ್ದರೆ ನಾವು ಹೇಗೆ ಕರ್ತವ್ಯನಿಷ್ಠರಾಗುವೆವು ? ನಾವು ಕರ್ತವ್ಯನಿಷ್ಠರಾ ಗದಿದ್ದರೆ ನಮ್ಮ ಮೇಲೆ ಸದ್ಗುರುವಿನ ಅಂತಃಕರಣವಾಗುವದು ಹೇಗೆ ? ಸದ್ಗುರುವಿನ ಅಂತಃಕರಣದ ಹೊರತು ಯಾರಿಗೂ ಮುಕ್ತಿ ಇಲ್ಲವೆಂಬುದು ಸಿದ್ಧವಾದದ್ದೇ ಇರುತ್ತದೆ. ಹೀಗೆ ಮನಸ್ಸು ಚಾಂಚಲ್ಯಮಾತ್ರದಿಂದ ಫಲಕ್ಕೆ ದೂರಾಗುವ ಕಲ್ಪಕ್ಕೆ ಅದರ ಚಾಂಚಲ್ಯ ವನ್ನು ಪರಿಹರಿಸತಕ್ಕದ್ದು ಮೊದಲನೆಯ ಕರ್ತವ್ಯವಿರುತ್ತದೆ; ಆದ್ದರಿಂದ ಅದರ ಚಾಂಚ ಲ್ಯವನ್ನು ತೆಗೆದುಹಾಕುವ ವಿಷಯವನ್ನು ಕುರಿತು ವಿಚಾರಿಸುವಾ-

ಈ ಮನಸ್ಸಿನಚಾಂಚಲ್ಯವನ್ನು ತೆಗೆದುಹಾಕುವಉಪಾಯಗಳೆಂದರೆ ೧.ಸಂಕಲ್ಪವು,</p. ೨.ಯೋಗವು. ಇವೆರಡೂ ಕೂಡಿ ಮನಸ್ಸಿನ ಚಾಂಚಲ್ಯವನ್ನು ಪರಿಹರಿಸುತ್ತವೆ. ಮನ ಸ್ಸು, ಒಂದು ಕೆಲಸವನ್ನು ಮಾಡಲಿಕ್ಕೆ ಉಪಕ್ರಮಿಸಿತು, ಅದನ್ನು ಬಿಟ್ಟಿತು; ಮತ್ತೊಂದ ಕ್ಕೆ ಆರಂಭಿಸಿತು; ಅದನ್ನೂ ಬಿಟ್ಟಿತು. ಹೀಗೆ ಒಂದೂ ಕೆಲಸವನ್ನು ನಿರ್ಧಾರದಿಂದ ಮಾ. ಡದಿರುವದೇ ಮನಸ್ಸಿನ ಚಾಂಚಲ್ಯವು. ಉಪಕ್ರಮಿಸಿದ ಕಾರ್ಯವನ್ನು ತಪ್ಪದೆ ಮುಗಿ ಸುವ ಚಟಯನ್ನು ಕಲಿಸುವದೇ ಚಾಂಚಲ್ಯನಿವಾರಣೋಪಾಯವು. ಒಂದು ತಾಸಿನೊಳಗೆ ನೂರಾರು ಕಡೆಗೆ ಓಡಾಡುವ ಚಟಯು ಬಿದ್ದದ ರಿಂದ ಸಹಸಾ ಒಂದೇ ಕಾರ್ಯದಲ್ಲಿ ಮನಸ್ಸು ವ್ಯಾವ್ರತವಾಗಲಾರದೆಂಬುವದು ದೊಡ್ಡಮಾತ್ತಲ್ಲ; ಆದರೆ ತಿರುಗಿ-ಮುರುಗಿ ಅದೇಕೆಲಸಕ್ಕೆ ಹಚ್ಚೋಣ, ಅದನ್ನುಬಿಟ್ಟುಹಾರಿದರೆ ಮತ್ತು ಅದಕ್ಕೆ ತಂದುಹಚ್ಚೋಣ, ಹೀಗೆ ಸ್ವೀಕೃತ ಕಾರ್ಯದಕಡೆಗೆ ಮನಸ್ಸನ್ನು ನಿರ್ಧಾರದಿಂದ ಹಚ್ಚುವದಕ್ಕೆ ಸಂಕಲ್ಪವೆಂತಲೂ, ಅ ಭ್ಯಾ ಸ ವೆ ೦ ತ ಲೂ ಪರ್ಯಾಯಶಬ್ದಗಳನ್ನು ಉಪಯೋಗಿ ಸಬಹುದು. ಇನ್ನು "ಯೋಗಃ ಕರ್ಮಸು ಕೌಶಲಂ" ಎಂದರೆ ಕೌಶಲ್ಯದಿಂದ ಕರ್ಮ ಮಾಡುವದೇ ಯೋಗವೆಂದು ಹೇಳಿರುವದರಿಂದ, ಅತ್ಯಂತ ಕರ್ಮಾಸಕ್ತನು . ಸ್ವೀಕೃತಕಾ ರ್ಯದಲ್ಲಿ ತನ್ನನ್ನೇ ಮರೆತು ಬಿಡುವನಾದ್ದರಿಂದ, ನಿಜವಾದ ವೈರಾಗ್ಯವು ಆತನಲ್ಲಿಯೇ ಉತ್ಪನ್ನವಾಗುವಸಂಭವವಿರುತ್ತದೆ. 

--೨೨--

ಸಂಕಲ್ಪದಲ್ಲಿ ವಿಚಿತ್ರವಾದ ಶಕ್ತಿಯಿರುತ್ತದೆಂಬದು ಸಹಜವಾಗಿ ನಮಗೇ ತಿಳಿ, ಯುವಂತಿದೆ. ಉದಾಹರಣ, ಏಕಾದಶೀತಿಥಿಯಲ್ಲಿ ಇಡೀದಿವಸ ಬಾಯೊಳಗೆ ನೀರು ಹಾಕಲಿಕ್ಕಿಲ್ಲೆಂದು ಒಮ್ಮೆ ನಿಶ್ಚಯಿಸಿದರೆ,ಸಾಕು. ಅಂದಿನ ದಿವಸ ಆಹಾರದಮೆಲೆ ಅಫೇ ಕ್ಷೆಯೇ ಆಗುವದಿಲ್ಲ. ಇದು ಸರ್ವಾನುಭವಸಿದ್ಧವಾದದ್ದೇ ಇರುತ್ತದೆ. ಈ ವಿಷಯ ವಾಗಿ ಭಗವದ್ಗೀತೆಯಲ್ಲಿ "ಚಂಚಲುಹಿ ಮನಃ" ಎಂಬ ಶ್ಲೋಕದಿಂದ ಅರ್ಜುನನು ಭಗ ವಂತನಿಗೆ "ಶ್ರೀಕೃಷ್ಣಾ, ಮನಸ್ಸು ಚಂಚಲವಾಗಿ ಬಲಾಢ್ಯವಾಗಿರುವದರಿಂದ ಇದನ್ನು ನಿಗ್ರಹಿಸುವದೂ, ಗಾಳಿಯಮಟ್ಟೀಕಟ್ಟುವದೂ ಒಂದೇಇರುವವೆಂ"ದು ಪ್ರಶ್ನೆಮಾಡಲು, ಶ್ರೀಕೃಷ್ಣ ನು ಅರ್ಜುನನಿಗೆ--"ಅಭ್ಯಾಸೇನಚ ಕೌಂತೇಯ" ಎಂಬ ಶ್ಲೋಕದಿಂದ ಎಲೈ ಕೌಂತೇಯನೇ, ಇದಕ್ಕೆ ಇಷ್ಟೊಂದು ಯಾಕೆ ಯೋಚನೆ? ಮನಸ್ಸಿಗೆ ಅಭ್ಯಾಸ, ಮತ್ತು ವೈರಾಗ್ಯಗಳನ್ನು ಯೋಜಿಸಿದರೆ ಸಾಕು. ತಾನಾಗಿಯೇ ಆ ಮನಸ್ಸಿನ ನಿಗ್ರಹವಾಗು ವದೆಂದು ಹೇಳಿರುವನು. ಸಂಕಲ್ಪಾಭ್ಯಾಸಶಬ್ದಗಳೂ, ಯೋಗ-ವೈರಾಗ್ಯಶಬ್ದಗಳೂ ಒಂದೇ ಅರ್ಥದವಿರುವವೆಂದು ತಿಳಿಯಬೇಕು. ಹಿಂದಕ್ಕೆ ದುರ್ಮರಣವನ್ನು ಹೊಂದಿದ ತನ್ನ ಪಿತಾಮಹರಾದ ಅರವತ್ತುಸಾವಿರ ಸಗರರನ್ನುದ್ಧರಿಸುವದಕ್ಕೆ ಅವರ ವಂಶದ ಭಗೀರಥರಾಜನು ಮನಸ್ಸಿಗೆ ಸಂಕಲ್ಪಶಕ್ತಿಯನ್ನುಯೋಜಿಸಿ ಕಾರ್ಯದಲ್ಲಿ ತೊಡಗಿದಾಗ ಅವರನ್ನುದ್ಧರಿಸಿ ತಾನೂ ವಾರಾದನು. ಆತನ ಕಾರ್ಯಪ್ರಭಾವದಿಂದ ನಮಗೂಕೂಡ ಗಂಗಾಸ್ನಾನದ ಲಾಭವಾಗಹತ್ತಿದೆ. ಈ ಭಗೀರಥನ ಹಿಂದಿನವರ ಮನಸ್ಸಿನಲ್ಲಿ ಅವ ರನ್ನು ಉದ್ಧರಿಸಬೇಕೆಂಬ ಕಲ್ಪನೆಯಿದ್ದರೂ, ಅದಕ್ಕೆ ಸಂಕಲ್ಪವು ಕೂಡದ್ದರಿಂದ ಅವ ರಿಂದ ಕಾರ್ಯವಾಗಲಿಲ್ಲ. ಮನುಷ್ಯನ ಮನಸ್ಸಿನಲ್ಲಿ ಎಷ್ಟೋ ಕಲ್ಪನೆಗಳು ಉದಯಿ ಸುತ್ತವೆ; ಆದರೆ ಅವೆಲ್ಲ ಕಾರ್ಯಸಾಧಕವಾಗುವದಿಲ್ಲ. ಇನ್ನು ಇವುಗಳಲ್ಲಿ, ಯಾವ ಕಲ್ಪನೆಗೆ ಸಂಕಲ್ಪವು ಕೂಡಿಕೊಳ್ಳುವದೋ? ಅದೇ ಕಲ್ಪನೆಯು ಕಾರ್ಯವನ್ನು ಸಾಧಿ ಸಿಕೊಡುತ್ತವೆ. ಈಮಾತು ಸರ್ವರಿಗೂ ಗೊತ್ತಿರುತ್ತದೆ. ದೇವರು, ಯಾವಾಗಲೋ ಏನೋ? ಹಿಂದಕ್ಕೆ ಒಂದುಸಾರೆ ಸೂರ್ಯ-ಚಂದ್ರರಿಗೆ, ಗ್ರಹ-ನಕ್ಷತ್ರಗಳಿಗೆ ಅಪ್ಪಣೆ ಯನ್ನುಮಾಡಿ, ಗತಿಯನ್ನು ಕೊಟ್ಟಿರುವನು. ಆಗಿನಿಂದ ಅವರೆಲ್ಲ ಕಾಲಕಾಲಕ್ಕೆ ತಪ್ಪದೆ ತಮ್ಮ ತಮ್ಮ ಕೆಲಸವನ್ನು ಮಾಡುತ್ತಿರುವದರಿಂದ, ನಮಗೆಲ್ಲ ಬೇಗು ಬೆಳಗುಗಳೂ, ಮಳೆ-ಬೆಳೆಗಳೂ ಆಗುತ್ತವೆ. ಆ ಪರಮೇಶ್ವರನ ಅಪ್ಪಣೆಗನುಸರಿಸಿ ತಪ್ಪದೆ ಕೆಲಸಮಾ ಡುವಮಾತ್ರದಿಂದಲೇ ಆ ಸೂರ್ಯ,ಚಂದ್ರ ಮುಂತಾದವರು ನಮಗೆಲ್ಲ ವಂದ್ಯರಾಗಿರು ವರು. ನಾವಾದರೂ ಅವರಂತೆ ಪರಮೇಶ್ವರನ ಆಜ್ಞೆಯೆನಿಸಿಕೊಳ್ಳುವ ಶ್ರುತಿ-ಸ್ಕೃತಿ ಮುಂತಾದ್ದರಲ್ಲಿ ಹೇಳಿದಕರ್ಮವನ್ನು ಮಾಡಹತ್ತಿದರೆ, ಜಗತ್ತಿನಲ್ಲಿ ಪೂಜ್ಯರಾಗುವದು ಆಶ್ಚರ್ಯವೇನು? ಈಗಿನಕಾಲದಲ್ಲಿಯೂ, ಶಿವಾಜಿ ಮುಂತಾದವರು ರಾಷ್ಟ್ರಕಾರ್ಯದಲ್ಲಿ ತೊಡಗಿಕೊಂಡು ತಮ್ಮ ಹಿತಾಹಿತಗಳನ್ನೂ ಕೂಡ ನೋಡದೆ ಕಾರ್ಯಮಾಡಿದ್ದರಿಂದ ಇತಿಹಾಸಪ ಸಿದ್ಧರಾಗಿರುವರು. ಕರ್ತವ್ಯಶಾಲಿಯಾದ ಮನುಷ್ಯನು ಸಾಮಾನ್ಯನಲ್ಲ. ಮನಸ್ಮೃತಿಯಲ್ಲಿ "ಕರ್ತೃಷುಬ್ರಹ್ಮನೇದಿನ:" ಎಂಬ ವಾಕ್ಯದಲ್ಲಿ ಕರ್ತವ್ಯಶಾಲಿಯ

--೨೩--

ನಂಬರು ಬ್ರಹ್ಮಜ್ಞಾನಿಯ ಹತ್ತರ ಬಿದ್ದಿರುವದು. ಇದರ ಮೇಲಿಂದ ವಿಚಾರಿಸಿದ ಕರ್ತವ್ಯಶಾಲಿಗಳು ಎಷ್ಟೊಂದು ಪುಣ್ಯವಂತರು! ಒಂದು ರಾಷ್ಟ್ರದಲ್ಲಿ ಒಬ್ಬಿಬ್ಬರು

ಕರ್ತವ್ಯಶಾಲಿಗಳಾದರೆ,ಆ ರಾಷ್ಟ್ರವೇ ಸ್ವತಂತ್ರವಾಗಿ ತೇಜಸ್ವಿಯಾಗುವದೆಂಬ ಸಂಗತಿಯು ಇತಿಹಾಸಗಳ ಮೇಲಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ. ಮುಂದೆ ಬ್ರಹ್ಮ ಜ್ಞಾನಿಯಾದಮೇಲೆ ಕರ್ತವ್ಯವಿಲ್ಲ. ಅಂಥ ಕರ್ತವ್ಯಶೂನ್ಯರಾಗಿಯೂ, ಮುಕಿ ಯೋಗ್ಯ ರಾಗಿಯೂ, ಇರುವ ಬ್ರಹ್ಮಜ್ಞಾನಿಗಳಿಂದ ರಾಷ್ಟ್ರದ ಹಿತವೇನು? ಯದ್ಯಪಿ ಸಾಮಾನ್ಯ ವಾಗಿ ಈ ಮಾಹಾತ್ಮರಿಂದ ರಾಷ್ಟ್ರಹಿತವಿಲ್ಲದಿದ್ದರೂ ಯಾವ ಜನರು ಉಜ್ವಲವೃತ್ತಿಯಿಂದ ರಾಷ್ಟ್ರಹಿತಕಾರ್ಯವನ್ನು ಮಾಡಿ ಕೃತಕೃತ್ಯರಾಗುವರೋ, ಅವರಿಗೆ ಮುಕ್ತಿಮಾರ್ಗ ವನ್ನು ತೋರಿಸುವ ಕೆಲಸವು ಅವರದೇ ಇರುವದು. ಅವರು ಯಾವಾಗಲೂ, ಇಂಥ ಕರ್ತವ್ಯನಿಷ್ಠರನ್ನೇ ಹುಡುಕ್ತಲಿರುತ್ತಾರೆ. ಆದ್ದರಿಂದ ರಾಷ್ಟ್ರಕ್ಕೆ ಉಭಯಪಕ್ಷದವರದೂ ಅವಶ್ಯಕತೆಯಿರುವದು. ಇನ್ನು ಈ ಎ ರ ಡೂ ಪ ಕ್ಷ ಗ ಳ ಲ್ಲಿ ಸೇರದೆ "ಜಾಯಸ್ವ ಮಿಯಸ್ವ" ಹುಟ್ಟು , ಸಾಯು ಎಂಬ ತೃತೀಯಪಂಥದವರಾದ ನಮ್ಮಂಥವರಿಂದ ಮಾತ್ರ ರಾಷ್ಟ್ರಕ್ಕೆ ಏನೂ ಹಿತವಾಗಲಾರದೆಂದು ಕೈ ಎತ್ತಿಹೇಳಬಹುದು. ರಾಷ್ಟ್ರಹಿತ ವಾಗುವದಿಲ್ಲ ಇಷ್ಟೇ ಅಲ್ಲ, ಕೇವಲ ಭಾರಭೂತರಾದ ನಮ್ಮಿಂದ ರಾಷ್ಟ್ರಕ್ಷೋಭವೇ ಆಗುವದು. ಯಾಕಂದರೆ ನಾವು ಏನೂ ಕೆಲಸ ಮಾಡದಿದ್ದರೂ, ಕೆಲಸಮಾಡುವವ ರನ್ನು ಕಂಡು ಸುಮ್ಮನೆ ಕೂಡ್ರುವದಿಲ್ಲ. ಜನರಲ್ಲಿ ನಮ್ಮದೊಂದು ಒಣಪ್ರತಿಷ್ಠೆಯನ್ನು ಬೆಳಸುವದಕ್ಕಾಗಿ ಕೆಲಸ ಮಾಡುವವರಿಗೆ ಕಾಡುತ್ತೇವೆ. ನಮ್ಮಂಥವರು ಸಾವಿರಮಂದಿ ಕಾಡಿದರೂ ಅವರು ಸ್ವೀಕೃತಕಾರ್ಯವನ್ನು ಬಿಡುವದಿಲ್ಲೆಂಬದು ಒಂದು ಕಡೆಗೆ ಇರಲಿ. ಸಾರಾಂಶ, ನಾವು ಅಂಥ ಮಹನೀಯರಿಗೆ ತೊಂದರೆಯನ್ನು ಕೊಟ್ಟು ರಾಷ್ಟ್ರಕ್ಷೋಭ ವನ್ನುಂಟುಮಾಡುವದರಿಂದ ನಾವು ಅನುಪಯುಕ್ತರೇ ಆಗುವೆವು. ನಾವಾದರೂ ಹೀಗಾಗದೆ ಮಹನೀಯರನ್ನು ಕಂಡು ಅವರ ಸದ್ಗುಣಗಳನ್ನು ನಮ್ಮಲ್ಲಿ ಸಂಪಾದಿಸಿಕೊಂಡು ಅವರಂತೆ ಲೋಕಹಿತಕಾರ್ಯವನ್ನು ಮಾಡಹತ್ತಿದರೆ ನಮ್ಮದೂ ಉದ್ದಾರವಾಗುತ್ತದೆ. ಹಾರಮುಂತಾದ್ದರಿಂದ ಮನಸ್ಸು ಸುಪರಿಶುದ್ಧವಾದ ಮೇಲೆ, ನಮಗೆ ಸತ್ಸಮಾಗಮವಾಗ ತಕ್ಕದ್ದು. ಅಲ್ಲಿಂದ ಸಜ್ಜನರು ನಮಗೆ ಜ್ಞಾನೋಪದೇಶವನ್ನು ಮಾಡತಕ್ಕದ್ದು. ಅನಂತರದಲ್ಲಿ ಬಂಧವಿಮೋಚನವಾಗುವದು ಹೀಗೆ ಕ್ರಮವಿರುತ್ತದೆ. ಆದರೆ ಮನಸ್ಸು ಸು. ಪರಿಶುದ್ಧವಾದ ಮೇಲೆ ಸತ್ಸಮಾಗಮವು ಹೇಗೆ ಆಗುತ್ತದೆಂಬುದನ್ನು ಕುರಿತು ವಿಚಾರಿ ಸುವಾ-ಒಕ್ಕಲಿಗನು ಬೀಜಬಿತ್ತುವದಕ್ಕೆ ಹದನಾದ ಭೂಮಿಯನ್ನು ಹುಡುಕುವಂತೆ ಬ್ರಹ್ಮಜ್ಞಾನಿಗಳಾದ ಸತ್ಪುರುಷರು ಯಾವಾಗಲೂ, ಸುಪರಿಶುದ್ಧ ವನಸ್ಸುಳ್ಳವರನ್ನೇ ಉಪದೇಶಿಸುವ ಸಲುವಾಗಿ ಹುಡುಕತ್ತಲಿರುತ್ತಾರೆ. ಇದಕ್ಕಾಗಿಯೇ ಅವರ ಸ್ಥಿತಿಯೂ ಸಂಚಾರವೂ ಇರುವವು. ಏಕನಿಷ್ಠೆಯಿಂದ ಕರ್ತವ್ಯವನ್ನು ಮಾಡಿ ಮನಃಶ್ಶುದ್ಧಿಯನ್ನು ಹೊಂದಿದ ಮನುಷ್ಯನಾದರೂ ಕೃತಕಾರ್ಯನಾಗಿ ಅಂಥವರ ದರ್ಶನವನ್ನೇ ಅಪೇಕ್ಷಿಸುತ್ತಿರು ತಾನೆ; ಇಷ್ಟರಲ್ಲಿ ದೈವಯೋಗದಿಂದ ಅಂಥಮಹನೀಯರ ಉಜ್ವಲಸ್ವರೂಪದ ದರ್ಶನವಾದ ಕೊಡಲೆ, ಆವನಲ್ಲಿಯೊಂದು ವಿಲಕ್ಷಣವಾದಭಕ್ತಿಯೇ ಹುಟ್ಟುತ್ತದೆ. ಅಂಥ ಭಕ್ತಿಯ ಬೆಳಕು ಮನಸ್ಸಿನಲ್ಲಿ ಬಿದ ಕೂಡಲೆ ಅವನು ಗಾಢಾಂಧಕಾರದಲ್ಲಿ ದೀಪದಲಾಭವಾದಂತ ಪರಮಹರ್ಷ ವನ್ನು ಹೊಂದಿ ಉನ್ಮತ್ತನಂತೆ ಕುಣಿಯುತ ಸತ್ಪುರುಷನ ಚರಣಗಳಲ್ಲಿ ಮಣಿಯುತ್ತ ತನ್ನನ್ನು ಕೃತಕೃತ್ಯನನ್ನಾಗಿ ಭಾವಿಸುತ್ತಾನೆ. ಆಮೇಲೆ ಅವನು, ತನ್ನನ್ನೂ ತನ್ನ ಕಾರ್ಯವನ್ನೂ, ಮರೆತು, ಆ ಸತ್ಪುರುಷರ ಸೇವಾಕಾರ್ಯದಲ್ಲಿಯೇ ತೊಡಗುತ್ತಾನೆ. ಸೇವಾಧುರಂಧರ ನೆನಿಸಿಕೊಂಡು ಸದ್ಗುರುವಿನ ಕೃಪಾಪಾತ್ರನಾಗುವದೇ ಆತನ ಕರ್ತವ್ಯವಾಗುವದು. ಇದೇ ಜನದ ಸಾಫಲ್ಯವು, ಇದೇ ಅನೇಕಜನ್ಮಗಳಿಂದ ಮಾಡುತ್ತಬಂದ ಪುಣ್ಯಕರ್ಮಗಳ ಪರಿ ಪಾಕವು, ಇದೇ ಗುರು-ಹಿರಿಯರ ಆಶೀರ್ವಾದಗಳ ಫಲವು, ಇದೇ ದೇವತಾರಾಧನದ ಮಹಿಮೆಯು! ಇಷ್ಟೊಂದು ಕೃಪಾಪಾತ್ರರಾದ ನಮ್ಮನ್ನು ಬಂಧಮುಕ್ತರನ್ನಾಗಿ ಮಾಡು 'ವದು ಬ್ರಹ್ಮನಿಷ ಗುರುಗಳಿಗೆ ಆಯಾಸವಲ್ಲ. ನಾವು ಅವರ ಸೇವಾಕಾರ್ಯವನ್ನು ಮಾಡುವಾಗ ಅವರ ಸದೂತಿಯನ್ನೂ ನಿರುಪಾಧಿಕವಾದ ಚಿತ್ತವೃತ್ತಿಯನ್ನೂ, ಸತ್ಯ ಪ್ರಯತ್ನ ಮುಂತಾದ ಸದ್ಗುಣಗಳನ್ನೂ, ನೋಡನೋಡಿ ಧನ್ಯರಾಗಿರುವದರಿಂದ, ಬಂಧ ವಿಮೋಚನಸಿತಿಯು ತಾನಾಗಿಯೇ ಒದಗುತ್ತದೆ. ಉಳಿದದ್ದೇನು; ಸ್ವಾನುಭವಗ್ರದರ್ಶ ನವು. ಸದುರವು ಸದಂತಃಕರಣದಿಂದ ಪರಮಶಿಷ್ಯನ ಉದ್ದಾರವಾಗಲೆಂದು ಶಿಷ್ಯನ ತಲೆ ಯಮೇಲೆ ಪರಮಪವಿತ್ರವಾದ ತನ್ನ ಹಸ್ತವನ್ನಿಟ್ಟರೆ ಅದು ಸಾಧಿಸಿ ಹೋಗುತ್ತದೆ. ಮನು ವ್ಯನು ಈ ಸ್ಥಿತಿಗೆ ಮುಟ್ಟಿ ಸದ್ಗುರುವಿನ ಪರಮಾನುಗ್ರಹದಿಂದ ಸ್ವಾನುಭವದಲ್ಲಿ ಮಗ್ನನಾಗಿ ಪರಮಾನಂದ ಪೂರ್ಣನಾದಮೇಲೆ ಮನಸ್ಸಿಗೂ ಇಂದ್ರಿಯಗಳಿಗೂ ಸಂಬಂಧವಿಲ್ಲ? ಇಂದ್ರಿಯಗಳಿಗೂ ವಿಷಯಗಳಿಗೂ ಸಂಬಂಧವೆಲ್ಲಿ? ಇಂಥ ಪ್ರಸಂಗದಲ್ಲಿ ಮನಸ್ಸು ವಿಷ ಯಗಳಿಂದ ತಿರುಗಿ ಸ್ವಾನುಭವಾನಂದದಲ್ಲಿಯೇ ಇರೋಣದರಿಂದ ಈ ಸಂಸಾರವೆಂಬ ದೃಢವಾದ ಬಂಧನವು ತಾನಾಗಿಯೇ ಕಳಚಿಹೋಗುತ್ತದೆಂಬ ತಾತ್ಪರ್ಯವನ್ನು "ಮನ ವಿವ” ಎಂಬ ಮೇಲಿನ ಶ್ರುತಿವಾಕ್ಯವು ತೋರಿಸುತ್ತದೆ.