ಭವಪಾಶದಿಂದೆ ಕಟ್ಟುವಡೆದು ಕಂಗೆಟ್ಟ



Pages   (key to Page Status)   


ಭವಪಾಶದಿಂದೆ ಕಟ್ಟುವಡೆದು ಕಂಗೆಟ್ಟ ಮನುಜನು ಶ್ರೀಗುರುವಿನ ಕರುಣವ ಪಡೆಯಬೇಕಾಗಿ ಆ ಗುರುವಿನಿರವ ಬೆದಕುತ್ತಿರುವಲ್ಲಿ
ಶಿಷ್ಯತಂಡವನೊಳಕೊಂಡ ಒರ್ವ ದೇಶಿಕನ ಕಂಡು
ಕೆಲಕಾಲ ಆತನ ಸೇವೆಯಲ್ಲಿರಬೇಕು. ಆತನಲ್ಲಿ ಜ್ಞಾನಾಚಾರಂಗಳಿಲ್ಲದುದ ಕಂಡಡೆ ಆತನನ್ನುಳಿದು ಗುರುಲಕ್ಷಣದಿಂದೊಪ್ಪುವ ಮತ್ತೊರ್ವ ಮಹಿಮನೆಡೆಗೈದಿ ಪರಕಿಸಿ ಮನದಟ್ಟಾದಲ್ಲಿ ಆತನಿಂದೆ ಜ್ಞಾನದೀಕ್ಷೆಯ ಪಡೆಯಬೇಕು. ಇದು ಸದ್ಭಾವಿಗಳ ಸನ್ಮಾರ್ಗವಯ್ಯಾ
ಕೂಡಲಚೆನ್ನಸಂಗಮದೇವಾ.