ರೂಪು ಅರೂಪಿನಲ್ಲಿ ನಿಂದಿತ್ತು,


Pages   (key to Page Status)   

ರೂಪು ಅರೂಪಿನಲ್ಲಿ ನಿಂದಿತ್ತು
ಅರೂಪು ನಿಜರೂಪವನವಗ್ರಹಿಸಿತ್ತು. ನಿಜರೂಪು ನಿರ್ಣಯದಲ್ಲಿ ನಿಷ್ಪತ್ತಿಯಾಯಿತ್ತು
ನಿಷ್ಪತ್ತಿಯಾದ ನಿಜಶರಣರ ನಿಲವು ಕಾಯವಿಡಿದು ಕಂಡೆಹೆನೆಂದಡೆ ಕಾಣಬಹುದೆ ! ಕೂಡಲಸಂಗಮದೇವರ ಶರಣ ಪ್ರಭುದೇವರ ನಿಲವು ಎನಗೆ ಸಾಧ್ಯವಪ್ಪುದೆ !