ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೧೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦ ಶ್ರೀಮದ್ಭಾಗವತವು [ಅಧ್ಯಾ. ೬. ಸ್ಥಳಕ್ಕೂ ಹೋಗದೆ, ಆ ನನ್ನ ತಾಯಿಯ ದೇಹಾವಸಾನವನ್ನು ನಿರೀಕ್ಷಿಸು ತ,ಆ ಬ್ರಾಹ್ಮಣರ ಮನೆಯಲ್ಲಿಯೇ ವಾಸಮಾಡುತಿದ್ದೆವು. ಹೀಗಿರುವಲ್ಲಿ ಒಂ ದಾನೊಂದುರಾತ್ರಿ ನನ್ನ ತಾಯಿಯು ಆ ಬ್ರಾಹ್ಮಣನ ಮನೆಯ ಗೋವುಗಳ ನ್ನು ಹಾಲುಕರೆಯುವುದಕ್ಕಾಗಿ ಹೊರಟಾಗ, ಆಕಸ್ಮಾತಾಗಿ ಒಂದುಸರ್ಪವ ನ್ನು ತುಳಿದುಬಿಟ್ಟಳು. ಕಾಲಚೋಮಿತವಾಗಿ ಬಂದ ಆ ಸರ್ಪವು ಅವಳ ಕಾಲ ನ್ನು ಕಚ್ಚಿಬಿಟ್ಟಿತು. ಒಡನೆಯೇ ವಿಷವೇರಿ ನನ್ನ ತಾಯಿಮ ಪ್ರಾಣವನ್ನು ಬಿಟ್ಟಳು. ಇದನ್ನು ನೋಡಿಯೂ ನನಗೆ ಸ್ವಲ್ಪವೂ ವ್ಯಸನವು ಹುಟ್ಟಲಿಲ್ಲ. ಮಾತೃಮರಣವನ್ನೇ ಭಗವದನುಗ್ರಹವೆಂದೆಣಿಸಿ, ಆ ಕ್ಷಣವೇ ಆ ಸ್ಥಳವನ್ನು ಬಿಟ್ಟು ಉತ್ತರದಿಕ್ಕಿನ ಕಡೆಗೆ ಹೊರಟನು. ದಾರಿಯಲ್ಲಿ ಸಸ್ಯಸಮೃದ್ಯಗಳಾದ ಅನೇಕ ದೇಶಗಳನ್ನೂ, ಅಂದವಾದ ಪಟ್ಟಣಗಳನ್ನೂ , ಗ್ರಾಮಗಳನ್ನೂ, ಹಳ್ಳಿಗಳನ್ನೂ , ರತ್ನ ಪೂರ್ಣಗಳಾದ ಗಣಿಗಳನ್ನೂ , ಪೈರಿಡತಕ್ಕವಟಗೆ ವಾಸ ಸ್ಥಾನಗಳಾದ ಪ್ರದೇಶಗಳನ್ನೂ, ಬೇಡರ ಗುಡಿಸಲುಗಳ .' ಹೂತೋಟ ಗಳನ್ನೂ, ಅಂದವಾದ ಅರಣ್ಯಗಳನ್ನೂ ನೋಡುತ್ತ ಬಂದಿರು, ಗೈರಿಕಾದಿ ಧಾತುಗಳಿಂದಲೂ, ಕಾಡಾನೆಗಳು ಮುರಿದು ಕೆಡಹಿದ ವೃಕ್ಷಗಳಿಂದಲೂ ಒಪ್ಪವ ಪರ್ವತಗಳನ್ನೂ, ತಿಳಿನೀರಿನಿಂದ, ತಾವರೆ ಮೊದಲಾದ ನೀರು ಹೂಗಳಿಂದ ಶೋಭಿತವಾಗಿ ದೇವತೆಗಳಿಗೆ ಕ್ರೀಡಾಸ್ಥಾನವೆನಿಸಿಕೊಂ ಡು,, ವಿಚಿತ್ರವಿಯುಳ್ಳ ಪಕ್ಷಿಗಳಿಂದಲೂ, ಮೇಲೆ ಸುತ್ತುತ್ತಿರುವ ಭ್ರಮ ರಸವಂತಿಕೆಗಳಿಂದಲೂ, ಮನೋಹರಗಳಾದ ಸರೋವರಗಳನ್ನೂ ದಾಟಿದೆ ನು. ನಾನು ಹೀಗೆ ಏಕಾಕಿಯಾಗಿ ಬರುತ್ತಿರುವಾಗ, ಪೊದೆಗಳಿಂದಲೂ, ಬಿಡಿ ರುಮೆಳೆಗಳಿಂದಲೂ, ದರ್ಭೆ ಮೊದಲಾದ ತೃಣವಿಶೇಷಗಳಿಂದಲೂ, ಕೀಚ ಕಗಳೆಂಬ ಬಿದಿರುಗಳಿಂದಲೂ ದಟ್ಟವಾಗಿ ತುಂಬಿದ ಒಂದು ಮಹಾರಣ್ಯ ವನ್ನು ಕಂಡೆನು. ನೋಡುವಾಗಲೇ ಭಯವನ್ನು ಹುಟ್ಟಿಸುವಂತೆ ಆ ಅಡ ವಿಯು ಅತ್ಯಂತದುರ್ಗಮವಾಗಿದ್ದಿತು. ಕೂರಸರ್ಪಗಳೂ, ಗೂಬೆ, ನರಿಗಳೂ, ನಾನಾಮುಖವಾಗಿ ಸುತ್ತುತಿದ್ದುವು. ಹೀಗೆ ಅತ್ಯಂತಭಯಂ ಕರವಾದ ಆ ಕಾಡನ್ನು ಪ್ರವೇಶಿಸಿ, ಅಲ್ಲಿ ಸ್ವಲ್ಪ ದೂರದವರೆಗೆ ಹೋಗು ವುದರೊಳಗಾಗಿ, ಮಾರ್ಗಾಯಾಸದಿಂದ ಬಹಳವಾಗಿ ಬಳಲಿಹೋದೆನು.