Pages   (key to Page Status)   


ಶಿವಶರಣ ತಾನಾದ ಬಳಿಕ
ಹರಗಣಂಗಳಂಘ್ರಿಯಲ್ಲಿ ನಮ್ರಲಲಾಟನಾಗಿರಬೇಕು. ಪತಿವ್ರತೆ ತಾನಾದ ಬಳಿಕ
ವಲ್ಲಭನ ಸರ್ವೋಪಚಾರದಲ್ಲಿ ಲೀನೆಯಾಗಿರಬೇಕು. ಇದು ಕಾರಣ_ ಶಿವಶರಣರು ಹರಗಣಂಗಳ ಕಂಡು ಮಣಿಯದಿದ್ದಡೆ ಕೂಡಲಚೆನ್ನಸಂಗಮದೇವರು ಕೊಡುವ ಮುಕ್ತಿಯಲ್ಲಿ ಮೌನರು ಕಾಣಾ ಸಿದ್ಧರಾಮಯ್ಯ.