Pages   (key to Page Status)   


ಸತ್ತಾತ ಗುರು
ಹೊತ್ತಾತ ಲಿಂಗವು
ಎತ್ತಿಕೊಂಡಾತ ಜಂಗಮವೆಂದೆಂಬೆನಯ್ಯ. ಸತ್ತವನೊಬ್ಬ
ಹೊತ್ತವನೊಬ್ಬ
ಎತ್ತಿಕೊಂಡವನೊಬ್ಬನೆಂಬನ್ನಕ್ಕರ ಕತ್ತಲೆ ಹರಿಯದಯ್ಯ. ಆತ್ತವರಮರರು
ನಿತ್ಯವಾದುದು ಪ್ರಸಾದ
ಪರಿಪೂರ್ಣವಾದುದು ಪಾದಜಲ. ಇದರರ್ಥವ ಬಲ್ಲರೆ ಸತ್ತಹಾಗಿರಬೇಕು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.