Pages (key to Page Status)
ಸತ್ಯಸದಾಚಾರವುಳ್ಳ ಶಿವಶರಣರವರಹುದೆಂದುದೆ ಶುಭಮುಹೂರ್ತ [ಶುಭಘಳಿಗೆ] ಸಕಲ ಬಲ ಸಕಲ ಜಯ ಅವರಲ್ಲವೆಂಬುದೇ ವಿಘ್ನ ವಿಷಗಳಿಗೆ ನಿರ್ಬಲ ಅಪಜಯ. ಅದೆಂತೆಂದಡೆ: ಅವರು ಮಾಡುವ ಕಾರ್ಯವೆಲ್ಲಾ ಕೂಡಲಚೆನ್ನಸಂಗಮಾಧೀನವಾಗಿ. ನೀನೆ ಮೃತ್ಯುಂಜಯನು ವಿಶ್ವಾಧಿಪತಿಯಾದ ಕಾರಣ ಜಯವಪ್ಪುದಯ್ಯಾ.