ಸತ್ಯಾಚಾರಯುಕ್ತವಾದ ಭಕ್ತಜಂಗಮವನರಸಿಕೊಂಡು ಹೋಗಿ



Pages   (key to Page Status)   


ಸತ್ಯಾಚಾರಯುಕ್ತವಾದ ಭಕ್ತಜಂಗಮವನರಸಿಕೊಂಡು ಹೋಗಿ ಭಕ್ತದೇಹಿಕದೇವನೆಂಬ ಶ್ರುತಿಯನರಿದು ಪ್ರಸಾದಕ್ಕೆ ಸೂತಕವ ಮಾಡುವ ಪಾತಕರ ವಿಧಿಯಿನ್ನೆಂತೊ ? `ಶರೀರಮರ್ಥಂ ಪ್ರಾಣಂಚ ಸದ್ಗುರುಭ್ಯೋ ನಿವೇದಯೇತ್' ಎಂದುದಾಗಿ ಆತನ ತನುಮನಧನಂಗಳೆಲ್ಲಾ ಗುರುವಿನ ಸೊಮ್ಮು ಆತನ ಸರ್ವಾಂಗವೆಲ್ಲವೂ ಪ್ರಸಾದಕ್ಷೇತ್ರ ಆ ಪ್ರಸಾದಕ್ಷೇತ್ರದೊಳಗಿದ್ದವರೆಲ್ಲರೂ ಪ್ರಸಾದಮಯ ಆ ಪ್ರಸಾದಮಯದೊಳಗಿದ್ದವರೆಲ್ಲರೂ ಪ್ರಸಾದದ ಬೆಳೆ
ಪ್ರಸಾದದಾಗು
ಆತ ಮುಟ್ಟಿದ ಪದಾರ್ಥವೆಲ್ಲವೆಲ್ಲವೂ ಪ್ರಸಾದವಪ್ಪುದು ಆತ ಮಾಡಿದುದೆಲ್ಲವು ಪ್ರಸಾದದ ಕಾಯಕ
ಪ್ರಸಾದದ ನಡೆ
ಪ್ರಸಾದದ ನುಡಿ. ಇಂತಪ್ಪ ಪ್ರಸಾದವಿದ್ದಲ್ಲಿಗೆ ಹೋಗಿ `ಅದು ಬೇಕು ಇದು ಬೇಕು' ಎಂದು ಓಗರಪದಾರ್ಥದ ಸವಿಯನರಸುವ ಪಾತಕದ್ರೋಹಿಗಳ ಮೆಚ್ಚ ನಮ್ಮ ಕೂಡಲಸಂಗಮದೇವ.