Pages   (key to Page Status)   


ಸಮತೆ ಎಂಬ ಕಂಥೆ ತೊಟ್ಟು
ಸುಬುದ್ಧಿ ಎಂಬ ಟೊಪ್ಪರವನಿಕ್ಕಿ
ವಿಷಯವೆಂಬ ಹಾವುಗೆಯ ಮೆಟ್ಟಿ
ತಮಂಧವೆಂಬ ಕುಳಿಯ ಬೀಳದೆ
ಕ್ರೋಧವೆಂಬ ಕೊರಡ ಎಡಹದೆ
ಮದವೆಂಬ ಚೇಳ ಮೆಟ್ಟದೆ ಗುಹೇಶ್ವರನ ಶರಣ ಬಂದೆನು
ಭಕ್ತಿಭಿಕ್ಷವನಿಕ್ಕೈ ಸಂಗನಬಸವಣ್ಣಾ.