ಸಹಜವ ನುಡಿದಡೆ ಸೇರುವರಿಲ್ಲ



Pages   (key to Page Status)   


ಸಹಜವ ನುಡಿದಡೆ ಸೇರುವರಿಲ್ಲ ಕಾಣಿರಣ್ಣಾ. ಅಸಹಜಕ್ಕಲ್ಲದೆ ಲೋಕ ಭಜಿಸದು. ಕೆರೆಯ ಕಟ್ಟಿಸುವನ (ಕಟ್ಟುವನ?) ಕಂಡು ಒಡ್ಡರಾಮಯ್ಯನೆಂದಡೆ ಮುಳಿಸಿನಿಂದ ಲಿಂಗತನುವ ನೋಯಿಸುವರೆ ? ನಮ್ಮ ಗುಹೇಶ್ವರಲಿಂಗವು ಜಗದೊಳಗೆ ಪರಿಪೂರ್ಣವಾದ ಕಾರಣ
ಶರಣರ ನೋವು ಮರಳಿ
ಪಾತಕರ ತಾಗಿದಡೆ
ಅಲ್ಲಯ್ಯ ನೋಡಿ ನಗುತಿರ್ದನು