ಹರಿಕಥಾಮೃತಸಾರ/ವರ್ಣ ಪ್ರಕ್ರಿಯ ಸಂಧಿ

ಹರಿಯು ಪಂಚಾಶದ್ವರಣ ಸು ಸ್ವರ ಉದಾತ್ತಾನುದಾತ್ತ ಪ್ರಚಯ ಸ್ವರಿತ ಸಂಧಿವಿಸರ್ಗ ಬಿಂದುಗಳೊಳಗೆ ತದ್ವಾಚ್ಯ | ಇರುವ ತತ್ತನ್ನಾಮರೂಪಗ ಳರಿತುಪಾಸನೆಗೈವರಿಳೆಯೊಳು ಸುರರೆ ಸರಿ ನರರಲ್ಲ ಅವರಾಡುವುದೆ ವೇದಾರ್ಥ || ೧ ||

ಈಶನಲಿ ವಿಜ್ಞಾನ ಭಗವ ದ್ದಾಸರಲಿ ಸದ್ಭಕ್ತಿ ವಿಷಯ ನಿ ರಾಸೆ ಮಿಥ್ಯಾವಾದದಲಿ ಪ್ರದ್ವೇಷ ನಿತ್ಯದಲಿ | ಈ ಸಮಸ್ತ ಪ್ರಾಣಿಗಳಲಿ ರ ಮೇಶನಿಹನೆಂದರಿದವರ ಅಭಿ ಲಾಷೆಗಳ ಪೂರೈಸುವುದೆ ಮಹಯಜ್ಞ ಹರಿಪೂಜೆ || ೨ ||

ತ್ರಿದಶ ಏಕಾತ್ಮನೆನಿಸಿ ಭೂ ಉದಕ ಶಿಖಿಯೊಳು ಹತ್ತು ಕರಣದಿ ಅಧಿಪರೆನಿಸುವ ಪ್ರಾಣಮುಖ್ಯಾದಿತ್ಯರೊಳು ನೆಲೆಸಿ | ವಿದಿತನಾಗಿದ್ದನವರತ ನಿರ ವಧಿಕ ಮಹಿಮನು ಸಕಲ ವಿಷಯವ ನಿಧನ ನಾಮಕ ಸಂಕರುಷಣಾಹ್ವಯನು ಸ್ವೀಕರಿಪ || ೩ ||

ದಹಿಕ ದೈಶಿಕ ಕಾಲಿಕತ್ರಯ ಗಹನ ಕರ್ಮಗಳುಂಟು ಇದರೊಳು ವಿಹಿತ ಕರ್ಮಗಳರಿತು ನಿಷ್ಕಾಮಕನು ನೀನಾಗಿ | ಬೃಹತಿ ನಾಮಕ ಭಾರತೀಶನ ಮಹಿತರೂಪವ ನೆನೆದು ಮನದಲಿ ಅಹರಹರ್ಭಗವಂತಗರ್ಪಿಸು ಪರಮ ಭಕುತಿಯಲಿ || ೪ ||

ಮೂರು ವಿಧ ಕರ್ಮಗಳೊಳಗೆ ಕಂ ಸಾರಿ ಭಾರ್ಗವ ಹಯವದನ ಸಂ ಪ್ರೇರಕನು ತಾನಾಗಿ ನಮರೂಪಂಗಳನು ಧರಿಸಿ | ಸೂರಿ ಮಾನವ ದಾನವರೊಳು ವಿ ಕಾರ ಶೂನ್ಯನು ಮಾಡಿ ಮಾಡಿಸಿ ಸಾರಭೋಕ್ತನು ಸ್ವೀಕರಿಸಿ ಕೊಡುತಿಪ್ಪ ಜೀವರಿಗೆ || ೫ ||

ಅನಲ ಪಕ್ವವ ಗೈಸಿದನ್ನವ ನನಲನೊಳು ಹೋಮಿಸುವ ತೆರದಂ ತನಿಮಿಷೇಶನು ಮಾಡಿ ಮಾಡಿಸಿದಖಿಲಕರ್ಮಗಳ | ಮನವಚನಕಾಯದಲಿ ತಿಳಿದನು ದಿನದಿ ಕೊಡು ಶಂಕಿಸದೆ ವೃಜಿನಾ ರ್ದನ ಸದಾ ಕೈಗೊಂಡು ಸಂತಯಿಸುವನು ತನ್ನವರ || ೬ ||

ಕುದುರೆ ಬಾಲದ ಕೊನೆಯ ಕೂದಲ ತುದಿ ವಿಭಾಗವ ಮಾಡಿ ಶತವಿಧ ವದರೊಳೊಂದನು ನೂರು ಭಾಗವ ಮಾಡಲೆಂತಿಹುದೊ | ವಿಧಿಭವಾದಿ ಸಮಸ್ತ ದಿವಿಜರ ಮೊದಲುಮಾಡಿ ತೃಣಾಂತ ಜೀವರೊ ಳಧಿಕ ನ್ಯೂನತೆಯಿಲ್ಲವೆಂದಿಗು ಜೀವ ಪರಮಾಣು || ೭ ||

ಜೀವನಂಗುಷ್ಟಾಗ್ರ ಮೂರುತಿ ಜೀವನಂಗುಟ ಮಾತ್ರ ಮೂರುತಿ ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು | ಏವಮಾದಿ ಅನಂತರೂಪದಿ ಯಾವದವಯವಗಳೊಳು ವ್ಯಾಪಿಸಿ ಕಾವ ಕರುಣಾಳುಗಳ ದೇವನು ಈ ಜಗತ್ರಯವ || ೮ ||

ಬಿಂಬ ಜೀವಾಂಗುಷ್ಟ ಮಾತ್ರದಿ ಇಂಬುಗೊಂಡಿಹ ಸರ್ವರೊಳು ಸೂ ಕ್ಷ್ಮಾಂಬರದಿ ಹೃತ್ಕಮಲ ಮಧ್ಯ ನಿವಾಸಿಯೆಂದೆನಿಸಿ | ಎಂಬರೀತಗೆ ಕೋವಿದರು ವಿ ಶ್ವಂಭರಾತ್ಮಕ ಪ್ರಾಜ್ಞ ಭಕ್ತ ಕು ಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು || ೯ ||

ಪುರುಷ ನಾಮಕ ಸರ್ವ ಜೀವರೊ ಳಿರುವ ದೇಹಾಕಾರ ರೂಪದಿ ಕರಣ ನಿಯಾಮಕ ಹೃಷೀಕಪನಿಂದ್ರಿಯಂಗಳಲಿ | ತುರಿಯ ನಾಮಕ ವಿಶ್ವ ತಾ ಹ ನ್ನೆರಡು ಬೆರಳುಳಿದುತ್ತಮಾಂಗದಿ ಎರಡಧಿಕ ಎಪ್ಪತ್ತು ಸಾವಿರ ನಾಡಿಯೊಳಗಿಪ್ಪ || ೧೦ ||

ವ್ಯಾಪಕನು ತಾನಾಗಿ ಜೀವ ಸ್ವ ರೂಪ ದೇಹದ ಒಳ ಹೊರಗೆ ನಿ ರ್ಲೇಪನಾಗಿಹ ಜೀವ ಕ್ರುತ ಕರ್ಮಗಳನಾಛರಿಸಿ | ಶ್ರೀ ಪಯೋಜಭವೇರರಿಂದ ಪ್ರ ದೀಪ ವರ್ಣ ಸುಮೂರ್ತಿ ಮಧ್ಯಗ ತಾ ಪೊಳೆವ ವಿಶ್ವಾದಿ ರೂಪದಿ ಸೇವೆ ಕೈಗೊಳುತ || ೧೧ ||

ಗರುಡ ಶೇಷ ಭವಾದಿ ನಾಮವ ಧರಿಸಿ ಪವನ ಸ್ವರೂಪ ದೇಹದಿ ಕರಣ ನಿಯಾಮಕನು ತಾನಾಗಿಪ್ಪ ಹರಿಯಂತೆ | ಸರಸಿಜಾಸನ ವಾಣಿ ಭಾರತಿ ಭರತನಿಂದೊಡಗೂಡಿ ಲಿಂಗದಿ ಇರುತಿಹರು ಮಿಕ್ಕಾದಿತೇಯರಿಗಿಲ್ಲವಾಸ್ಥಾನ || ೧೨ ||

ಜೀವನಕೆ ತುಷದಂತೆ ಲಿಂಗವು ಸಾವಕಾಶದಿ ಪೊಂದಿ ಸುತ್ತಲು ಪ್ರಾವರಣ ರೂಪದಲಿಪ್ಪುದು ಭಗವದಿಚ್ಛೆಯಲಿ | ಕೇವಲ ಜಡ ಪ್ರಕೃತಿ ಇದಕಧಿ- ದೇವತೆಯು ಮಹಲಕುಮಿಯೆನಿಪಳು ಆ ವಿರಜೆಯ ಸ್ನಾನ ಪರಿಯಂತರದಿ ಹತ್ತಿಹುದು || ೧೩ ||

ಆರಧಿಕ ದಶಕಲೆಗಳುಳ್ಳ ಶ ರೀರವನಿರುದ್ಧಗಳ ಮಧ್ಯದಿ ಸೇಪ್ಪವು ಜೀವ ಪರಮಾಚ್ಛಾದಿಕದ್ವಯವು | ಬಾರದಂದದಿ ದಾನವರನತಿ ದೂರಗೈಸುತ ಶ್ರೀ ಜನಾರ್ದನ ಮೂರು ಗುಣದೊಳಗಿಪ್ಪನೆಂದಿಗು ತ್ರಿವೃತುವೆಂದೆನಿಸಿ || ೧೪ ||

ರುದ್ರ ಮೊದಲಾದಮರರಿಗೆ ಅನಿ ರುದ್ಧ ದೇಹವೆ ಮನೆಯೆನಿಸುವುದು ಇದ್ದು ಕೆಲಸವ ಮಾಡರಲ್ಲಿಂದಿತ್ತ ಸ್ಥೂಲದಲಿ | ಕೃದ್ಧ ಖಳದಿವಿಜರು ಪರಸ್ಪರ ಸ್ಪರ್ಧೆಯಿಂದಲಿ ದ್ವಂದ್ವ ಕರ್ಮ ಸ ಮೃದ್ಧಿಗಳನಾಛರಿಸುವರು ಪ್ರಾಣೇಶನಾಜ್ಞೆಯಲಿ || ೧೫ ||

ಮಹಿಯೊಳಗೆ ಸುಕ್ಷೇತ್ರ ತೀರ್ಥದಿ ತುಹಿನ ವರುಷ ವಸಂತಕಾಲದಿ ದಹಿಕ ದೈಶಿಕ ಕಾಲಿಕತ್ರಯ ಧರ್ಮ ಕರ್ಮಗಳ | ದೃಹಿಣ ಮೊದಲಾದಮರರೆಲ್ಲರು ವಹಿಸಿ ಗುಣಗಳನನುಸರಿಸಿ ಸ ನ್ನಿಹಿತರಾಗಿದ್ದೆಲ್ಲರೊಳು ಮಾಡುವರು ವ್ಯಾಪಾರ || ೧೬ ||

ಕೇಶ ಸಾಸಿರ ವಿಧ ವಿಭಾಗವ ಗೈಸಲೆನಿತನಿತಿಹ ಸುಷುಮ್ನವು ಆ ಶಿರಾಂತದಿ ವ್ಯಾಪಿಸಿಹುದೀ ದೇಹ ಮಧ್ಯದಲಿ | ಆ ಸುಷುಮ್ನಕೆ ವಜ್ರ ಕಾರ್ಯ ಪ್ರ ಕಾಶಿನೀ ವೈದ್ಯುತಿಗಳಿಹವು ಪ್ರ ದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ || ೧೭ ||

ಆ ನಳಿನಭವ ನಾಡಿಯೊಳಗೆ ತ್ರಿ ಕೋಣ ಚಕ್ರವು ಇಪ್ಪುದಲ್ಲಿ ಕೃ ಶಾನುಮಂಡಲ ಮಧ್ಯಗನು ಸಂಕರುಷಣಾಹ್ವಯನು | ಹೀನ ಪಾಪಾತ್ಮಕ ಪುರುಷನ ಹಾನಿಗೈಸುತ ದಿನದಿನದಿ ವಿ ಜ್ಞಾನಮಯ ಶ್ರೀವಾಸುದೇವನು ಐದಿಸುವ ಕರುಣಿ || ೧೮ ||

ಮಧ್ಯನಾಡಿಯ ಮಧ್ಯದಲಿ ಹೃ ತ್ಪದ್ಮ ಮೂಲದಿ ಮೂಲಪತಿ ಪದ ಪದ್ಮ ಮೂಲದಲಿಪ್ಪ ಪವನನ ಪಾದ ಮೂಲದಲಿ | ಪೊದ್ದಿಕೊಂಡಿಹ ಜೀವಲಿಂಗನಿ ರುದ್ಧ ದೇಹ ವಿಶಿಷ್ಟನಾಗಿ ಕ ಪರ್ದಿ ಮೊದಲಾದಮರರೆಲ್ಲರು ಕಾದುಕೊಂಡಿಹರು || ೧೯ ||

ನಾಳ ಮಧ್ಯದಲಿಪ್ಪ ಹೃತ್ಕೀ ಲಾಲಜದೊಳಿಪ್ಪಷ್ಟದಳದಿ ಕು ಲಾಲ ಚಕ್ರದ ತೆರದಿ ಚರಿಸುತ ಹಂಸ ನಾಮಕನು | ಕಾಲ ಕಾಲಗಳಲ್ಲಿ ಎಣ್ದೆಸೆ ಪಾಲಕರ ಕೈ ಸೇವೆಗೊಳುತ ಕೃ ಪಾಳು ಅವರಭಿಲಾಷೆಗಳ ಪೂರೈಸಿಕೊಡುತಿಪ್ಪ || ೨೦ ||

ವಾಸವಾನುಜ ರೇಣುಕಾತ್ಮಜ ದಾಶರಥಿ ವೃಜಿನಾರ್ದನಮಲ ಜ ಲಾಶಯಾಲಯ ಹಯವದನ ಶ್ರೀ ಕಪಿಲ ನರಸಿಂಹ | ಈಸು ರೂಪದೊಳವರವರು ಸಂ ತೋಷ ಪಡಿಸುವ ನಿತ್ಯ ಸುಖಮಯ ವಾಸವಾಗಿಹ ಹೃತ್ಕಮಲದೊಳು ಬಿಂಬನೆಂದೆನಿಸಿ || ೨೧ ||

ಸುರಪನಾಲಯಕೈದಿದಡೆ ಮನ ವೆರಗುವುದು ಸತ್ಪುಣೈಅ ಮಾರ್ಗದಿ ಬರಲು ವಹ್ನಿಯ ಮನೆಗೆ ನಿದ್ರಾಲಸ್ಯ ಹಸಿ ತೃಷೆಯು | ತರಣಿ ತನಯನಿಕೇತನದಿ ಸಂ ಭರಿತ ಕೋಪಾಟೋಪ ತೋರುವು ದರವಿದೂರನು ನಿಋ ಋತಿಯೊಳಿರೆ ಪಾಪಗಳ ಮಾಳ್ಪ || ೨೨ ||

ವರುಣನಲ್ಲಿ ವಿನೋದ ಹಾಸ್ಯವು ಮರುತನೊಳು ಗಮನಾಗಮನ ಹಿಮ ಕರಧನಾಧಿಪರಲ್ಲಿ ಧರ್ಮದ ಬುದ್ಧಿ ಜನಿಸುವುದು | ಹರನ ಮಂದಿರದಲ್ಲಿ ಗೋಧನ ಧರಣಿ ಕನ್ಯಾ ದಾನಗಳು ಒಂ ದರೆಗಳಿಗೆ ತಡೆಯದಲೆ ಕೊಡುತಿಹ ಚಿತ್ತ ಪುಟ್ಟುವುದು || ೨೩ ||

ಹೃದಯದೊಳಗೆ ವಿರಕ್ತಿ ಕೇಸರ ಕೊದಗೆ ಸ್ವಪ್ನ ಸುಷುಪ್ತಿ ಲಿಂಗದಿ ಮಧುಹ ಕರ್ಣಿಕೆಯಲ್ಲಿ ಬರೆ ಜಾಗ್ರತಿಯು ಪುಟ್ಟುವುದು | ಸುದರುಶನ ಮೊದಲಾದ ಅಷ್ಟಾ ಯುಧವ ಪಿಡಿದು ದಿಶಾಧಿಪತಿಗಳ ಸದನದಲಿ ಸಂಚರಿಸುತೀ ಪರಿ ಬುದ್ಧಿಗಳ ಕೊಡುವ || ೨೪ ||

ಸೂತ್ರನಾಮಕ ಪ್ರಾಣಪತಿ ಗಾ ಯತ್ರಿ ಸಂಪ್ರತಿಪಾದ್ಯನಾಗೀ ಗಾತ್ರದೊಳು ನೆಲೆಸಿರಲು ತಿಳಿಯದೆ ಕಂಡ ಕಂಡಲ್ಲಿ | ಧಾತ್ರಿಯೊಳು ಸಂಚರಿಸಿ ಪುತ್ರಕ ಳತ್ರ ಸಹಿತನುದಿನದಿ ತೀರ್ಥ ಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು || ೨೫ ||

ನಾರಸಿಂಹ ಸ್ವರೂಪದೊಳಗೆ ಶ ರೀರನಾಮದಿ ಕರೆಸುವನು ಹದಿ ನಾರು ಕಳೆಗಳನುಳ್ಳಲಿಂಗದಿ ಪುರುಷನಾಮಕನು | ತೋರುವನು ಅನಿರುದ್ಧ್ನನೊಳು ಶಾಂ ತೀ ರಮಣನನಿರುದ್ಧರೂಪದಿ ಪ್ರೇರಿಸುವ ಪ್ರದ್ಯುಮ್ನ ಸ್ಥೂಲಕಳೇವರದೊಳಿದ್ದು || ೨೬ ||

ಮೊದಲು ತ್ವಕ್ ಚರ್ಮಗಳು ಮಾಂಸವು ರುಧಿರ ಮೇದೋಮಜ್ಜಾಸ್ಥಿಗ ಳಿದರೊಳಗೆ ಏಕೋನ ಪಂಛಾಶನ್ಮರುದ್ಗಣವು | ನಿಧನ ಹಿಂಕಾರಾದಿ ಸಾಮಗ ನದರನಾಮದಿ ಕರೆಸುತೊಂಬ ತ್ತಧಿಕ ನಾಲ್ವತ್ತೆನಿಪರೂಪದಿ ಧಾತುಗಳೊಳಿಪ್ಪ || ೨೭ ||

ಸಪ್ತಧಾತುಗಳೊಳಹೊರಗೆ ಸಂ ತಪ್ತಲೋಹಗತಾಗ್ನಿಯಂದದಿ ಸಪ್ತ ಸಾಮಗನಿಪ್ಪನನ್ನ್ಮಯಾದಿ ಕೋಶದೊಳು | ಲಿಪ್ತನಾಗದೆ ತತ್ತದಾಹ್ವಯ ಕ್ಲುಪ್ತ ಭೋಗವ ಕೊಡುತ ಸ್ವಪ್ನ ಸು ಷುಪ್ತಿ ಜಾಗ್ರತಿಯೀವ ತೈಜಸ ಪ್ರಾಜ್ಞ ವಿಶ್ವಾಖ್ಯ || ೨೮ ||

ತೀವಿಕೊಂಡಿಹವಲ್ಲಿ ಮಜ್ಜ ಕ ಳೇವರದಲಂಗುಲಿಯ ಪರ್ವದ ಠಾವಿನಲಿ ಮುನ್ನೂರ ಅರವತ್ತೆನಿಪ ತ್ರಿಸ್ಥಳದಿ | ಸಾವಿರದ ಎಂಭತ್ತು ರೂಪವ ಕೋವಿದರು ಪೇಳುವರು ದೇಹದಿ ದೇವತೆಗಳೊಡಗೂಡಿ ಕ್ರೀಡಿಸುವನು ರಮಾರಮಣ || ೨೯ ||

ಕೀಟಪೇಶಸ್ಕಾರಿ ನೆನವಲಿ ಕೀಟ ಭಾವವ ತೊರೆದು ತದ್ವತ್ ಖೇಟ ರೂಪವನೈದಿಯಾಡುವ ತೆರದಿ ಭಕುತಿಯಲಿ | ಕೈಟಭಾರಿಯ ಧ್ಯಾನದಿಂದ ಭ ವಾಟವಿಯನತಿ ಶೀಘ್ರದಿಂದಲಿ ದಾಟಿ ಸಾರೂಪ್ಯವನುಯೈದುವರಲ್ಪ ಜೀವಿಗಳು || ೩೦ ||

ಈ ಪರಿಯ ದೇಹದೊಳು ಭಗವ ದ್ರೂಪಗಳ ಮರಿಯದಲೆ ಮನದಿ ಪ ದೇ ಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರನು | ಗೋಪತಿ ಜಗನ್ನಾಥ ವಿಠ್ಠಲ ಸ ಮೀಪಗನು ತಾನಾಗಿ ಸಂತತ ಸಾಪರೋಕ್ಷಿಯ ಮಾಡಿ ಪೊರೆವನು ಎಲ್ಲ ಕಾಲದಲಿ || ೩೧ ||