Pages   (key to Page Status)   


ಹರಿದ ಶಿರವ ಹಚ್ಚಿ ಮೆರೆದರು ನಮ್ಮ ಶರಣರು
ಭಕ್ತಿಯ ಪ್ರಭಾವದಿಂದ. ಬರಡಾಕಳವ ಕರೆದು ಚರತತಿಗಿತ್ತರು ನಮ್ಮ ಶರಣರು
ಭಕ್ತಿಯ ಪ್ರಭಾವದಿಂದ. ಪೂರ್ವಕುಲಗೋತ್ರವನಳಿದು ಪುನೀತರಾದರು ನಮ್ಮ ಶರಣರು ಭಕ್ತಿಯ ಪ್ರಭಾವದಿಂದ. ``ಭಕ್ತೇರಸಾಧ್ಯಂ ನ ಹಿ ಕಿಂಚಿದಸ್ತಿ ಭಕ್ತ್ಯಾ ಸರ್ವಸಿದ್ಧಯಃ ಸಿದ್ಧ್ಯಂತಿ ' ಎಂಬ ವಚನವುಂಟಾಗಿ_ಭಕ್ತಂಗೆ ಅಸಾಧ್ಯವಾವುದು ? ಅದು ಕಾರಣ
ನಿಮ್ಮಡಿಯ ಭಕ್ತಿಯನೊಂದನೆ ಕರುಣಿಸಿ ಕಾಪಾಡಯ್ಯಾ ಕೂಡಲಚೆನ್ನಸಂಗಮದೇವಾ.