Pages   (key to Page Status)   


ಹರಿಯ ಹಾದಿಯಲ್ಲಿ ಕರಿಯ ಮಲ್ಲಿಗೆಯ ಕಂಡೆ. ಕರಿಯ ಮಲ್ಲಿಗೆಯ ಕಮಲವ ಕುಯಿದು ಕಾಮಾರಿಯ ಚರಣವನರ್ಚಿಸಬಲ್ಲ ನಿಸ್ಸೀಮ ಶರಣಂಗೆ
ನಾಮ ಸೀಮೆಗಳೆಂದೇನು? ಕಾಲ ಕಲ್ಪಿತವೆಂದೇನು? ನಿರ್ವಿಕಲ್ಪಭಾವದಲ್ಲಿ ಲಿಂಗಾರ್ಚನೆಯ ಮಾಡುವ ಶರಣಂಗೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.