Pages   (key to Page Status)   


ಹಸಿವು ತೃಷೆ ವಿಷಯ ವ್ಯಸನ ಈ ನಾಲ್ಕು ಉಳ್ಳವರು ಗುಹೇಶ್ವರಲಿಂಗದಲ್ಲಿ ಐಕ್ಯರೆಂತಪ್ಪರೊ ? ಅರಿದರಿದು ಆಚರಿಸಲರಿಯದ ಕಾರಣ ಲಿಂಗೈಕ್ಯರಲ್ಲ. ಅರಿದನಾದಡೆ ಹಸಿವ ವಿೂರಿ ಉಂಬ
ತೃಷೆಯ ವಿೂರಿ ಕೊಂಬ
ವಿಷಯವನಾಳಿಗೊಂಬ
ವ್ಯಸನವ ದಾಂಟಿ ಭೋಗಿಸುವ. ಇದನರಿಯದಲೆ ಚರಿಸುವ ಕೀಟಕ ಮಾನವರ ಕಂಡು ಎನ್ನ ಮನ ನಾಚಿತ್ತು ಗುಹೇಶ್ವರಾ.