Pages   (key to Page Status)   


ಹಿಂದಣ ಶಂಕೆಯ ಹರಿದು
ಮುಂದಣ ಭವವ ಮರೆದು
ಉಭಯ ಸಂದುಗಡಿದು
ಅಖಂಡಬ್ರಹ್ಮವೆ ತಾನಾದ ಶರಣಂಗೆ ಜನನವಿಲ್ಲ
ಮರಣವಿಲ್ಲ ; ಕಾಲವಿಲ್ಲ
ಕಲ್ಪಿತವಿಲ್ಲ ; ಸುಖವಿಲ್ಲ
ದುಃಖವಿಲ್ಲ ; ಪುಣ್ಯವಿಲ್ಲ
ಪಾಪವಿಲ್ಲ ; ಪ್ರಳಯ ಮಹಾಪ್ರಳಯಂಗಳು ಮುನ್ನವೇ ಇಲ್ಲ. ಇದು ಕಾರಣವಾಗಿ
ಅನಂತಕೋಟಿ ಅಜಾಂಡಂಗಳು ಅಳಿದುಹೋದಡೆಯೂ ಅಖಂಡೇಶ್ವರಾ
ನಿಮ್ಮ ಶರಣ ನಿತ್ಯನಾಗಿ ಉಳಿದಿಹನು.