ಹೃದಯಮಧ್ಯದಲೊಂದು ಸದಮಲದುದಯವ ಕಂಡೆ.



Pages   (key to Page Status)   


ಹೃದಯಮಧ್ಯದಲೊಂದು ಸದಮಲದುದಯವ ಕಂಡೆ. ಅದಕೆ ಉದಯವಿಲ್ಲ
ಮಧ್ಯಾಹ್ನವಿಲ್ಲ
ಅಸ್ತಮಯವಿಲ್ಲ ನೋಡಾ. ಆ ಸದಮಲದ ಎಸಳಿನಿಂದ ಪೂಜೆಯಮಾಡಬಲ್ಲ ಸರ್ವಜ್ಞಂಗೆ ಹೊರ ಉಪಚಾರವೆಂಬ ಬರಿಯ ಭಾವದ ಬಳಲಿಕೆಯೆಂದೇನು ಹೇಳಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.