ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೧೭

ಈ ಪುಟವನ್ನು ಪರಿಶೀಲಿಸಲಾಗಿದೆ
೧೦೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,


ಪ್ರಾಣಿಯದು ಒಳ್ಳೇದು ; ಯಾವ ವೃಕ್ಷದ ಪರ್ಣಗಳು ಶ್ರೇಷ್ಟವು ಯಾವ ಪುಷ್ಪವು ಶ್ರೇಷ್ಠವಾದದ್ದು ; ಯಾವ ಫಲವು ಉತ್ತಮ ? ಯಾವ ರಾಜನು ಶ್ರೇಷ್ಠನು ಯಾವ ಮಾಧುರ್ಯವು ಶ್ರೇಷ್ಠವಾದದ್ದು ?” ಎಂದು ಪ್ರಶ್ನೆ ಮಾಡಿದನು. ಬೀರಬಲನ ಹೊರತು ಉಳಿದ ಸಭಾಸದರೆಲ್ಲರು ಸುಮ್ಮನೆ ಕುಳಿತುಕೊಂಡರು ಬೀರಬಲನು ಕೈಮುಗಿದು “ಜೀಯಾ ! ಕ್ಷೀರವು ಮಾತೆಯದು ಶ್ರೇಷ್ಠವಾದದ್ದು ಯಾಕೆಂದರೆ, ಸ್ತನ್ಯಪಾನದಿಂದಲೇ ಯಾವತ್ತು ಪ್ರಾಣಿಗಳ ಪಾಲನೆ ಪೋಷಣೆಯಾಗುವದು ವೀಳ್ಯದ ಎಲೆಯು ಶ್ರೇಷ್ಠವಾದದು: ಯಾಕಂದರೆ ಯಾವದಾದರೊಂದು ಕಾರ್ಯಕ್ಕೆ ಕೈಹಾಕಿದ ಮನುಷ್ಯನಿಗೆ, ಅವನ ಯಜಮಾನನು ನೆರೆದ ಸಭೆಯಲ್ಲಿ ವೀಳ್ಯವನ್ನು ಕೊಡುತ್ತಾನೆ. ಅದರಿಂದ ವೀಳ್ಯವನ್ನು ಸ್ವೀಕರಿಸಿದ ಮನುಷ್ಯನು ತನ್ನ ಪ್ರಾಣಾಂತ್ಯದವರೆಗೂ ಕಾರ್ಯವನ್ನು ಮಾಡಿಯೇ ತೋರಿಸುತ್ತಾನೆ. ಪುಷ್ಪಗಳಲ್ಲಿ ಹತ್ತಿಯ ಹೂವು ಶ್ರೇಷ್ಠವಾದದ್ದು ಯಾಕಂದರೆ ಆ ಪುಷ್ಪದಿಂದಲೇ ಯಾವತ್ತು ಮನುಷ್ಯ ಪ್ರಾಣಿಗಳ ಮಾನವು ಉಳಿಯುತ್ತದೆ. ಇನ್ನು ಫಲಗಳಲ್ಲಿ ಪುತ್ರಫಲವು ಅಧಿಕವಾದದ್ದು; ಯಾಕಂದರೆ ಆ ಪುತ್ರನಿಂದ ಕುಲಕೋಟಿಗಳೆಲ್ಲ ಉದ್ಧೃತವಾಗುತ್ತವೆ ರಾಜರಲ್ಲಿ ಇಂದ್ರನು ಶ್ರೇಷ್ಠನಾದವನು ಯಾಕಂದರೆ ಇಂದ್ರನು ವೃಷ್ಢಿಯನ್ನುಂಟು ಮಾಡಿ ಯಾವತ್ತೂ ಚರಾಚರಗಳನ್ನು ರಕ್ಷಿಸುತ್ತಾನೆ. ಮಾಧುರ್ಯದಲ್ಲಿ ವಾಂಘ್ಮಾಧುರ್ಯವು ಶ್ರೇಷ್ಠವಾದದ್ದು ಯಾಕಂದರೆ ವಾಂಘ್ಮಾಧುರ್ಯದಿಂದ ಯಾವತ್ತೂ ಜನರ ಮನಸ್ಸನ್ನು ಒಲಿಸಿಕೊಳ್ಳುವದಕ್ಕೆ ಬರುತ್ತದೆ.

-( ೫೦. ದಂಡನೆಗೆ ಪ್ರತಿಯಾಗಿ ಪಾರಿತೋಷಕವು.)-

ದಿಲ್ಲಿಯಲ್ಲಿ ಒಬ್ಬ ಮನುಷ್ಯನಿದ್ದನು ಅವನ ಮುಖವನ್ನು ಪ್ರಾತಃಕಾಲದಲ್ಲಿ ಎದ್ದ ಕೂಡಲೆ ಅವಲೋಕನ ಮಾಡಿದರೆ, ಸಂಜೆಯವರೆಗೆ ನೋಡಿದವನಿಗೆ ಅನ್ನವು ಸಿಗುವದಿಲ್ಲ” ಎಂದು ಜನರಲ್ಲಿ ದೃಢನಂಬಿಗೆಯು ಉತ್ಪನ್ನವಾಗಿತ್ತು ಅದರಿಂದ ಮಧ್ಯಾಹ್ನದವರೆಗೆ ಆ ಮನುಷ್ಯನ ಮುಖವನ್ನು ನೋಡಲಿಕ್ಕೆ ಯಾರೂ ಇಷ್ಠಪಡುತ್ತಿದ್ದಿಲ್ಲ ಈ ವಾರ್ತೆಯು ಕರ್ಣೋಪಕರ್ಣವಾಗಿ ಬಾದಶಹನಿಗೆ ತಲುಪಿತು. ಆಗ ಅವನು ಆ ಮಾತನ್ನು ಪರೀಕ್ಷಿಸಿ ನೋಡಬೇಕೆಂದು ನಿಶ್ಚಯಿಸಿ, ಆ ಮನುಷ್ಯನನ್ನು ಕರೆಯಿಸಿಕೊಂಡು ತನ್ನ ಅಂತಃಪುರದಲ್ಲಿ ಒಂದು ದಿವಸ ಇಟ್ಟುಕೊಂಡನು. ಮರುದಿವಸ ಪ್ರಾತಃಕಾಲದಲ್ಲಿ ಎದ್ದ ಕೂಡಲೆ ಮೊಟ್ಟಮೊದಲು ಬಾದಶಹನು ಅವನ ಮುಖವನ್ನವಲೋಕಿಸಿದನು,