ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೩

ಈ ಪುಟವನ್ನು ಪ್ರಕಟಿಸಲಾಗಿದೆ
೩೪೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


" ಬಾಜಾರಕಾಕುತ್ತಾ ” ಎಂಬದು, ಈ ಕೊತವಾಲನು ಹ್ಯಾಗಂದರೆ, “ ಯಜಮಾನನು ತನಗೆ ಆಹಾರವನ್ನು ಹಾಕುತ್ತ ಜೋಪಾಸನೆ ಮಾಡುತ್ತಿರು ವಾಗ ಮಾತ್ರ ಶುನಕವು ಒಡೆಯನ ಸುತ ಮುತ್ತು ಚಲ್ಲಾಟವಾಡಿ ಅವನ ಮಾನಾನಂದವನ್ನು ಮಾಡುತ್ತಿರುವಂತೆ ಈ ಕೊತವಾಲನು ನನ್ನೊಡನೆ ಕೆ ಲವು ದಿವಸ ಸ್ನೇಹಿತನಂತೆ ನಟಿಸಿ, ಈ ನನ್ನ ಹೆಂಡತಿಯು ರಾಜಪುತ್ರನ ಕೊಲೆಯ ಸಂಗತಿಯನ್ನು ತಿಳಿಸಿದಕೂಡಲೆ, ಹಿಂದಿನ ಉಪಕಾರವನ್ನೆಲ್ಲ ಮ ರೆತು ಬಿಟ್ಟು, ಅವಳು ಹೇಳಿದ ಸಂಗತಿಯು ಸತ್ಯವಾದದ್ದೋ, ಅಥವಾ ಮಿ ಥ್ಯವಾದದ್ದೋ ಎಂಬದನ್ನು ಸಹಾ ವಿಚಾರಿಸದೆ, ನನ್ನನ್ನು ಚತುರ್ಭುಜನ ನ್ನಾಗಿ ಮಾಡಿ, ತಮ್ಮ ಸನ್ನಿಧಿಗೆ ತಂದು ನಿಲ್ಲಿಸಿದನು. ಇನ್ನು ನಾಲ್ಕನೇ ವ ಸ್ತುವಾದ " ಗದ್ದಿಕಾ ಗಧಾ ” ಎಂಬದು ಆವಸ್ತುವು ತಾವೇ ಆಗಿರುವಿರಿ ! ಯಾಕಂದರೆ, ಕೊತವಾಲನು ನನ್ನನ್ನು ತಮ್ಮ ಸನ್ನಿಧಿಯಲ್ಲಿ ತಂದು ನಿಲ್ಲಿಸಿ ನಾನು ಮಾಡಿದ ಅಪರಾಧವನ್ನು ಅರುಹಲು, ತಾವು ಯಾವಸಂಗತೆಯ ನ್ನೂ ಅನ್ವೇಷಣ ಮಾಡದೆ ನನ್ನ ತಲೆ ಹೊಡೆಯುವಂತೆ ಅಪ್ಪಣೆ ಮಾಡಿಬಿಟ್ಟ ರಿ ! ಇಷ್ಟೇ ಅಲ್ಲ, ಈ ಕಾಲದ ವರೆಗೂ, ರಾಜ ಪುತ್ರನು ಜೀವದಿಂದ ಇರುವ ನೋ, ಅಥವಾ ಮೃತನಾಗಿರುವನೋ ಎಂಬದರ ಕಡೆಗೆ ಲಕ್ಷ್ಯವನ್ನೇ ಕೊಡ ಲಿಲ್ಲ. ಇನ್ನೂ ಆ ಕರಬೂಜಿ ಹಣ್ಣಿನ ತುಂಡುಕಳು ಹಾಗೇ ಪೆಟ್ಟಿಗೆಯಲ್ಲಿವೆ ಬೇಕಾದರೆ ತರಿಸಿಕೊಂಡು ನೋಡಬೇಕು ನಿಮ್ಮ ನಾಲ್ಕು ವಸ್ತುಗಳು ನಿಮಗೆ ಮುಟ್ಟಿದವು ಈ ಬಗ್ಗೆ ಪ್ರತ್ಯುತ್ತರವನ್ನು ದಯಪಾಲಿಸಬೇಕು” ಎಂದು ಬಿ ನ್ನವಿಸಿದನು.
ಈ ಪ್ರಕಾರ ಬೀರಬಲನ ಕಥನವನ್ನು ಕೇಳಿ, ಮಲಿಯಾಳದರಸನು ಬಹಳ ಸಂತೋಷಹೊಂದಿ, ಅವನ ಚಾತುರ್ಯವನ್ನು ಬಹು ಪರಿಯಾಗಿ ಪ್ರಶಂಸ ಮಾಡಿದನು. ನಾಲ್ಕು ವಸ್ತುಗಳು ತಲುಪಿದವೆಂದು, ಪ್ರತಿ ಲೇಖವ ನ್ನು ಕೊಟ್ಟು ವಸ್ತ್ರಾಭರಣಗಳಿಂದ ಸನ್ಮಾನಿಸಿ ಅಪ್ಪಣೆ ಕೊಟ್ಟನು ಬೀ ರಬಲನು ತನ್ನ ಸತಿಯನ್ನೂ, ಆ ವೇಶೈಯನ್ನೂ ಕರೆದುಕೊಂಡು ದಿಲ್ಲಿಗೆ ಹೊರಟು ಬಂದನು.
ಆಮೇಲೆ ಬಾದಶಹನಿಗೆ ಬೆಟ್ಟಯಾಗಿ ಯಾವತ್ತು ವೃತ್ತಾಂತವನ್ನು ಕಥನಮಾಡಿದನು ಅದನ್ನು ಕೇಳಿಬಾದಶಹನು ಸಂತುಷ್ಟನಾಗಿ, ಬಹಳೇ ಸ ನ್ಮಾನಿಸಿದನು.
... ೧೭೮. ಟೂಟ, ಘಾಟ, ಸಡೇಕೊ, ಕೈಸೇ ವಿಧಿ ಸರಾಹಿಯೇ! ” ಒಂದುಸಾರೆ ಬಾದಶಹನು, ಈ ಮೇಲೆ ಹೇಳಿದ ಸಮಸ್ಯೆಯನ್ನು ಕೊ