ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೫

ಈ ಪುಟವನ್ನು ಪ್ರಕಟಿಸಲಾಗಿದೆ
೩೪೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು

ಬಾಷ್ಯದಮೇಲೆಬಿತ್ತು ಅದು ಧೂಮ (ಹೊಗೆ)ಯಂತೆ ಕಂಡುಬಂದದ್ದರಿಂದ ಕೇಹಿ ಕಾರಣ ಪ್ರಾತ ಬಪಾತ ಹೈ ವಾನೀ ! ಎಂಬ ಸಮಸ್ಯೆಯನ್ನು ರಚ ನೆಮಾಡಿಕೊಂಡು ಬಂದು ಬೀರಬಲನನ್ನು ಕುರಿತು, “ ಬೀರಬಲ್ಲ ? ಈಗ ಶೀತಕಾಲವಿದ್ದು ನೀರು ಗಡ್ಡೆಗಟ್ಟಿ ಭರ್ಪದಂದೆ ಆಗಬೇಕು, ಹೀಗಿದ್ದು, ಪ್ರಾತಃಕಾಲದಲ್ಲಿ ನೀರಮೇಲೆ ಹೊಗೆಯು ಕಾಣುವದಲ್ಲಾ: ಇದರ ಕಾರಣ ವೇನು? ಎಂದು ಪ್ರಶ್ನೆ ಮಾಡಿದನು. ಆ ಕೂಡಲೆ ಬೀರಬಲನು.
ಏಕ ಸಮೈ ಲಂಕಾಪತಿ ರಾವನ, ಆನಿ ಹರೀಸಿಯ ರಾಮಕೀ ರಾನೀ
ಕೋಪಿಚಡೇ ದಶರತ್ಥಕೆ ನಂದನ, ಅಂಜನಿಪೂತ ಭಯೋ ಅಗವಾ
ನೀ | ಬಾಧಿಲಗೋಟ ಕಗೂರ ಚಢ್ಯೋ ಅರು ಲಂಕಜರೀ ಧರತೀ
ಅಕುಲಾನೀ ! ಜಾಯ ಸಮುದ್ರಮೆ ಪೂಛ ಬು‍‌ಝೀ ಇಹಿಕಾರಣ
ಪ್ರಾತ ಬಪಾತ ಹೈ ವಾನೀ ||
ಅಂದರೆ "ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಅರಣ್ಯವಾಸಕ್ಕೆ ಹೋದಾಗ ಲಂಕಾಧಿಪತಿಯಾದ ದಶಮುಖನು, ಸೀತಾದೇವಿಯ ಸೌಂದರ್ಯ ದ ಮಹಿಮಾತಿಶಯವನ್ನು ಕೇಳಿ ಮೋಹಿತರಾಗಿ ಸನ್ಯಾಸಿಯ ವೇ‍ಷವನ್ನು ಧಾರಣ ಮಾಡಿಕೊಂಡು ರಾಮಚಂದ್ರ ಮತ್ತು ಲಕ್ಷ್ಮಣರಿಲ್ಲದ ಸಂಧಿಯ ನ್ನು ಸಾಧಿಸಿ, ಸೀತಾದೇವಿಯನ್ನು ಹರಣಮಾಡಿಕೊಂಡು ಹೋದನು ಅದ ರಿಂದ ಶ್ರೀರಾಮನು ಸುಗ್ರೀವನ ಸ್ನೇಹವನ್ನು ಸಂಪಾದಿಸಿ, ಆವನ ಮಂತ್ರಿ ಯಾದ ಅಂಜನಾಸುತನನ್ನು ಸೀತಾದೇವಿಯ ಶೋಧಕ್ಕಾಗಿ ಕಳಿಸಿದನು. ಆಂಜನೇಯನು ಸೀತಾದೇವಿಯಿದ್ದಲಂಕಾನಗರವನ್ನು ಪ್ರವೇಶಿಸಿ ಅವಳಸ್ಥಿತಿ ಯನ್ನು ಕಣ್ಣಿನಿಂದ ನೋಡಿ ಆಮೇಲೆ ದಶಮುಖನಿಗೆ ಹಿತವಾಕ್ಯಗಳನ್ನು ಬೋಧಮಾಡುವದಕ್ಕೆ ರಾವಣನ ಸಭೆಯನ್ನು ಪ್ರವೇಶಿಸಿ ರಾಮಚಂದ್ರನ ಶೌರ್ಯೋದಾರ್ಯಗುಣಗಳನ್ನು ವರ್ಣಿಸಿ ಸೀತಾದೇವಿಯನ್ನು ರಾಮಚಂದ್ರನಿಗೆ ಒಪ್ಪಿಸಿಬಿಡು ಎಂದು ಬೋಧೆಮಾಡಲು ರಾವಣನು ಸಿಟ್ಟಿಗೆದ್ದು, ಹನುಮಂ ತನ ಪುಚ್ಛಕ್ಕೆ ಬಟ್ಟಿಗಳನ್ನು ಸುತ್ತಿಸಿ ತೈಲಾವಗಾಹನ ಮಾಡಿಸಿ ಬೆಂಕೀ ಹಚ್ಚಿದನು ಆ ಹನುಮಂತನು ತನ್ನ ಪುಚ್ಛದುರಿಯಿಂದ ಲಂಕಾಪಟ್ಟಣವ ನ್ನು ದಹನಮಾಡಿ ಆ ಬಾಲವನ್ನು ಸಮುದ್ರದಲ್ಲಿ ಅದ್ದಿದನು. ಆ ಉಷ್ಣತೆ ಯಿಂದ ಶೀತಕಾಲದಲ್ಲಿ ಸಹ ಜಲದ ಮೇಲೆ ಹೊಗೆ ಹೊರಡುತ್ತದೆ ಎಂದು ಹೇಳಿ ಅವನಸಮಸ್ಯೆಯನ್ನು ಮಾರ್ಣ ಮಾಡಿದನು.

-(೧೮೦ ಶೌಚ ಕೂಪದಲ್ಲಿಯ ಚಿತ್ರ)-

ಮಶದ ಪಟ್ಟಣದ ಬಾದಶಹನು ಯಾವದೋ ಒಂದು ಕಾರ್ಯದುದ್ದಿ