ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೪೩

ಈ ಪುಟವನ್ನು ಪ್ರಕಟಿಸಲಾಗಿದೆ

೧. ಚಾತುರ್ಯದಿಂದ ದೇವರನ್ನ ಗುರುತಿಸಬೇಕು.

ಅಕಬರ ಬಾದಶಹನ ಕಾಲದಲ್ಲಿ ಒಬ್ಬಾನೊಬ್ಬ ಚಿತ್ರಕಾರನು ಚಿತ್ರಕಲೆಯಲ್ಲಿ ಒಳ್ಳೆ ನಿಪುಣತೆಯನ್ನು ಹೊಂದಿದ್ದನು. ಪ್ರತಿಯೊಂದು ಭಾವವಟವನ್ನು ಸಿದ್ಧಪಡಿಸಬೇಕಾದರೆ ಐದುಸಹಸ್ರ ರೂಪಾಯಿಗಳ ಬೆಲೆಯನ್ನು ಹೇಳುತಿದ್ದನು. ಇವನ ಚಾತುರ್ಯವನ್ನು ಪರೀಕ್ಷಿಸಬೇಕೆಂದು ದೇವರು ಸಾವುಕಾರನ ವೇಷವನ್ನು ಧರಿಸಿಕೊಂಡು, ಅ ಚಿತ್ರಕಾರನ ಬಳಿಗೆ ಬಂದು ನುಡಿದದ್ದೇನಂದರೆ; - "ನೀನು ನನ್ನ ಭಾವಚಿತ್ರವನ್ನು ನನ್ನ ಪ್ರತಿಯೊಂದು ಅವಯವವಿದ್ದಂತೆ ಬರೆದು ಕೊಟ್ಟರೆ ನಿನಗೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಕೊಡುತ್ತೇನೆ" ಎಂದು ಹೇಳಿದನು. ಆಗ ಚಿತ್ರಕಾರನು ಆ ಸಾವುಕಾರನ ಮಾತಿಗೆ ಸಂತೋಪದಿಂದ ಒಪ್ಪಿಕೊಂಡನು ಮುಂದೆ ಸ್ವಲ್ಪದಿವಸಗಳ ಮೇಲೆ ಒಂದು ಚಿತ್ರವನ್ನು ಬರೆದುಕೊಂಡು ಬಂದು ಆ ಸಾಹುಕಾರನಿಗೆ ತೋರಿಸಿದನು. ಆಗ ಆ ಸಾವುಕಾರನು ತನ್ನ ಭಾವಚಿತ್ರವನ್ನು ಪರೀಕ್ಷಿಸ ಹತ್ತಲು ಒಂದು ಕಿವಿಯು ಸ್ವಲ್ಪ ಉದ್ದವಾಗಿದ್ದಂತೆ ಕಂಡು ಬಂತು ಕೂಡಲೆ ಇದು ಸರಿಯಾಗಿ ಇಲ್ಲವೆಂದು ಹೇಳಿ ಅದರೊಳಗಿನ ನ್ಯೂನತೆ


ನಮ್ಮಲ್ಲಿ ಕನ್ನಡ ವೇದಾಂತಗ್ರಂಥಗಳು ಕಾವ್ಯಗ್ರಂಥಗಳು, ಶಿವಪುರಾಣಗಳು ಚಾತುರವಾದ ಕಥೆಗಳು, ಜ್ಯೋತಿಷ್ಯಗ್ರಂಥಗಳು, ವೈದ್ಯಗ್ರಂಥಗಳು, ಯಕ್ಷಗಾನ ಗ್ರಂಥಗಳು, ವೀರಶೈವ ಮತಗ್ರಂಥಗಳು, ನಾಟಕಗಳು, ಕನ್ನಡ ಸಂಸ್ಕೃತ ಗ್ರಂಥಗಳು ಸಿಗುವವು, ಬೇಕಾದವರು ಬರದು ತರಿಸಿಕೊಳ್ಳಬಹುದು.

ನಮ್ಮ ವಿಳಾಸ;- ಶ್ರೀ. ಕ ನ್ನ ಯ್ಯ ಶೆ ಟ್ಟಿ

ಕರ್ನಾಟಕ ಬುಕ್ ಡಿಪೋ ಏಜಂಟ್ ಬಳ್ಳಾರಿ.