ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ.

೪೫


ಅದಕ್ಕೆ ಅಜಿತನು "ಹೌದು, ಗೊತ್ತಿದೆ, ಕರಿ ಹಡಗಿಗೆ ಹೋಗೋಣ, ಬನ್ನಿ" ಎಂದು ಕರೆದನು.

ಹಾಗೆಯೇ ಏಳು ಮಂದಿ ಯುವಕರೂ ಏಳು ಮಂದಿ ಕನ್ನಿಕೆಯರೂ ಸಮುದ್ರದ ಬಳಿಗೆ ಹೋದರು. ಅಜಿತನು ಎಲ್ಲರಿಗಿಂತಲೂ ಮುಂದಿನಿಂದ ನಡೆಯುತ್ತ, “ಭಯ ಪಡಬೇಡಿರಿ; ಪುರುಷಾಮೃಗವು ಸಾವಿಲ್ಲ ದುದಲ್ಲ ! ದಾರಕ, ಕ್ಷಾಲಕ, ಮೊದಲಾದವರು ಈಗ ಎಲ್ಲಿದ್ದಾರೆ? ಅವರನ್ನು ಅಪ್ಪಳಿಸಿದವನು ನಾನೇ ಅಲ್ಲವೆ ?” ಎಂದು ಕಿವಿಯಲ್ಲಿ ಹೇಳುತ್ತ, ಅವರಿಗೆ ಧೈರ್ಯ ಕೊಡುತಿದ್ದನು. ಎಲ್ಲರೂ ಬಿಕ್ಕಿ ಬಿಕ್ಕಿ ಅಳುತ್ತ, ಹಡಗನ್ನು ಹತ್ತಿದರು. ಅದು ವಾಯುವೇಗದಿಂದ ಶತಪುರದ ಮಾರ್ಗವಾಗಿ ತೇಲುತ್ತ ಹೋಯಿತು.