ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೪ ೩೧. ಎಂಥ ನಾಡಿದು ಎಂಥ ನಾಡಿದು ಎಂಥ ಕಾಡಾಯಿತೋ ! ಹುಲುಸಾದ ಬೆಳೆ ಹೋಗಿ ಹುಲ್ಲುಕೊಳೆ ತುಂಬಿಹುದೊ ! ಹಗೆಯ ಹೆಸರನ್ನು ಕೇಳಿ ಹುಲಿಯಂತೆ ಹಸುಗೂಸು ನೆಗೆದು ತೊಟ್ಟಿಲ ತುಳಿದು ಮೆಟ್ಟುತಿಹ ನಾಡಿನಲಿ ಹಗೆಯ ಊಳಿಗಗೊಂಡು ನಾಯಿ ಬಾಳುಗಳೀಗ ಬಗೆ ಬಗೆಯ ಬಾಯ್ದೆರೆದು ಹೇಡಿ ನುಡಿ ಬೊಗುಳುತಿಹವೋ ! ನೂರು ರಾಜ್ಯವ ಕಟ್ಟ ಬಾನ ಛತ್ರವ ಹಿಡಿದು * ಸಾರಿ ಬನ್ನಿ ರಿ ಸರುವ ಜನಮನವೆ ಮತಗಳೇ ? ಸಾರಿ ಈ ಪರಿ ಬಾಳ ಸೀಮೆಯಲಿ ಇದುವೀಗ ಹರಿದು ಹಂಚುವ ಕಲಹ ಕುಲದೈವವಾಗಿಹುದೆ ! ಇಲ್ಲಿಯೇ ಈಸುವುದು ಇದ್ದು ಜೈಸುವುದೆಂಬ ಎಲ್ಲರೊಡೆಯನ ನಂಬಿ ನಡೆವುದು ಎಂಬ ಆ ಸೊಲ್ಲೀಗ ಗಾಳಿಯುಯ್ಯಲೆಯಲ್ಲಿ ತೂಗುತಿರೆ ಒಲ್ಲೆ ಬಾಳನು ಎಂಬ ಗೋಳುಗಳು ಕೇಳುತಿಹವೋ ! ನೆಲದ ಒಳಉರಿಯನ್ನು ತೂರಿರುವ ಮೊರಟಾದ ಸಿಲೆಯ ಸಾವಿರದಿ ಗುಡಿ ಬಸದಿ ರಥ ಗೊಮ್ಮಟರ ಚೆಲುವು ನನೆಕೊನೆಯಾಗಿ ನಿಲ್ಲಿಸಿದ ನಾಡಿನಲಿ ಚೆಲುವು, ಕಲೆ, ಹಾಡು, ನುಡಿ ಹೂವುಗಳ ತುಳಿಯುತಿಹರೊ ! ಕಾಲಭೂತದ ಕಠಿಣ ಕತ್ತಲೆಯ ಸೆರೆಯಲ್ಲಿ ಸಿಲುಕಿರುವ ಪುಲಿಕೇಶಿ ನೃಪತುಂಗ ಬಲ್ಲಾಳ ಹರಿಹರರೆ ಇಲ್ಲಿಯೇ ಉಸಿರಾಡಿ ಈ ನಾಡು ಕಟ್ಟಿ ದಾ ಎಲ್ಲರೇ ಮರಳುವುದು ನಿಮ್ಮ ಸಿರಿ ಸೂರೆಗೈಯೆ. ರಂಗನಾಥ ಶ್ರೀನಿವಾಸ ಮುಗಳಿ ೩೨. ಹಂಪೆಗೆ ನಿದ್ದೆ ಬಾರದು ಇನ್ನು ಈ ಜನ್ಮಕೆ ಬಿದ್ದ ಹಂಪೆಯ ಕಂಡು ಕಂಗೆಟ್ಟೆನು ಕನ್ನಡದ ತಾಯ ಬೇರು ನೀರಡಿಸಿದೆ ಹೊನ್ನು ಹೊಳೆ ಅದರ ಬಳಿ ತಾಳೊಣಗಿದೆ ಚೆನ್ನು ಚೆಲುವಿನ ಹಂಪೆ ಹೆಳವಾಗಿದೆ ಎನ್ನ ತಾ ಮನೆಧೇನು ಬರಡಾಗಿದೆ