ಈ ಪುಟವನ್ನು ಪರಿಶೀಲಿಸಲಾಗಿಲ್ಲ.



   ಶತಮಾನ]                                                                      ವಿರುಪಂಜ.                                                 19
                                                                                                                                                                      

ಶಿವಭಕ್ತರೊಳಗೆ ಒಬ್ಬನಾದ ಚೇರಮಾಂಕನೃಪನ ಕಥೆ ಹೇಳಿದೆ. ಇದನ್ನು ಕವಿ ತನ್ನ ಹೆಂಡತಿಗೆ ಹೇಳಿದಂತೆ ತಿಳಿಯುತ್ತದೆ. ಈ ಗ್ರಂಥದವಿಷಯವಾಗಿ ಕವಿ ಹೀಗೆ ಹೇಳುತ್ತಾನೆ-

     ಈಕಬ್ಬ ರಸಿಕಜನಗಳ ಕಿವಿಯ ಹಬ್ಬ, ಈಕಥೆಯಿಹಪರಸರ್ವಸೌಖ್ಯದ ಲತೆ. 
     ಚತುರಚಕೋರ ಜೀವಿಸೆ ಸೂರಿನೀಲಾಬ್ಬ |     ವಿತತಿಗಿಂಬಾಗೆ ರಾಗೋತ್ಕರ | 
     ಕ್ಷಿತಿನಾಧ ಹೊನ್ನೊರವಿರುಪೆರಾಜೇಂದ್ರನ | ಕೃತಿಚಂದ್ರ ಬೆಳಗುಗೆ ಭುವನವ |
     ನೆಗಟ್ಟುದು ವಿರುಪಾಕ್ಷ್ಮಾಪನಿಂ ಸತ್ಕಲಾಕೋವಿದರಾಹೋ ಎಂದೆನಲ್ಕೀತ್ರಿಭುವನ ತಿಲಕಂ ನವ್ಯಮಾಚಂದ್ರಸೇವ್ಯಂ.

ಗ್ರಂಧಾವತಾರದಲ್ಲಿ ಮಲ್ಲಿಕಾರ್ಜುನಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ನಂದಿಪಣ್ಮುಖರು, ಬಸವಮಡಿವಾಳ ಚೆನ್ನಬಸವರು, ಗಣೇಶ, ಸರಸ್ವತಿ ಇವರುಗಳನ್ನು ಹೊಗಳಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-

                                                       ಮಲ್ಲಿಗೆ 
    ಪರಿಭವವಡೆದಂತಸುಗೆಮಾಂದಳರ್ಗಳು | ಮರನೇ ಬಾಳ್ವವಂಬುವ ಪೊಕ್ಕು | 
    ಸರಸಿಜಕುಮುದ ಜೀವಿಪುವೆಂದು ನಗುವವೊ } ಲರಲ್ದ ಮಲ್ಲಿಗೆಗಳೊಪ್ಪಿದುವಲ್ಲಿ ||
                                                   ಬೇಡಸ್ತ್ರೀಯರು
    ಕಡೆಗಣ್ಣ ಕಾಂತಿಗೋರಗೆಯಾದ ಪಲ್ಗದಿ | ರಡಿಗೆಂಪ ಮಾರುದಧರಕಾಂತಿ | 
    ಮುಡಿಗಪ್ಪ ಕೀಳ್ಮಾಡುವ ಮೈಯ ಪೊಗರಿಂದ ನಡೆದುದು ಬಿಯದವೆಣ್ಗಳ ತಂಡ |
                                                      ಸಮುದ್ರ
     ತೆರೆಗಳ ಸೀಗುರಿಯಿಂದೆ ತುಪಾರಚಾ | ಮರದಿಂದೆ ಜಲಜಾತಪತ್ರದೆ | 
     ಸುರುಚಿರಮಣಿವಿಷ್ಕರದಿಂದೆ ಸಿಂಧು ಭೂ | ವರನಂತೆ ಕಣ್ಗೆ ರಾಜಿಸುವುದು |
                                                   ದೇಹಾನಿತ್ಯತೆ 
     ನೀರ ಬೊಬ್ಬುಳಿಕೆಯ ಕಾರ್ಬೊನ್ನೊಳೆ ಕಟ್ಟಿ | ಯಾರೈಕೆಗೈದ ಮರುಳರಂತ | 
     ಶಾರೀರಸೌಖ್ಯವ ನಿಜವೆಂದು ತಿಳಿವುದು | ಪರಮಾರ್ಧವೇನು ಬಲ್ಲವರಿಗೆ ||