ಈ ಪುಟವನ್ನು ಪರಿಶೀಲಿಸಲಾಗಿದೆ

 220 ಕರ್ಣಾಟಕ ಕವಿಚರಿತೆ. [16ನೆಯ ಎಂದು ಮುಗಿಯುತ್ತದೆ. ಈ ಶತಕದ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ-

   ಪಿರಿದುಂ ವೃತ್ತರಸಾಮೃತಂಗಳನೊಱಲ್ದಾಂತಿರ್ದು ಸಲ್ಲಕ್ಷಣೋ |
   ದರಮಾಗಿರ್ದು ಕಲಾಪ್ರಪೂರ್ಣತೆಯನಾದಂ ತಾಳ್ದು ಚಂದ್ರಂಬೊಲಾ || 
   ದರದಿಂದೀಶತಕಂ ವಿರಾಜಿಪುದಱುಂದೋರಂತೆ ನಿನ್ನುತ್ತಮಾ |
   ಭರಣಾಧಿಕ್ಯಮದಾಗದಿರ್ಪುದೆ ಸದಾ ಶ್ರೀಪಾರ್ವತೀವಲ್ಲಭಾ ||
        ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
   ತನು ಮೇಘಾಕೃತಿ ಯೌವನಂ ಮಿಳಿರ್ವ ವಿದ್ಯುಲ್ಲೇಖೆ ಪುತ್ರರ್ಕ್ಕಳಿಂ | 
   ದ್ರನ ಚಾಪಂ ಸಿರಿ ಮಂಜು ಬಂಧುನಿಚಯಂ ನೀರಕ್ಕರಂ ನಾಡೆ ಸ ||
   ಜ್ಜನಮಾಕಾಶದರಲ್ ನಿಜಾಯು ಕನಸೆಂದಾವೊಂ ವಿಚಾರಿಪ್ಪನಾ |
   ತನೆ ಮುಕ್ತ್ಯಂಗನೆಯಾಣ್ಮನಪ್ಪನೊಲವಿಂ ಶ್ರೀಪಾರ್ವತೀವಲ್ಲಭಾ || 
   ಬಗೆಯೊಳ್ ನಿನ್ನ ಪದಾಬ್ಜಭಕ್ತಿವಧು ಬಂದಪ್ಪಲ್ ಮನುಷ್ಯರ್ಗೆ ಮೋ |
   ಹಗುಣಂ ಪೋದುದು ಕಾಮಮೞ್ದುದು ಮಹಾಸಂಸಾರಮೞ್ಗೆತ್ತುನೆ || 
   ಟ್ಟಗೆ ರಾಗಂ ಬಿಡದೋಡಿದತ್ತು ವಿಪರೀತಂಬೆತ್ತು ಲೋಕಂಗಳೊಳ್ | 
   ಸೊಗಸಿತ್ತೂರ್ಜಿತವೇದಸನ್ನು ತಪದ ಶ್ರೀಪಾರ್ವತೀವಲ್ಲಭಾ || 
   ಪಿರಿದುಂ ತನ್ನ ಕುಟುಂಬಚಿಂತೆಯೊಳಜಸ್ರಂ ಮಗ್ನರಾಗಿರ್ಪಮ | 
   ರ್ತ್ಯರ ಶಾಸ್ತ್ರಶ್ರವಣಂ ವಿವೇಕಮಧಿಕಾಚಾರಂ ವಿರಾಗಂ ಗುಣಂ || 
   ಪರಮಜ್ಞಾನಮಿವೆಯ್ದೆ ರಂಧ್ರಘಟದೊಳ್ ತುಂಬಿರ್ದ ತೋಯಂಬೊಲ | 
   ಸ್ಥಿರಮಾಗಿರ್ಕುಮಜೇಯಮನ್ಮಧಹರ ಶ್ರೀಪಾರ್ವತೀವಲ್ಲಭಾ || 
   ನಯಮಂ ನೀತಿಯನುನ್ನತಾಚರಣೆಯಂ ಸುಜ್ಞಾನಮಂ ಶಾಂತಿಯಂ | 
   ದಯೆಯಂ ದಾಂತಿಯನೆಯ್ದೆದಾನಗುಣಮಂ ಸದ್ಭಕ್ತಿಯಂ ಸೂಕ್ತಿಸಂ || 
   ಚಯಮಂ ವಿದ್ಯೆಯನೆಲ್ಲಮಂ ಪಡೆವೋಡೀಲೋಕಂಗಳೊಳ್ ಸಜ್ಜನಾ |
   ಳಿಯ ಸಂಗಂ ದೊರೆಕೊಳ್ಳದಪ್ಪುದೆ ಸದಾ ಶ್ರೀಪಾರ್ವತೀವಲ್ಲಭಾ ||
                       3 ಉಮಾಮಹೇಶ್ವರಶತಕ 
        ಇದರಲ್ಲಿ IOI ವೃತ್ತಗಳಿವೆ ; ಪ್ರತಿವೃತ್ತವೂ ಉಮಾಮಹೇಶ್ವರಾ ಎಂದು ಮುಗಿಯುತ್ತದೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುವತ್ತೇವೆ-