ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಲುಕ್ಯರು, ಸೌಂದತಿಯ  ರಟ್ಟರು, ಕರಹಾಟದ ಶಿಲಾಹಾರರು, ಕೊಂಗಾಳ್ಯರು, ಚೆಂಗಾಳ್ಯರು, ತುಳುವದೇಶದ ಅರಸರು,ಚೌಳರು ವಿಜಯನಗರದ ಅರಸರು  ಮೈಸೂರರಸರು, ಉಮ್ಮತ್ತೂರು, ನುಗ್ಗೆ ಹಳ್ಳಿ, 

ಸುಗಟೂರು,ಸಿರಿಯಪಟ್ಟಣ, ಹದಿನಾಡು, ಬೇಲೂರು, ಚಿಕ್ಕನಾಯಕನಹಳ್ಳಿ, ಮುದಿಗೆರೆ, ಬಿಜ್ಜವರ, ಇಕ್ಕೇರಿ, ಕಳಲೆ ಈ ಸ್ಥಳಗಳ ಪಾಳೆಯಗಾರರು; ಇವರುಗಳಲ್ಲಿ ಕೆಲವರು ಸ್ವತಃ ಕವಿಳಾಗಿಯೂ ಹಲವರು ಕವಿಪೋಷಕರಾಗಿಯೂ ಇದ್ದರು, ಈ ಪ್ರಭುಗಳು ಮಾತ್ರವಲ್ಲದೆ ಇವರ ಕೈಯ ಕೆಳಗೆ ಇದ್ದ ಮಂತ್ರಿಗಳು, ದಂಡನಾಯಕರು, ಪಸಾಯಿತರು ಮುಂತಾದ ಅಧಿಕಾರಿಗಳಲ್ಲಿಯೂ ಚಿಕ್ಕ ಚಿಕ್ಕ ಪಾಳೆಯ ಪಟ್ಟುಗಳ ವಿಭುಗಳಲ್ಲಿಯೂ ಕೆಲವರು ಕವಿಗಳಾಗಿಯೂ ಹಲವರು ಕವಿಗೊಷಕರಾಗಿಯೂ ಇದ್ದರು, ಈ ವಿಷಯವನ್ನು ಉದಾರಣಗಳೊಡನೆ ಸಲ್ಪ ಮಟ್ಟಿಗೆ ಕೆಳಗೆ ವಿವರಿ ಸುತ್ತೇನೆ - ಗಂಗರು ಈ ರಾಜರಲ್ಲಿ ಸುಮಾರು 500 ರಲ್ಲಿದ್ದ ದುರ್ವಿನೀತನು ನೃಪತುಂಗನ ಹೇಳಿಕೆಯ ಪ್ರಕಾರ ಕನ್ನಡದಲ್ಲಿ ಗದ್ಯಾಗ್ರಂಧಕಾರನಾಗಿದ್ದಿರಬಹುದು ಶಿವಮಾರನ (780-814) ಬರೆದ ಗಜಾಪ್ರಕವು “ಒನಕೆವಾಡಾದುದು” ಎಂದು ಒಂದು ತಾಸನದಿಂದ ತಿಳಿವುದರಿಂದ ಇದು ಕನ್ನಡಗ್ರಂಧವಾಗಿರಬೇಕು ಮಹೇಂದ್ರಂತಕಾ ಎಂಬ ಬಿರುದುಳ್ಳ ಎರೆಯಪ್ಪನು (886-913) ರುದ್ರಕ , ಹರಿವಂಶ ಮೊದಲಾದ ಗ್ರಂಥಗಳನ್ನು ಬರೆದ 1ನೆಯ ಗುಣವರ್ಮನಿಗೆ ಪೊಷಕನಾಗಿದ್ದನು. ರಾಚಮಲ್ಲನ ಮಂತ್ರಿಯಾದ ಚಾವುಂಡರಾಯನು 978 ರಲ್ಲಿ ಚಾವುಂಡರಾಯಪುರಾಣ ವನ್ನು ಬರೆದನು ಈ ರಾಜನ ತಮ್ಮನಾದ ರಕ್ಕಸಗಂಗನ ಆತ್ರಿತನಾಗಿದ್ದ ನಾಗವರ್ಮನು ಛಂದೋಯೆಧಿ ಮೊದಲಾದ ಗ್ರಂಥಗಳನ್ನು ರಚಿ ಸಿದನು' ರಾಷ್ಟ ಕೂಟರು ಈ ದೊರೆಗಳಲ್ಲಿ ನೃಪತುಂಗನು ಕವಿಯಾಗಿದ್ದ ಸಂಗತಿ ತಿಳಿದೇ ಇದೆ, ಮೂರನೆಯ ಇಂದ್ರ ರಾಜನ (915-917) ಕೈಯ ಕೆಳಗಿದ್ದ ಶ್ರೀ ವಿಜಯದಂಡನಾದನಿಗೆ ಒಂದು ಶಾಸನದಲ್ಲಿತ ಅನು 1 , ಹೆಂಗಸರು ಧಾನ್ಯವನ್ನು ಕುಟ್ಟುವಾಗ ಹೇಳುವ ಹಾಡು,