ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕುರುಕ್ಷೇತ್ರ! ಸಾಯನ ಹೆಂಡತಿಯಾದ ಲಕ್ಷ್ಮೀಬಾಯಿಯ ಗತಿಯೇನಾಯಿತಂಬದನ್ನು ನಾವು ಹಿಂದಕ್ಕೆ ಹೇಳಿರುವ, ಅಂಬಾರಿಯಿಂದ ಕೆಳಗೆ ಹಾರಿಕೊಂಡ ಆಕೆಯ ಗೊತ್ತು ಹತ್ತಲೇಇಲ್ಲ. ಛಾವುಸಾಹೇಬನು ಶತ್ರುಸೈನ್ಯವನ್ನು ಹೊಕ್ಕಬಳಿಕ ಆತನ ಗತಿಯೇನಾಯಿತೆಂ ಬದು ನಿಶ್ಚಯಾತ್ಮಕವಾಗಿ ಯಾರಿಗೂ ಗೊತ್ತಾಗಲಿಲ್ಲ. ಒಬ್ಬ ದುರಾಣಿಯು ಆತನ ದಿಂಡವನ ತಂದು ಬಾದಶಹನಿಗೆ ಒಪ್ಪಿಸಿದನೆಂದು ಹಾರ+ಜಪಂಡಿತನು ತನ್ನ ಬಬರಿ ನಲ್ಲಿ ಬರೆದಿಟ್ಟ ಕವನು; ಆದರೆ ಆ ಒರೆದದ್ದನ್ನು ನಿಜವೆಂದು ನಂಬಲಾಗುವದಿಲ್ಲ; ಯಾಕಂ ದರೆ, ಉತ್ತಮಾಂಗವಾದ ತಿರಸ್ಸು ಸಿಕ್ಕಿತೆಂದು ಯಾರೂ ಎಲ್ಲಿಯೂ ಹೇಳಿರುವದಿಲ್ಲ. ಅಂದಬಳಿಕ ರುಂಡವಿಲ್ಲದ ದಿಂಡವನ್ನು ನೋಡಿ ಅದು ಭಾವುಸಾಹೇಬನದೇ ಎಂದು ಹ್ಯಾಗೆ ನಿರ್ಧರಿಸಬೇಕು? ಈ ಸಂಬಂಧದಿಂದ ಕಾಶೀರಾಜಪಂಡಿತನು ಬರೆಯುವದೇನಂದರೆ: (ತಲೆಯಿಲ್ಲದ ಒಂದು ದಿಂಡವನ್ನು ಶ್ರೀಧರಪಂತ ವಕೀಲನಿಗೂ, ಟೀಕಿ ಜನರಿಗೂ ತೋರಿ ಸಿದರು. ಅದರ ತೊಡೆಯ ಮೇಲೆ ಒಂದು ರೂಪಾಯಿಯಷ್ಟು ಅಗಲವಾದ ಒಂದು ಕಪ್ಪು ಕಲೆಯಿತ್ತು. ಅದರ ಬೆನ್ನಮೇಲೆ ಕಠಾರಿಯ ಗಾಯದ ಗುರುತು ಇತ್ತು. ಅದು ಅಂಗಾಲಲ್ಲಿ ಪದ್ಮಾಕೃತಿಯಾದ ಸಾಮುದ್ರಿಕ ರೇಷೆಯಿತ್ತು. ಅದರ ವಯಸ್ಸು ೩೫ ವರ್ಷದಿದ್ದು, ಮೈಕಟ್ಟು ದಷ್ಟಪುಷ್ಟವಾಗಿತ್ತು. ಅದರ ಮೊಣಕಾಲು, ಅಂಗೈ, ಹಣ ಇವುಗಳಿಗೆ ಸೂರ್ಯನಮಸ್ಕಾರದ ದದ್ದುಗಳು ಬಿದ್ದಿದ್ದವು. ದಿಂಡದ ಬಳಿಯಲ್ಲಿ ಕೆಲವು ದೊಡ್ಡ ದೊಡ್ಡ ಮುತ್ತುಗಳು ಬಿದ್ದಿದ್ದು, ಅವುಗಳ ಒಂದೊಂದರ ಬೆಲೆಯು ಐದುನೂರು ಐದುನೂರು ರೂಪಯಿಗಳಾಗಬಹುದು. ಈ ಯಾವತ್ತು ಗುರುತುಗಳನ್ನು ನೋಡಿ, ನೋಡುವವರ ಕಣ್ಣುಗಳಲ್ಲಿ ನೀರು ಬಂದವು.” ಪಂಡಿತರಾಜನ ಈ ಲೇಖವು ಸುಳ್ಳೆನ್ನುವ ಸಾಹಸಕ್ಕೆ ನಾವು ಹೋಗುವದಿಲ್ಲ; ಆದರೆ ಶಿರಸ್ಸನ್ನು ನೋಡದೆ ಯಾವ ಮಾತನ್ನೂ ನಿಶ್ಚಯಿಸಲಾಗುವದಿಲ್ಲ. ಭಾವುಸಾಹೇಬನ ಶಿರಸ್ಸು ಸಿಕ್ಕಿತೆಂದು ಯಾವ ಬಖರಕಾರರೂ ಬರೆದಿರುವದಿಲ್ಲ. ಆಗಿನ ಮರಾಟರ ದಂಡಿನಲ್ಲಿ ಬೆಲೆಯಳ್ಳ ಅಲಂಕಾ ರಗಳನ್ನು ಧರಿಸಿದವರೂ, ಕಠಾರಿಯ ಗಾಯದ ಗುರುತು ವರ್ಷದ ವಯಸ್ಸಿನವರೂ, ಕೈಕಾಲುಗಳಲ್ಲಿ ಉತ್ತಮ ಸಾಮುದ್ರಿಕಉಳ್ಳವರೂ, ಸೂರ್ಯನಮಸ್ಕಾರದ, ಹಾಗು 3.ಲೀಮಮಾಡಿದ ದಡ್ಡು ಬಿದ್ದವರೂ ಹಲವರು ಮರಾಠಾಬ್ರಾಹ್ಮಸರದಾರರು ರಣಭೂಮಿಯಲ್ಲಿ ಬಿದ್ದು ಮಣ್ಣು ತಿನ್ನುತ್ತಲಿದ್ದರು. ಅವರಲ್ಲಿ ಯಾರಾದರೊಬ್ಬರ ದಡವು ಯಾಕಾಗಿರಲಿಕ್ಕಿಲ್ಲ? ಭಾವುಸಾಹೇಬನ ಹೆಣವು ಸಿಕ್ಕಿತೆಂದು ಮರಾಟರಕಡೆಯ ಸಾಕ್ಷಿಗಳಿಲ್ಲದ್ದರಿಂದ, ಭಾವುಸಾಹೇಬನು ರಣದಲ್ಲಿ ಮರಣಹೊಂದಲಿಲ್ಲ ಎಂತಲೂ, ಎಲ್ಲಿಯಾದರೂ ಗುಪ್ತರೀತಿಯಿಂದ ಇದ್ದುಕೊಂಡು ಪುನಃ ಸೈನ್ಯಕೂಡಿಸಿ ಕೂಡು, ಗತವೈಭವವನೂ, ಕೀರ್ತಿಯನ್ನೂ ಪುನಃ ಸಂಪಾದಿಸುವನೆಂತಲೂ ಆಗಿನ ಜನರು ಅನ್ನುತ್ತಿದ್ದರು. ಜನರು ಅನ್ನು: ಭಾವುಸಾಹೇಬನ ಹೆಂಡತಿಯಾದ ಪಾರ್ವತೀಬಾಯಿಯೂ, ನಾನಾಫಡಣವೀಸನ `ಆಂಡತಿಯ ತಾಯಿಯ ಸಮರಭೂಮಿಯಿಂದ ಬಹುಪ್ರಯಾಸದಿಂದ ಜಾರಿಹೋಗಿ ವತೆಯು