ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುರುಬನಕರಾಮತಿ .

ಗಿದ ಹೊರತು ನಮಗೆ ಜಯಪುತ್ರಿಯಾಗುವದಿಲ್ಲ; ನಮ್ಮ ಬಿಡುಗಡೆಯಾಆಗುವದಿಲ್ಲ. ಆ ಸಾಯುವು ನಮಗೆ ಎಲ್ಲಿಂದ ದೊರೆಯಬೇಕು ? ಉತ್ತರದಿಂದುಸ್ಥಾನದವರ ಮನ ಇನ್ನು ನಾವು ನೋಯಿಸಿರುವದರಿಂದ, ಅವರ ಸಾಯುವು ನಮಗೆ ದೊರೆಯುವಹಾಗಿಲ್ಲ. ನನಗೆ ಹೆಚ್ಚು ಸೈನ್ಯವು ಬೇಡಿದು ಅಣ್ಣನಿಗೆ ಪ್ರತಿಜ್ಞಾಪೂರ್ವಕವಾಗಿ ನಾನು ಹೇಳಿಲಂ ವಿರುವದರಿಂದ, ಈಗ ಮತ್ತೆ ಸೈನ್ಯದ ಸಹಾಯಕಳಿಸೆಂದು ನಾನು ಆತನಿಗೆ ಯಾವ ಮಾಲೆ ಯಿಂದ ಪ್ರೇಳಿಕಳಿಸಲಿ? ಬ) , ಯಾಗವಿದ್ದಂತ:ಗುವದು; ಅದಕ್ಕಾಗಿ ನನಗೆಚಿಂತೆಯಿಲ್ಲ; ಆದರೆ ನನ್ನ ಸಂಗಡ ನೀನೂ ಗಂಡಾಂತರಕ್ಕೆ ಗುರಿಯಾದದ್ದಕ್ಕಾಗಿ ನನಗೆ ಬಹಳ ದುಃಖ ವಾಗುತ್ತದೆ. ನಿಮ್ಮನ್ನು ಈಗ ಪುಣೆಗೆ ಸುರಕ್ಷಿತವಾಗಿ ಮುಟ್ಟಿಸುವೆನು, ನಿ ನು ಹೋಗಿಬಿಡು. ಕಕ್ಕನ ಈ ನಿರಾಶೆಯ ಉದ್ದಾರವನ್ನು ಕೇಳಿ ವಿಶ್ವಾಸರಾಯನ ಸರ್ವಾಂಗದೊಳ ಗಿನ ರಕ್ತವು ತಪ್ತವಾಯಿತು. ಆತನು ಎಡಗೈಯನ್ನು ಕಕ್ಕನ ಕೊರಳಿಗೆ ಹಾಕಿ ಬಲ ಗೈಯ ಖಡ್ಗವೆ-4 ಕಾಕಾಸಾ ಬ, ಮರ್ದೈವದಿಂದ ತಮಗೆ ಪ್ರಾಣಭಯವು ಒದಗಿ ದು, ನಿಮ್ಮನ್ನು ಬಿಟ್ಟು ನಾನು ವುಣೆಗೆ ನಾನಾಸಾಹೇಬರ ಕಡೆಗೆಹೋದೇನೆಂಬುದನ್ನು ನೀವು ಮರೆತುಬಿಡಿ. ಕಡೆತನಕ ನಿಮಗೆ ಸಹಾಯಮಾಡುತ್ತ ನಿಮಗೆ ಬೆಂಬಲವಾಗಿರುವೆನು. ಅಂಥ ಪ್ರಸಂಗವೇ ಒದಗಿದರೆ ರಣಾಂಗಣದಲ್ಲಿ ಬಿದ್ದು ದೇಹವನ್ನು ಚರಣಕ್ಕರ್ಪಿಸು ವೆನು! ಕಾಕಾಸಾಹೇಬ, ಬ್ರಾಹ್ಮಣರಾದ ಶ್ರೀವರ್ಧನ ಕುಲಕರಣಿಯವರು ನಾವು, ನಮ್ಮ ಬ್ರಾಹ್ಮಣ ಧರ್ಮವನ್ನು ಬಿಟ್ಟು ಕ್ಷಾತ್ರಧರ್ಮವನ್ನು ಕೈಕಾಂಡದ್ದು, ಹೀಗೆ ಅಂಜಿ ರಣಾಂಗಣದಿಂದ ಓಡಿಹೋಗುವದಕ್ಕಾಗಿಯೋ ಏನು? ತಾವು ನಿಶ್ಚಿಂತರಾಗಿರಬೇಕು. ತಮ್ಮ ವಿಶ್ವಾಸನು ಮರಣಕ್ಕೆ ಸರ್ವಥಾ ಅಂಜನು. ಆತನ ಪಿತೃವ್ಯ ಭಕ್ತಿಯಲ್ಲಿ ಯೂ, ಕೈಾತ್ರತೇಜದಲ್ಲಿಯೂ ತಮ್ಮ ಸಂಪೂರ್ಣ ವಿಶ್ವಾಸವಿರಲಿ” ಎಂದು ನುಡಿದನು, ಮಗನ ಈ ಪ್ರೇಮಭರಿತವಾದ ಉತ್ಸಾಹಯುಕ್ತ ಭಾಷಣವನ್ನು ಕೇಳಿ ಭಾವುಸಾಹೇಬನಿಗೆ ಪರ ಮಾನಂದವಾಯಿತು. ಆಗ 'ಆ ಕಕ್ಕ ಮಕ್ಕಳು ಪರಸ್ಪರ ಪ್ರೇಮದಿಂದ ಒಬ್ಬರನ್ನೊಬ್ಬರು ಆಲಿಂಗಿಸಿದರು. ಕಕ್ಕನ ಮಾತಿನಿಂದ ವಿಶ್ವಾಸರಾಯನಿಗೆ ಅಂತರಂಗದಲ್ಲಿ ಸಮಾಧಾನ ವಾಗಿದ್ದಿಲ್ಲ. ಆತನು ಜನಕೋಟಿ ನಿಂದೆಯನ್ನು ಏಕಾಂತದಲ್ಲಿ ಕರಿಕೊಂಡನು, ಅವ ರಿಬ್ಬರು ಬಹಳ ಹೊತ್ತು ವಿಚಾರಮಾಡಿದರು. ಬಳಿಕ, ಅವರು ನಾನಾಸಾಹೇಬರವರ ಕಡೆಗೆ ಪತ್ರ ಬರೆದು ಕಳಿಸಬೇಕೆಂದು ನಿಶ್ಚಯಿಸಿದರು. ಆಗ ವಿಶ್ಯಾಸರಾಯನು ಗೊತ್ತಾ ದಂತೆ ತನ್ನ ತಂದೆಗೆ ಬರೆದ ಪತ್ರವೇನಂದರೆ ತೀರ್ಥರೂಪ ರಾಜಶ್ರೀ ನಾನಾಸಾಹೇಬ ಪೇಶವೆ, ಪಂತಪ್ರಧಾನ, ಮುಕ್ಕಾಮ ಪುಣೆ ಹಿರಿಯರ ಸೇವೆಗೆ* ಅಪತ್ಯ ವಿಶ್ವಾಸರಾಯನು ತ್ರಿಕಾಲದಲ್ಲಿಯೂ ಚರಣಗಳಮೇಲೆ ಮಸ್ತಕವಿಟ್ಟು ಮಾಡುವ ಶಿರಸಾಷ್ಟಾಂಗ ನಮಸ್ಕಾರ ವಿಜ್ಞಾಪನೆಗಳು-ಮಿತಿ ಸೌಷ್ಯ ಶುದ್ಧ ಪ್ರತಿಪದಿ ಯಲ್ಲಿ ಸ್ವಾರಿಮುಕ್ಕಾನ ಕುರುಕ್ಷೇತ್ರದ ಛಾವಣಿಯಲ್ಲಿ ಹಿರಿಯರ ಆಶೀರ್ವಾದದಿಂದ