ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪. ಕೋಹಿನೂರು ಜ Mwwwmmm ಗೆಯನ್ನು ಕೊಡಲು ಅಸಮ್ಮತರಾಗಿದ್ದರು, ಅಫಜುಲನು ಬಹುಸಂಖ್ಯೆ ಸೈನ್ಯ ವನ್ನು ತಮ್ಮ ತೆರಿಗೆಯನ್ನು ಕೊಡದೆ ವಿದ್ರೋಹಿಗಳಾಗಿದ್ದ ಪುರುಷರ ಕೈಗೆ ಇನ್ನೂ ಹೆಂಗಸರ ಕಿವಿಗಳನ್ನೂ ಮಕ್ಕಳ ಬೆರಳುಗಳನ್ನೂ ಕಡಿಯುವದಕ್ಕೆ ಅಪ್ಪನ ಮಾಡಿ ಕಾಫರನನ್ನು ಗೋವಿನ ರಕ್ತದಲ್ಲಿ ಸ್ನಾನಮಾಡಿಸಿ ಕೊರಾನಿನಲ್ಲಿ ಕಲ್ಮಾ (ವಸಲನನರ ವೇದಮಂತ್ರ) ವನ್ನು ಓದಿಸಬೇಕೆಂದು ಅನೇ ಕಾವರ್ತಿ ಕಟ್ಟಳೆ ಮಾಡಿದ್ದನು. ಅದು ಮೊದಲ್ಗೊಂಡು ಹರದೇವಪುರದ ನಿವಾಸಿಗಳಾಗಿದ್ದ ಆಬಾಲವೃದ್ದ ವನಿತೆಯರು ಅಫಜುಲನ ಹೆಸರನ್ನು ಹೇಳಿದರೆ ಹೆದರುತ್ತಿದ್ದರು. ವಿಶೇಷವಾಗಿ ಮಕ್ಕಳು ಆ ಫಜುಲನನ್ನು ಭೂತದ ಅಬ್ಬನೆಂದು ನಂಬಿದ್ದರು, ಅದು ಕಾರಣ ತಾಯಿಯಾದವಳು ** ಅಫಜುಲ ೨೨ ಎಂದು ಹೇಳಿ ಮಗುವಿಗೆ ಭಯಸ ಡಿಸುವಳು. ಶಿಶುವು ಅಫಜುಲ ಹೆಸರನ್ನು ಹೇಳಿದರೆ ಅಳುವುದನ್ನು ನಿಲ್ಲಿಸಿ ತಾಯಿಯ ಕುತ್ತಿಗೆಯನ್ನು ಕಟ್ಟಿ ಕೊಂಡು ಕಣ್ಣು ಮುಚ್ಚಿಕೊಳ್ಳುವುದು. ಇದ್ದ ಹಾಗೆ ತಾಯಿಯ ಕುತ್ತಿಗೆಯನ್ನು ಕಟ್ಟಿ ಕೊಂಡಿದ್ದ ಮಗುವೊಂದು ಹೆದರಿ ಕೈಬಿಟ್ಟು ಕೆಳಗೆ ಬಿದ್ದಿತು ! ತಾಯಿಯು ಕಂಗೆಟ್ಟು ನೆಲ್ಲದಮೇಲೆ ಕುಳಿತು ಬಿಟ್ಟಳು ! ಮಗುವು ಮತ್ತಷ್ಟು ಹೆದರಿ ಅಳುವುದಕ್ಕೆ ತೊಡಗಿತು ! ನಿಜವಾ ಗಿಯ ಅಫಜಲ ! ಅಕಸ್ಮಾತಾಗಿ ಗ್ರಾಮದಲ್ಲಿ ದೊಡ್ಡ ಗದ್ದಲವು ಹುಟ್ಟಿ ಗ್ರಾಮವಾಸಿಗಳೆಲ್ಲರೂ ಭಯದಿಂದ * ಪುನಃ ಅಫಜುಲ ಬಂದನೆಂದು 9 ಕೂಗಿ ಕೊಂಡರು, ಬಿಜಿಯಾ ತೆರಿಗೆಯನ್ನು ಒಂದು ಕಾಸನ್ನು ಳಿಸಿಕೊಳ್ಳದೆ ಎಲ್ಲರೂ ಕೊಟ್ಟಿದ್ದರು. ಹಾಗಿದ್ದರೆ ಅಫಜುಲನು ಬಂದ್ರನೇಕೆ ? ಈ ಹಾವಳಿಯೇಕೆ ? ಮುಸಲರು ದೊಡ್ಡ ದಂಡನ್ನು ತಂದು ಮನೆಗಳ ಬಾಗಿಲನ್ನು ಒದ್ದು ಮುರಿದು ಮನೆಮನೆಗೂ ನುಗ್ಗಿ ಕೊಳ್ಳೆ ಹೊಡೆಯಲಾರಂಭಿಸಿ, ದನಕರುಗಳನ್ನು ಬಿಚ್ಚಿ ಹೊರಕ್ಕೆ ಅಟ್ಟಿ, ಯುವತಿಯರ ಮುಂದಲೆಯನ್ನು ಹಿಡಿದೆಳೆದುಕೊಂಡು ಬರುವುದ ಕ್ಯಾರಂಭಿಸಿದರು, ಗ್ರಾಮಸ್ಥರು ಗೋಳಿಡುತ್ತ ಕೈಮುಗಿದುಕೊಂಡು, ನಿಮ್ಮ ಬಾದಷಹನ ಮೇಲಿನ ಆಣೆ ! ನಾವಾವ ತಪ್ಪನ್ನೂ ಮಾಡಿದವರಲ್ಲ. ನಮ್ಮ ಗೋಜಿಗೆ ಬರಬೇಡಿರೆಂದು ಬೇಡಿಕೊಂಡರು ಆದರೆ ಅದನ್ನು ಕೇಳುವವರಾರು? ಅಫಜುಲನು ಕುದುರೆ ಸವಾರನಾಗಿದ್ದವನು, 44 ಜೋಕೆ ! ಒಬ್ಬ ಕಾಫರನೂ ತಪ್ಪಿಸಿಕೊಂಡು ಓಡಿಹೆನೀಗದಹಾಗೆ ನೋಡಿಕೊಳ್ಳಬೇಕು. ಒಬ್ಬ ಯುವತಿ ಯಾಗಿ ಒಂದು ಗೋವಾಗ ಕೈಬಿಟ್ಟು ಹೋಗಕೂಡದು, ಮುದಿಹಂ 1 ಸರನ್ನೂ ಚಿಕ್ಕ ಮಕ್ಕಳನ್ನೂ ಬಿಟ್ಟ ಬಿಡಬಹುದು ೨೨ ಎಂದು ಕಟ್ಟಳೆ ಮಾಡಿದನು