ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹತ್ತನೆಯ ಪ್ರಕರಣ, ೫೩ ವಿದ್ಯಾಸಮುದ್ರನನ್ನು ಹಲವುಬಗೆಯಾಗಿ ಸ್ತೋತ್ರಮಾಡಿ ಆತನಾವಾಗಲೂ ನೋಡಲಾರದಷ್ಟು ಧನವನ್ನೂ ಅಮೂಲ್ಯ ವಸ್ತುಗಳನ್ನೂ ಪಾರಿತೋಷಕವಾಗಿ ಇತ್ತು ಒಂದು ಅಗ್ರಹಾರವನ್ನು ಧಾರಾಪೂರ್ವಕವಾಗಿ ಕೊಟ್ಟನು. ಅರ ನನ ಗುಣಗ್ರಹಣಶಕ್ತಿಗೂ ದಾರ ವಿಶೇಷ ಕ್ಕೂ ವಿದ್ಯಾನಮುದ್ರನು ವರ ಮಾನಂದಭರಿತನಾಗಿ ಯೋಗ್ಯವಾದ ರೀತಿಯಲ್ಲಿ ತನ್ನ ಕೃತಜ್ಞತೆಯನ್ನು ಸೂಚಿಸತಕ್ಕ ಕೆಲಮಾತುಗಳನ್ನಾಡಿದನು. ಅಷ್ಟರಲ್ಲಿ ಅರಸನು ಸಭೆಯನ್ನು ಬೀಳ್ಕೊಟ್ಟು ನಮುಚಿತ ಪರಿವಾರದೊಡನೆ ಅಂತಃಪುರಕ್ಕೆ ಹೊರಟುಹೋ ದನು. ಮಂತ್ರಿ ಮೊದಲಾದ ಸಭಾಸದರೂ ತಂತಮ್ಮ ಮನೆಗಳಿಗೆ ಹಿ೦ತಿ ರುಗಿ ಹೊರಟುಹೋದರು. ತರುವಾಯ ಚಂದ್ರಮತಿಯು ತಾನು ಕಲಿತ ವಿದ್ಯೆಯನ್ನು ದಿನಕ್ರಮ ವಾಗಿ ಅಭಿವೃದ್ಧಿ ಮಾಡಿಕೊಂಡು, ಪುಸ್ತಕದಲ್ಲಿ ಓದಿ ಕಲಿತುದಕ್ಕಿಂತ ಬುದಿ ಬಲದಿಂದ ಹತ್ತರಷ್ಟು ಜ್ಞಾನವನ್ನು ಪಡೆದು ಎಂತಹ ಕರಿನ ಪುಸ್ತಕವನ್ನಾ ದರೂ ಓದಿ ಅರ್ಥಮಾಡಿಕೊಳ್ಳುತ್ತೆ, ಎಂತಹ ತೊಡಕಾದ ಲೆಕ್ಕವನ್ನಾ ದರೂ ಆಲೋಚಿಸಿ ಸರಿಯಾದ ಉತ್ತರವನ್ನು ಕಂಡುಹಿಡಿಯುತ್ತೆ, ಮನೋ ಹರವಾದ ಲಲಿತ ಶೈಲಿಯ ವದ್ಯಗಳ ಹಾಡುಗಳನ್ನೂ ರಚಿಸುತ್ತೆ ಆವ ರಾಗವನ್ನಾದರೂ ಆಲಾಪನಮಾಡಿ ಕೇಳುವವರ ಮನಸ್ಸು ಕರಗುವಂತೆ ಮಾಡುತ್ತೆ, ಆವುದಾದರೂ ನೂತನವಿಷಯವನ್ನು ತೆಗೆದುಕೊಂಡು ಇಂಪಾಗಿ ಉಪನ್ಯಾಸಮಾಡುತ್ತೆ ಬಹುನಮರ್ಧೆಯೆಂದು ಪ್ರಸಿದ್ಧಳಾದಳು. ಆಕೆಗಿದ ವಿದ್ಯಾ ವಿವೇಕಾದಿಗಳಿಗೆ ಪ್ರಕಾಶವನ್ನುಂಟುಮಾಡತಕ್ಕ ವಿನಯಾದಿ ಸದ್ಗುಣ ಗಳು ಆಕೆಯನ್ನು ಲೋಕದಲ್ಲಿರುವ ಸಮಸ್ಯನಾರೀಮಣಿಗಳಲ್ಲಿಯೂ ಉತ್ತಮ ಳನ್ನಾಗಿ ಮಾಡಿದುವು. ಆದುದರಿಂದ ಎಲ್ಲಾ ಕಡೆಗಳಲ್ಲಿಯೂ ಈಕೆಯ ಗುಣ ಸಂಪತ್ತನ್ನೂ ವಿದ್ಯಾವಿಶೇಷವನ್ನೂ ಜನರೆಲ್ಲರೂ ಮನವಾರೆ ವರ್ಣಿಸಿ ವರ್ಣಿಸಿ ಹೇಳಿಕೊಳ್ಳುತ್ತಿದ್ದರು. ಆಕೆಯ ಕೀರ್ತಿಯು ಕ್ರಮಕ್ರಮವಾಗಿ ದೂರದೇಶಗಳಲ್ಲಿಯೂ ವ್ಯಾಪಿಸಿ ಎಲ್ಲರಿಂದಲೂ ಶ್ಲಾಘನೀಯವಾಯಿತು ಇವಳಂತೆಯೇ ಕೋಸಲದೇಶಾಧೀಶನಾದ ತ್ರಿಶಂಕುಮಹಾರಾಜನ ಮಗನಾದ ಹರಿಶ್ಚಂದ್ರನ ಕೀರ್ತಿಯೂ ಸಮಸ್ತ ದೇಶಗಳನ್ನೂ ವ್ಯಾಪಿಸಿದ್ದಿತು. ಆಸೇತು ಹಿಮಾಚಲದವರೆಗಣ ದೇಶಗಳಲ್ಲೆಲ್ಲ ಅವನ ದೈರಪೌರಾದಿಗಳೂ, ವಿನಯ