ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹನ್ನೆರಡನೆಯ ಪ್ರಕರಣ, ೬೩ - - - - - ತ್ರಕನು ಕಪಟಸಂಕಟವನ್ನು ಸೂಚಿಸಿ ನರಲು ನಡುನಡುವೆ ಕುಳಿತು ಕೊಳ್ಳುತ್ತೆ ತನ್ನ ಕಾಲು ನೋಯುತ್ತಿರುವುದೆಂದೂ, ನಾಲಗೆಯೊಣಗಿ ಹೋಗುತ್ತಿರುವುದೆಂದೂ ಹೇಳಿಕೊಂಡು ಹಲವು ಬಗೆಯಾಗಿ ಅವರನ್ನು ನಿಂದಿಸುತ್ತೆ, ಕಾಲುಗಳನ್ನೂ ತಬೇಕೆಂದೂ, ಒಳ್ಳೆಯ ನೀರನ್ನು ತಂದುಕೊಡ ಬೇಕೆಂದೂ, ಬಹುವಾಗಿ ಪೀಡಿಸತೊಡಗಿದನು. ಆದ೦ಪತಿಗಳಾತನ ಹಿಂಸೆ ಯನ್ನು ಸ್ಮರಿಸಿಕೊಂಡಿದು ತಮ್ಮ ಕಷ್ಟವನ್ನು ಪರಿಗಣಿಸದೆ ಅವನನ್ನು ಉಪ ಚರಿಸತೊಡಗಿದರು. ಹೀಗೆಯೇ ಮುಂದೆಹೋಗುತ್ತೆ ಭೇತಾಳವಟವೆಂಬ ಒಂದು ಆಲದಮರದಬಳಿಗೆ ಹೋಗಿ ಆರಾತ್ರಿ ಅಲ್ಲಿಯೇ ವಿಶ್ರಮಿಸಿಕೊಳ್ಳ ಬೇಕೆಂದು ನಿಶ್ಚಯಿಸಿ, ನಕ್ಷತ್ರಕನಿಗೆ ಚಿಗುರಿನಲ್ಲಿ ಒಂದು ಹಾಸಿಗೆಯನ್ನು ಕಲ್ಪಿಸಿಕೊಟ್ಟು ತಾವು ಆ ಕಲ್ಲುನೆಲದಮೇಲೆಯೇ ಒಂದು ಬಟ್ಟೆಯನ್ನು ಹಾಸಿ ಮಲಗಿದರು. ಅತ್ಯಾಯಾಸಗೊಂಡಿದ್ದರಾದುದರಿಂದ ಚಂದ್ರಮತಿಯೂ ನಕ್ಷತ್ರಕನೂ ಜಾಗ್ರತೆಯಾಗಿ ನಿದ್ರೆಗೊಳಗಾದರು. ಹರಿಶ್ಚಂದ್ರನಾದರೋ ಮನಸ್ತಾಪದಿಂದ ನಿದ್ರೆಯಿಲ್ಲದೆ, ಕತ್ತಲೆಯಾಗಿದ್ದುದರಿಂದ ಖಡ್ಗವನ್ನು ಹಿಡಿದುಕೊಂಡು ಅವರಿಗೆ ಕಾವಲಾಗಿದನು. ಸುತ್ತಮುತ್ತ ನಾನನಾಗಿದ್ದ ಕಳ್ಳ ರಲ್ಲೊಬ್ಬನು ಅವರನ್ನು ಕಂಡು, ಆಲದಮರದ ಅಡಿಯಲ್ಲಿ ಮಾರ್ಗ ರಾರೋ ಮಲಗಿರುವರೆಂದು ತನ್ನ ಸಮೂಹಕ್ಕೆ ತಿಳಿಸಲು ಅವರೆಲ್ಲರೂ ಒಂದುಗೂಡಿ ಬಂದು ಬಟ್ಟೆ ಬರೆಗಳನ್ನು ಅಪಹರಿಸಬೇಕೆಂದು ಪ್ರಯತ್ನಿಸಿ ದರು. ಹರಿಶ್ಚಂದ್ರನು ಆ ದಾರಿಹೋಕರನ್ನು ದೂರದಲ್ಲಿಯೇ ನೋಡಿ, ಅವರ ಉದ್ದೇಶವನ್ನೂ ಹಿಸಿ, ಅವರನ್ನಿದಿರಿಸಿ ಹೋರಾಡಿ ಅವರಲ್ಲಿ ಕೆಲವರನ್ನು ನಂಹರಿಸಿಯೂ, ಕೆಲವರನ್ನು ಗಾಯವಡೆಯಿಸಿಯೂ ಓಡಿಸಿಬಿಟ್ಟನು. ಸ್ವಲ್ಪ ಹೊತ್ತಿನೊಳಗಾಗಿ ಮೇಘಗಳೆಲ್ಲ ಒಟ್ಟುಗೂಡಿ ಕೊಪ್ಪರಿಗೆಗಳಿ೦ದ ಸುರಿದಂತೆ ದೊಡ್ಡ ಮಳೆಯನ್ನು ಕರೆಯಲು ನಕ್ಷತ್ರಕನು ಕಟಕ್ಕನೆ ಬೆಚ್ಚಿ ಎದ್ದನು. ಹರಿಶ್ಚಂದ್ರನೂ ಚಂದ್ರಮತಿಯೂ ಆತನನ್ನು ಧೈರ್ಯಗೊಳಿಸಿ, ಗಿಡದ ಬುಡದಲ್ಲಿ ಮಲಗಿಸಿ ತಮ್ಮ ಬಟ್ಟೆಗಳನ್ನು ಆತನಿಗೆ ಹೊದೆಯಿಸಿ, ಒಬ್ಬೊಬ್ಬರು ಸ್ವಲ್ಪ ಸ್ವಲ್ಪ ಕಾಲ ಲೋಹಿತಾಸ್ಯನನ್ನು ನನೆಯದಂತೆ ಎತ್ತಿ ಕೊಳ್ಳುತ್ತೆ ಮಳೆಯಲ್ಲಿ ನೆನೆಯುತ್ತೆ ಬೆಳಕು ಹರಿಯುವವರೆಗೂ ಬಹು ಶ್ರಮಪಟ್ಟರು. ಮತ್ತೊಂದುದಿನ ಪ್ರಯಾಣವು ಅರ್ಧಕಳೆದಿರುವಾಗ