ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಿಂದ ಅಲ್ಲಾಡಿಸಿ ತಿಕ್ಕಿ ಹೊಗೆ ಹೊರಡದಂತಾದ ಬಳಿಕ ಮತ್ತೆ ೨ ಗಳಿಗೆಯ ವರೆಗೆ ಹಾಗೆಯೇ ಅಲ್ಲಾಡಿಸಬೇಕು. ನಂತರ ಸ್ಟಾಂಗ ಶೀತವಾಯಿತೆಂದರೆ ಆ ಔಷಧವನ್ನು ತಕ್ಕೊಂಡು, ಸಶಕ್ತನಾದ ದಂಡವನಿಗೆ ಅರ್ಧ ಗಂಜಿಯಷ್ಟು ಸಕ್ಕರೆ ತುಪ್ಪಗಳೊಡನೆ ಕಂಡಬೇಕು. ಅಶಕ್ತ ಪ್ರಕೃತಿಯವನಿಗೆ ಕಾಲು ಗುಂದೆಯಷ್ಟು, ೧೨ವರ್ಷದ ಒಳಗಿನ ವಯಸ್ಸಿನ ಹುಡುಗರಿಗೆ ಉದ್ದಿನ ಕಾಳಷ್ಟು ಕೊಡಬೇಕು, ಪಥ್ಯ:-ಬರೇ ಹಾಲು ಅನ್ನ, ಮೂರೇ ದಿನಗಳಲ್ಲಿ ಎಂಟು ಬಗೆಯ ಜ್ವರಗಳು ವಿಶೇಷವಾಗಿ ಹೋಗುತ್ತವೆ. ಜ್ವರವು ತಾತ್ಕಾಲದಲ್ಲಿ ನಿಲ್ಲಬೇಕೆಂದು ಇಚ್ಚೆಯಿದ್ದರೆ ಕಟುಕರಣಿಯ ೧|| ಮಾಸಿ ಹಣ೯, ನೆಲ ಬೇವಿನ ಕಣ೯ ೬ ಗುಂಜಿ ಅಳಲೆಕಾಯಿ ಪುಡಿ ೪ ಗುಂಜಿ ಇವನ್ನೆಲ್ಲ ಕಡಿಸಿ ಇವುಗಳಲ್ಲಿ ಮೇಲೆ ಹೇಳಿದ ಪ್ರಮಾಣದಂತೆ ಆ ಔಷಧವನ್ನು ಹಾಕಿ ಕೊಡಬೇಕು. ನಿಂತ ಜ್ವರಗಳನ್ನು ಪುನಃ ತಂದು ಚಮತ್ಕಾರ ತೋರಿಸುವದಿದ್ದರೆ, ಹಿಪ್ಪಲಿ ಬೇರು ೬ ಗಂಜಿ, ಆಕಳ ಕರಿ ೧೨ ಗುಂಜಿ ಇವುಗಳ ವಸ್ತ್ರದಲ್ಲಿ ಸೋಸಿದ ಚೂರ್ಣ ದಲ್ಲಿ ಮೇಲೆ ಹೇಳಿದ ಔಷಧವನ್ನು ಆ ಪ್ರಮಾಣದಲ್ಲಿ ಕೆಟ್ಟರೆ ಹೆಚ್ಚಾಗಿ ಜ್ವರ ಬರುತ್ತವೆ. ವೆಗೆ ಹೆಚ್ಚಾಗಿ ದಾಹವಾದರೆ ತಿಗೀಕಾಯಿಯ ನೀರನ್ನು ಮೈಗೆ ಹಚ್ಚ ಬೇಕು; ಇಲ್ಲವೆ ಅಂಟಾಳಕಾಯಿಯ ಬುರುಗನ್ನು ಮೈಗೆ ಸವರಬೇಕು, ಅಂದರೆ ದಾಹವು ಕಡಿಮೆಯಾಗುತ್ತದೆ. ಬಳಿಕ ಜ್ವರ ನಿಲ್ಲಿಸುವ ಸಲುವಾಗಿ ತುಪ್ಪ, ಸಕ್ಕರೆ ಯಲ್ಲಿ ಮತ್ತೆ ಆ ಔಷಧವನ್ನು ಪ್ರಮಾಣಬದ್ಧವಾಗಿ ಕೊಡಬೇಕು. ಈ ರಸಾಯನ ವನ್ನು ಯಾವಾಗಲೂ ಗುಪ್ತವಾಗಿರಿಸಬೇಕು. ಇದಕ್ಕೆ ಜ್ವರಕೇಸರಿ ಎಂಬ ಸಂಜ್ಞೆ ಹಣ, ಇದರಲ್ಲಿ ಇಲಿ ಪಾಷಾಣವಿದೆಯೆಂದು ತಿಳಿಸುವ ಕಾರಣವಿಲ್ಲ. ರಸಾಯನ ಮಾಡುವ ಕಾಲಕ್ಕೆ ಇಲಿಪಾವಾಣವು ಹಾರಿ ಹೋಗಿ, ಕಡೆಗೆ ತುತ್ತೆದೊಳಗಿನ ತಾಮೂವು ಮಾತ್ರ ಬಾಕಿ ಉಳಿಯುತ್ತದೆ. ಇದೇ ಈ ರಸಾಯನದೊಳಗಿನ ಸೂಕವು. ಸುಜ್ಞ ವೈದ್ಯರು ಇದರ ಅನುಭವವನ್ನು ಪಡೆಯತಕ್ಕದ್ದು. ಈ ರಸಾಯನ. ವನು ಸಿದ್ಧಗೊಳಿಸುವಾಗ ಅದರ ವಿಷಯುಕ್ತ ಹೊಗೆಯು ಕಣ್ಣು, ಮೂಗು, ಬಾಯಿಗಳಲ್ಲಿ ಸೇರದಂತೆ ಎಚ್ಚರಪಡತಕ್ಕದ್ದು. - (೧) ಸಂತತ ಜ್ವರ, ಲಕ್ಷಣ:-೭-೧೦ ಇಲ್ಲವೆ ೧೨ ದಿನಗಳ ವರೆಗೆ ಒಂದೇ ಸವನೆ ಜ್ವರ ಬಂದು, ಬೆವರು ಬಂದರೂ ಜ್ವರವಿದ್ದ ಆ ತ್ತವೆ. ಇದಕ್ಕೆ ಸಂತತಜ್ವರವೆನ್ನು ವರು, ಮೇಲೆ ಹೇಳಿದ ದಿನಗಳಲ್ಲಿ ಅನುಕ್ರಮವಾಗಿ ವಾತ, ಪಿತ್ತ, ಕಫ, ಇವು ಗಳು ಅಧಿಕವಾಗಿರುತ್ತವೆ. ಈ ಜ್ವರಗಳು ತ್ರಿದೋಷಗಳಿಂದುಂಟಾಗಿರುತ್ತವೆ,