ಈ ಪುಟವನ್ನು ಪರಿಶೀಲಿಸಲಾಗಿಲ್ಲ.



೫೦                         ಕಾದಂಬರೀಸಂಗ್ರಹ
    ಅನಂತರ ಶಾರದೋಪಾಸನೆಯಲ್ಲಿ ಆಸಕ್ತರಾದ ಕೆಲವರು ಪುಸ್ತ, ಪುಂಡ್ರಕಚಿಹ್ನಿ ಶರಾಗಿ ಬಂದು ಆಚಾರರನ್ನು ಕುರಿತು" ಸ್ವಾಮಿ ! ವೇದಕ್ಕೆ ನಿತ್ಯತ್ವವಿರುವುದರಿಂದ ಶಾರದೆಯೂ ನಿತ್ಯ ರೂಪಿಣಿಯು; ಅವಳೇ ಲೋಕಕ್ಕೆಲ್ಲಾ ಕಾರಣಭೂತಳು;  ಪ್ರಣೋ ದೇವೀ ಸರಸ್ವತೀ' ಎಂಬ ಶ್ರುತಿಯಂತೆ ಅವಳಿಂದಲೇ ಬುದ್ದಿಜ್ಞಾನಗಳು ಕೊಡಲ್ಪಡಬೇಕು; ಸಕಲ ಗುಣಗಳಿಂದ ಕೂಡಿರುವ ಅವಳು ಮುಕ್ಷುಗಳಿಂದಲೂ ಸೇವಿಸಲ್ಪಡಲು ಅರ್ಹಳು. ಆದ್ದರಿಂದ ನೀವೂ ಅವಳ ಉಪಾಸನೆಯನ್ನು ಮಾಡಿ ” ಎನ್ನಲು ಆಚಾರರು : ಎಲೈ ಜನರೇ ! ಕಂಠತಾಲ್ವಾದಿಗಳ ಸಂಗಮದಿಂದ ಹುಟ್ಟಿದ ವೇದಕ್ಕೆ ನಿತ್ಯತ್ವವು ಹೇಗೆ ? ವರ್ಣಮಾತ್ರಕ್ಕೋ ಅಧವಾ ವರ್ಣ ಸಂತತಿಗೋ ನಿತ್ಯತ್ವವೇ ಹೊರ್ತು ವೇದಕ್ಕೆ ನಿತ್ಯತ್ವವಿಲ್ಲ ; ಭಗರ್ವಾ ಸಹಸ್ರರಶ್ಮಿಯು, ಸೃಷ್ಟಿ ಕಾಲಲ್ಲಿ ಮಹರ್ಷಿಗಳಿಗೆ ಅಂಗಸ ಹಿತವಾದ ವೇದಕ್ಕೆ ಯುಗಾಂತ್ಯದಲ್ಲಿ ಪ್ರಳಯವು ಎಂದು ಹೇಳಿರುವನು' ಎಂದು ಸೂರಸಿದ್ಧಾಂತದಲ್ಲಿದೆ. ಸೂರನಿಂದ ಪ್ರಳಯವನ್ನು ಹೊಂದಿದ ಶಾರದೆಗೆ ನಿತ್ಯತ್ವವು ಹೇಗೆ ? ಆದ್ದಂದ ನಿತ್ಯನಾದ ಪರಬ್ರಹ್ಮನಿಂದ ಮೋಕ್ಷ ಬರುವುದಲ್ಲದೆ ಬೇರೆ ಅಲ್ಲ' ಎಂದು ಅವರಿಗೆ ಬೋಧಿಸಿ, ಅವರನ್ನೆಲ್ಲಾ ಪಂಚಾಯತನ ಪೂಜಾರತ ರಾದ ಅದ್ವೈತಿಗಳನ್ನಾಗಿ ಮಾಡಿ ವಾದಕ್ಕೆ ನಿಂತ ವಾಮಾಚಾರರರನ್ನು ಶ್ರುತುಕ್ತಪ್ರ ಮಾಣಗಳಿಂದ ಸೋಲಿಸಿ, ಅವರಿಗೆಲ್ಲಾ ಅದ್ವೈತಾಮೃತಪಾನವಂ ಮಾಡಿಸಿ, ಶ್ರೀರಾಮ ನಿಂದ ಪ್ರತಿಷ್ಟಿತವಾದ ರಾಮೇಶ್ವರಲಿಂಗವನ್ನು ಗಂಗಾಜಲದಿಂದ ಅಭಿಷೇಕವಂಮಾಡಿ, ಕಮಲ, ಬಿಲ್ವಪತ್ರಾದಿಗಳಿಂದ ಸ್ವಾಮಿಯನ್ನು ಪೂಜಿಸಿ, ಪಾಂಡ್ಯರನ್ನೂ ಚೋಳರ ನ್ನೂ , ದ್ರವಿಡರನ್ನೂ, ಸ್ವಾಧೀನಮಾಡಿಕೊಂಡು, ಹಸ್ತಿಪರ್ವತಕ್ಕೆ ಕಟಿಮೇಖಲಾಭೂತ ವಾದ ಕಾಂಚೀನಗರಕ್ಕೆ ಪ್ರಯಾಣಮಾಡಿದರು.
                   ಶ್ರೀ ಚಕ್ರ ಸ್ಥಾಪನೆ. 

ಆಚಾರರು ಕಂಚಿಯನ್ನು ತಲಪಿದಮೇಲೆ ಸಶಿಷ್ಯರಾಗಿ ಒಂದು ಜಗುಲಿಯ ಮೇಲೆ ಕುಳಿತಿರಲು, ಆ ಮನೆಯ ಯಜಮಾನನು ಬಂದು « ಸ್ವಾಮಿಾ ! ಸಾಯಂಕಾಲ ದಲ್ಲಿ ಇಲ್ಲಿರಬೇಡಿ. ಏಕೆಂದರೆ ಈ ಊರಿನ ಅಧಿದೇವತೆಯಾದ ಕಾಮಾಕ್ಷಿಯು ಅತಿ ಕ್ರೂರಳು ; ಸಾಯಂಕಾಲವಾದಮೇಲೆ ಆಕೆಯು ಬೀದಿಯನ್ನೆಲ್ಲಾ ಸುತ್ತಿ ಸಿಕ್ಕಿದವ ರನ್ನು ತಿಂದುಬಿಡುತ್ತಾಳೆ ; ಆದ್ದರಿಂದ ತಾವು ಎಲ್ಲಿಯಾದರೂ ದಯಮಾಡಿ ” ಎಂದು ಹೇಳಿ ಹೊರಟುಹೋದನು. ಆದಿನ ಸಾಯಂಕಾಲವಾಗುತ್ತಲೂ, ಆಚಾರರು ಸ್ವಕರ್ಮಾನಂತರ ಶಿಷ್ಯರನ್ನೆಲ್ಲಾ ಮಲಗಿಕೊಳ್ಳುವಂತೆ ಹೇಳಿ ತಾವು ಓರ್ವರೇ ಎಚ್ಚರವಾಗಿ ಕುಳಿತಿದ್ದರು ;