ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

473

"ಆಗಲಿ. ಕಳಿಸ್ಕೊಡ್ತೀವಿ."
ಊಟ ಉಪಚಾರದ ವಿಷಯದಲ್ಲಂತೂ ಆ ಇನ್ಸ್ ಪೆಕ್ಟರಿಂದ ಹೆಚ್ಚಿನ ತೊಂದರೆ
ಯಾಗಲಿಲ್ಲ. ರಾಧಾಕೃಷ್ಣಯ್ಯನಂತೆ ಅವರು, ತಮ್ಮ ವೆಚ್ಚವನ್ನು ತಾವೇ ನಿರ್ವಹಿಸ
ಲಿಲ್ಲ ನಿಜ. ಆದರೆ, ನಂಜುಂಡಯ್ಯ ಮಾಡಿದ ವ್ಯವಸ್ಥೆಯಿಂದಲೆ ತೃಪ್ತರಾದರು.
...ಶಾಲಾಸಂದರ್ಶನ ಮುಗಿದೊಡನೆಯೆ ವಾರ್ಷಿಕೋತ್ಸವದ ಪ್ರಶ್ನೆ ಬಂತು.
ರ್ಷಾಂತ್ಯದ ಪರೀಕ್ಷೆ ಬೇರೆ ಸಮೀಪಿಸುತ್ತಿತ್ತು.
"ದೊಡ್ಡ ಪ್ರಮಾಣದಲ್ಲಿ ಆಚರಿಸೋಣ ಎಂದರೆ ಇದೊಳ್ಳೇ ಪೀಕಲಾಟ
ವಾಯ್ತಲ್ಲ," ಎಂದು ನಂಜುಂಡಯ್ಯ ಪೀಠಿಕೆ ಹಾಕಿದರು.
ದೊಡ್ಡ ಪ್ರಮಾಣದ ಆಚರಣೆಯನ್ನು ಅವರು ಕಲ್ಪಿಸಿದ್ದುದು ಬೇರೆಯೇ
ಉದ್ದೇಶಕ್ಕಾಗಿ. ಹೈಸ್ಕೂಲಿನ ಶಂಕುಸ್ಥಾಪನೆಗೆ ಪೂರ್ವಭಾವಿಯಾಗಿ ನಡೆಯುವ
ಉತ್ಸವ ಭರ್ಜರಿಯಾಗಿದ್ದು ಅಲ್ಲಿ ಹೈಸ್ಕೂಲಿನ ಪ್ರಸ್ತಾಪವಾಗಬೇಕೆಂದು ಅವರು
ಬಯಸಿದ್ದರು.
ಜಯದೇವನೊಬ್ಬನೇ ಇದ್ದಾಗ ನಂಜುಂಡಯ್ಯನೆಂದರು:
"ವಾರ್ಷಿಕೋತ್ಸವಕ್ಕೆ ಯಾರನ್ನು ಕರೆಸೋಣ?"
ಮೂರು ವರ್ಷಗಳ ಹಿಂದೆಯೂ ಆ ಚರ್ಚೆಯಾಗಿತ್ತು. ಜಯದೇವ ಅದನ್ನು
ಮರೆತಿರಲಿಲ್ಲ. ನಂಜುಂಡಯ್ಯನಿಗೂ ನೆನಪಿತ್ತು.
"ನೀವೇ ಹೇಳಿ."
ನಂಜುಂಡಯ್ಯ ನಕ್ಕರು.
"ಯಾರಾದರೂ ಸಾಹಿತಿಗಳನ್ನು ಕರೆಸೋಣ ಅಂತ ನೀವು ಹಿಂದೆ ಹೇಳಿದ್ರಿ. ಈ
ಸಲ ಹಾಗೆ ಮಾಡೀಂತ ನಾನೇ ಹೇಳ್ತಿದ್ದೆ. ನಮ್ಮಲ್ಲಿ ಸಾಂಸ್ಕೃತಿಕ ಜಾಗೃತಿ ಆಗ್ಬೇಕಾದ್ರೆ
ಅಂಥ ಉಪನ್ಯಾಸಗಳು ಅಗತ್ಯ ಅಂತ ಒಪ್ತೀನಿ. ಆದರೆ ಈ ಸಲ__"
'ಆದರೆ' ಪದ ಬಂದೇ ಬರುವುದೆಂದು ಜಯದೇವನಿಗೆ ಗೊತ್ತಿತ್ತು.
ನಂಜುಂಡಯ್ಯ, ಕೆಳಗೊಮ್ಮೆ ನೋಡಿ ತಲೆಯನ್ನು ಮೇಲಕ್ಕೆತ್ತಿ ನುಡಿದರು:
"ನಾವು ಕಟ್ಟಬೇಕಾಗಿರೋ ಹೈಸ್ಕೂಲಿನ ದೃಷ್ಟಿಯಿಂದ ['ಇತ್ತೀಚೆಗಂತೂ
ಇವರು ಹೈಸ್ಕೂಲು ಪದವನ್ನು ಜಪಿಸೋದು ಹೆಚ್ಚಾಗಿ ಹೋಯ್ತು'] ಚೆನ್ನಣ್ಣನವ
ರನ್ನ ಅಧ್ಯಕ್ಷರಾಗಿ ಮಾಡಿದ್ರೆ ಹೆಚ್ಚು ಉಪಯೋಗವಾಗುತ್ತೆ. ಹೌದೇ?"
ಅದೇನೋ ನಿಜವಾಗಿತ್ತು. ಅಲ್ಲಗಳೆಯುವುದರಲ್ಲಿ ಅರ್ಥವಿರಲಿಲ್ಲ. ಇದು
ದುರುದ್ದೇಶವೆಂದು ನಂಜುಂಡಯ್ಯನವರನ್ನು ಆಕ್ಷೇಪಿಸುವುದೂ ಸಮಂಜಸ
ವಾಗಿರಲಿಲ್ಲ.
"ಆಗಬಹುದು ಸಾರ್."
"ವಿವಿಧ ವಿನೋದಾವಳಿ ಜವಾಬ್ದಾರಿಯೆಲ್ಲ ನಿಮ್ಮದೇ."

60