ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

497

ಲಿಲ್ಲ. ಆದರೆ ಈಗ ನೀನೇ ಕಣ್ಣಾರೆ ನೋಡಿದೆಯಲ್ಲ, ಎಂಥ ವಾತಾವರಣದಲ್ಲಿ ನಾನು
ಬೆಳೆದೋನು ಅನ್ನೋದನ್ನ?"
"ಹೂಂ. ನೋಡಿದೆ."
ಸುನಂದಾ ಒಲವು ತುಂಬಿದ ನೋಟದಿಂದ ಜಯದೇವನನ್ನು ದಿಟ್ಟಿಸಿದಳು. ಆತ
ಪ್ರೀತಿ ಪುರಸ್ಸರವಾದ ದೃಷ್ಟಿಯಿಂದ ಆಕೆಯನ್ನು ನೋಡಿದ.
...ಜಯದೇವನ ಬೆಂಗಳೂರು ವಿಳಾಸಕ್ಕೆ ನಂಜುಂಡಯ್ಯ ಕಾಗದ ಬರೆದಿದ್ದರು.
"ಶಂಕುಸ್ಥಾಪನೆಯ ಸಂಬಂಧದ ಏರ್ಪಾಟಿಗಾಗಿ ಶಂಕರಪ್ಪನವರು ಮತ್ತು
ನಾನು ಬೆಂಗಳೂರಿಗೆ ಬರುತ್ತೇವೆ. ಮುಖ್ಯ ಮಂತ್ರಿಯವರನ್ನು ಭೇಟಿಯಾಗಬೇಕಾಗಿದೆ.
ಒಂದು ವಾರ ಅಲ್ಲಿ ಇರಬೇಕೆಂದು ಮಾಡಿದ್ದೇವೆ. ಗುರುವಾರದೊಳಗಾಗಿ ನಿಮ್ಮನ್ನು
ಕಾಣುತ್ತೇವೆ."
"ಕಾಗದ ಬಂದು ಆಗಲೆ ಎರಡು ದಿವಸವಾಯ್ತು," ಎಂದರು ಶ್ರೀಪತಿರಾಯರು,
ಅದರಲ್ಲಿದ್ದುದು ಮುಖ್ಯ ವಿಷಯವೆಂಬುದನ್ನು ಅಳಿಯನ ಮುಖಭಾವದಿಂದಲೆ
ಊಹಿಸಿ.
ಜಯದೇವ ಕಾಗದದ ಒಕ್ಕಣೆಯನ್ನು ಮಾವನಿಗೆ ತಿಳಿಸಿದ.
ಅವರೆಂದರು:
"ಬೇಕಾದರೆ ಅವರು ಇಲ್ಲಿಯೇ ಉಳಕೋಬಹುದು. ಕೊಠಡಿ ಬಿಟ್ಟು
ಕೊಡೋಣ."
"ಅದರ ಅಗತ್ಯ ಇರಲಾರದು ಮಾವ. ವಸತಿ ವಿಷಯ ಅವರು ಏನೂ ಬರೆದಿಲ್ಲ.
ಅಲ್ದೆ, ನಂಜುಂಡಯ್ಯನವರಿಗೆ ಬೆಂಗಳೂರು ಹೊಸದಲ್ಲ."
"ಸರಿ ಹಾಗಾದರೆ. ಬಂದಾಗ, ಇಲ್ಲೇ ಇರೀಂತ ಮಾತಿಗೆ ಹೇಳಿದರಾಯ್ತು.
ಊಟಕ್ಕಂತೂ ಒಂದು ದಿನ ಕರೆದ್ಬಿಡು."
"ಊಟಕ್ಕೆ ಕರೀದೆ ಇ‍‍ರ್‍ತಾರಾ?" ಎಂದ ವೇಣು, ನಕ್ಕು. ನಂಜುಂಡಯ್ಯನವರ
ಮನೆಯಲ್ಲಿ ತನ್ನ ತಂಗಿಯೂ ಭಾವನೂ ಉಂಡಿದ್ದುದು ಆತನಿಗೆ ಗೊತ್ತಿತ್ತು. [ಅದನ್ನು
ರಹಸ್ಯವಾಗಿಯೇ ಆತ ಉಳಿಸಿಕೊಂಡು ಬಂದಿದ್ದ, ಅಷ್ಟೆ.]
ಗುರುವಾರ ಬರಲಿಲ್ಲ. ನಂಜುಂಡಯ್ಯನವರೊಬ್ಬರೇ ಶುಕ್ರವಾರ ಮಧಾಹ್ನ
ಜಯದೇವನ ಮಾವನ ಮನೆಗೆ ಬಂದರು.
"ಎಲ್ಲಿ ಶಂಕರಪ್ಪನವರು?" ಎಂದು ಕೇಳಿದ ಜಯದೇವ.
"ಬಂದಿದ್ದಾರೆ. ನಾವು ಬುಧವಾರವೇ ಬಂದ್ವಿ."
"ಉಳಕೊಂಡಿರೋದು?"
"ಕಲ್ಯಾಣ ಭವನದಲ್ಲಿದೀವಿ."
"ಇಲ್ಲಿಗೇ ಬರಬಹುದಾಗಿತ್ತು."

63