ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

361

ಈ ಮಾರ್ಪಾಟಿಗೆ ಬೇರೇನಾದರೂ ಕಾರಣವಿರಬಹುದೆ_ ಎಂದು ತಿಳಿಯಲೆತ್ನಿ
ಸಿತು ಆತನ ಮನಸ್ಸು. ನಿರ್ದಿಷ್ಟವಾದ ಯಾವ ಕಾರಣವೂ ಇದ್ದಂತೆ ಅವನಿಗೆ
ತೋರಲಿಲ್ಲ.
ಆತ ಕೇಳಿದ:
"ಯಾವ ಊರಿನವರು ಈ ಲಕ್ಕಪ್ಪ?"
"ನಾಗಮಂಗಲದೋನು, ಮಂಡ್ಯದ ಹತ್ತಿರ. ಅಬ್ಬ! ಅದೇನು ದರ್ಪ ಅವನಿಗೆ
ಅಡರಿಬಿಟ್ಟಿದೇಂತ! ಒಕ್ಕಲಿಗರು, ಆಳುವವರು ಅಂತ ಏನು ಅಹಂಕಾರ!"
ನಂಜುಂಡಯ್ಯನದು ಯಾರನ್ನಾದರೂ ನಿಂದಿಸುತ್ತಲೇ ಇರಬೇಕಾದ ವ್ಯಕ್ತಿತ್ವ
ಎ೦ಬುದು ಜಯದೇವನಿಗೆ ಹೊಳೆದರೂ ಆ ಮಾತು ಅವನ ವಿಚಾರ ಶಕ್ತಿಯನ್ನು
ಕೆದಕಿತು. ಬೇರೊಬ್ಬ ವ್ಯಕ್ತಿಯ ನೆನಪಾಯಿತು ಆತನಿಗೆ.
"ಇಲ್ಲಿ ಪ್ರಾಥಮಿಕ ಶಾಲೇಲಿ ತಿಮ್ಮಯ್ಯ ಮೇಸ್ಟ್ರೂಂತ ಒಬ್ಬರಿರ್ಲಿಲ್ವೇ?”
"ಯಾರು, ಆ ನಾಟಕದ ಖಯಾಲಿ ಮನುಷ್ಯ! ಇದಾನೆ ಇಲ್ಲೇ."
"ತಮಾಷೆ ವ್ಯಕ್ತಿ. ಆವತ್ತು ನಾಟಕ ಬರ್ಕೊಟ್ಟಿದ್ರಲ್ಲಾ."
"ಹೌದು, ಹೌದು."
ಆ ತಿಮ್ಮಯ್ಯನ ಜಾತಿ ಗೊತ್ತಿದ್ದರೂ ಜಯದೇವನೆಂದ:
“ಆತನೂ ಒಕ್ಕಲಿಗ ಅಂತ ಕಾಣುತ್ತೆ."
"ಹೂ೦. ಹೂ೦. ಆದರೆ ಅವನು ಪೆದ್ದು. ಈ లಕ್ಕಪ್ಪನಿಗೂ ಅವನಿಗೂ
ಎಲ್ಲಿಯ ಹೋಲಿಕೆ? ಈತನ ಕಡೆಯೋರು ಯಾರೋ ಅಸೆಂಬ್ಲೀಲಿ ಬೇರೆ ಇದಾರಂತೆ."
"ಲಕ್ಕಪ್ಪನೂ ರಾಜಕೀಯದ ಮನುಷ್ನೇನು ಹಾಗಾದರೆ?”
"ಬಹಿರಂಗದ ರಾಜಕೀಯ ಏನೂ ಇಲ್ಲ. ಅಂತರಂಗದಲ್ಲಿ ಮಾತ್ರ ಕೆಲಸ
ನಡಿಸ್ತಾನೆ. ಕುಳ್ಳಗೆ-ಹ್ಯಾಗಿದಾನೆ ಅಂತೀರಾ?”
"ದೇಶದ ರಾಜಕೀಯ ಹ್ಯಾಗಿರುತ್ತೋ ಹಾಗೆಯೆ ನಮ್ಮ ಜೀವನ ಕ್ರಮ ಅಂತ
ಕಾಣುತ್ತೆ. ಯಾವ ಊರಿಗೆ ಹೋದರೂ ಇದೇ ಗೋಳು."
ಹೆಚ್ಚು ಊರು ಸುತ್ತಿದವನೇನೂ ಅಲ್ಲ ಜಯದೇವ. ಆದರೂ ಅನುಭವಿಯಂತೆ
ಆ ಮಾತು ಹೊರಟಿತ್ತು.
ಜಯದೇವನ ವಿಚಾರ ಸರಣಿಯನ್ನು ನಂಜುಂಡಯ್ಯ ಖಂಡಿಸಲಿಲ್ಲ. ಬದಲು
ಕಿಟಿಕಿಯ ಹೊರನೋಡುತ್ತ ಕುಳಿತರು.
ಮೌನದ ಆ ಅವಕಾಶ ಸಾಧಿಸಿ ನಿದ್ದೆ, ಜಯದೇವನಿಗೆ ಸುತ್ತಿದ್ದ ಉರುಲನ್ನು
ಬಿಗಿಗೊಳಿಸಿ ಎಳೆಯತೊಡಗಿತು.
"ಈ ಊರಲ್ಲಿ ಹೈಸ್ಕೂಲು ಸ್ಥಾಪಿಸೋ ವಿಷಯ ಹಿಂದೆ ಹೇಳಿರ್ಲಿಲ್ವೆ?"
ತೂಕಡಿಸುತ್ತಿದ್ದ ಜಯದೇವನಿಗೆ ಆ ಮಾತು ಗುಡುಗಿನಂತೆ ಕೇಳಿಸಿ ಆತ

46