ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

401

"ಹೊರಡ್ಲಾ ಹಾಗಾದರೆ?"
"ಎಲ್ಲಿ, ಕೊಡೆ ತಂದೇ ಇಲ್ವೆ?" ಎಂದ, ಆವರೆಗೂ ಅದನ್ನು ಗಮನಿಸಿದೆ ಇದ್ದ
ಜಯದೇವ.
"ಇಲ್ಲ, ಬಿಸಿಲಾಗೋಕ್ಮುಂಚೆ ಮನೆ ಸೇರ್ತೀನಲ್ಲಾ ಅಂತ ಬರಿಗೈಲೆ ಬಂದೆ,"
ಎನ್ನುತ್ತ ಲಕ್ಕಪ್ಪಗೌಡರು ಅಂಗಳಕ್ಕಿಳಿದರು.
"ಒಳ್ಳೇದು ಲಕ್ಕಪ್ಪಗೌಡರೆ. ನಾನೂ ಸ್ನಾನಕ್ಕೆ ಹೋರಡ್ತೀನಿ."
.....ತಡವಾದರೂ ಸರಿಯೆ ಬಿಡಲೊಲ್ಲೆನೆಂದು ಸುನಂದಾ ಜಯದೇವನ
ನೆತ್ತಿಗೆ ಎಣ್ಣೆ ಇಟ್ಟಳು.
"ಸ್ನಾನವಾದಮೇಲೆ ನಿದ್ದೆ," ಎಂದು ಮತ್ತೊಮ್ಮೆ ನೆನೆಪುಮಾಡಿ ಕೊಟ್ಟಳು
ಆಕೆ.
“ಓಹೋ. ಧಾರಾಳವಾಗಿ. ಇಷ್ಟೆಲ್ಲ ಮಾತುಕತೆಯಾಗಿದೆ. ನಿದ್ದೆ ಮಾಡದೇ
ಇದ್ದರೆ ಬುದ್ದಿ ಭ್ರಮಣೆಯಾದೀತು."
ಸುನಂದಾ ಕೇಳಿದಳು:
"ಇನ್ನು ಸಾಯಂಕಾಲ ನಂಜುಂಡಯ್ಯನವರ ಮನೇಲಿ ಮಾತುಕತೆಯಾದ
ಮೇಲೂ ಹೀಗೆಯೇ ನಿದ್ದೆಮಾಡ್ತೀರಿ ತಾನೆ?"




ತಂಗಿಗೆ ಬರೆದ ಕಾಗದದಲ್ಲಿ ವೇಣು ಕೇಳಿದ್ದ:
"-ಪತ್ರವ್ಯವಹಾರದ ಜವಾಬ್ದಾರಿಯನ್ನೆಲ್ಲ ನಿನಗೇ ವಹಿಸಿದಾರೊ? ನಾಲ್ಕು
ಗೆರೆ ಬರೆಯೋದಕ್ಕೂ ಸಾಹೇಬರಿಗೆ ಪುರಸೊತ್ತಿಲ್ವಂತೊ?"
ಜಯದೇವ ವೇಣುವಿಗೆ ಬರೆದ:
“ರಜಾ ಇದ್ದರೆ ಓಮ್ಮೆ ಬಂದು ಹೋಗು.”
ಕೆಲಸ ಅದೇ ಆಗ ಖಾಯಂ ಆಗಿದ್ದ ವೇಣು, ರಜಾ ಪಡೆಯುವ ಸ್ಥಿತಿಯಲ್ಲಿ
ರಲಿಲ್ಲ......
ನಾಲ್ಕೇ ದಿನಗಳ ಬಳಿಕ ಒಂದು ಸಂಜೆ ಮೇಘದೈತ್ಯ ಗುಡುಗಿದ:
'ಈ ಸಲದ್ದು ನಟನೆಯಲ್ಲ. ನಡು ಮುರಿಯಿತು. ಪುಡಿ ಪುಡಿಯಾಯಿತು
ಮೈ. ಇದೋ ಕಣವಾದೆ, ನೀರಾದೆ.'
ಎಂತಹ ಮಳೆ! ಅದರ ರುದ್ರ ನೃತ್ಯಕ್ಕೆ ಹಿನ್ನಲೆಯಾಗಿ, ರೆಂಬೆ ಕೊಂಬೆಗಳನ್ನು

51