ಈ ಪುಟವನ್ನು ಪ್ರಕಟಿಸಲಾಗಿದೆ

402

ಸೇತುವೆ

ಕಿತ್ತೆಸೆದ, ಮರಗಳನ್ನು ಬುಡಮೇಲು ಮಾಡಿದ, ಮನೆ-ಛಾವಣಿಗಳನ್ನು ಹಾರಿಸಿ
ಕೊಂಡೊಯ್ದ ಗಾಳಿ; ಗುಡುಗು, ಮಿಂಚು. ಒಣಗಿದ್ದ ಹಳ್ಳಗಳು ತುಂಬಿದ ಕೆರೆ
ಗಳಾದುವು. ಬೀದಿ ಗಲ್ಲಿಗಳು ನದಿ ಉಪ ನದಿಗಳಾದುವು. ಮಾನವನ ಮೇಲೆ
ಮುನಿದ ದೇವತೆಗಳು ಆಕ್ರೋಶ ಮಾಡಿದಂತೆ-ಆ ವಿಕಟ ಅಟ್ಟಹಾಸ. ಅಥವಾ
ದಾನವ-ದೇವತೆಗಳ ಯುದ್ಧವೊ?
ಮಳೆ ಆ ವರ್ಷ ತಡವಾಗಿ ಬಂದಿತ್ತು. ಆ ತಪ್ಪಿಗೆಂದು ಹೆಚ್ಚು ಹೊತ್ತು
ಸುರಿಯಿತು.
ಬೆಂಗಳೂರಿನಲ್ಲಿ ಇರುತಿದ್ದುದಕ್ಕಿಂತ ಸ್ವಲ್ಪ ಭಿನ್ನವಾಗಿದ್ದ ಆ ಮಳೆಗಾಲದ ಸವಿ
ಯನ್ನು ಸುನಂದಾ ಉಂಡಳು. ಅಣ್ಣನಿಗೆ ಬಣ್ಣಿಸಿ ಬರೆಯಲು ಮತ್ತೊಂದು ವಿಷಯ
ದೊರೆತಂತಾಯಿತು ಆಕೆಗೆ.
ಮೇಲಧಿಕಾರಿಗಳಿಂದ ಶಾಲೆಗೆ ಪ್ರಚುರ ಪತ್ರ ಬಂತು: ವಿದ್ಯಾರ್ಥಿಗಳ ಅನು
ಕೂಲಕ್ಕೆ ಸರಿಯಾಗಿ ಶಾಲಾಸಮಯ ಬದಲಾಯಿಸಬಹುದೆಂದು.
“ನಾಳೆಯಿಂದ ಹನ್ನೊಂದು ಘಂಟೆಗೆ ಶಾಲೆ," ಎಂದು ಜಯದೇವ ತಿಳಿಸಿದಾಗ
ಸುನಂದೆಗೆ ಸಂತೋಷವಾಯ್ತು.
"ನಮ್ಮಣ್ಣ ಕಾರ್ಖಾನೆಗೆ ಹೋದ ಹಾಗೆ ಬೆಳಗ್ಗೆ ಎದ್ದು ಇನ್ನು ನೀವು ಓಡ
ಬೇಕಾದ್ದಿಲ್ಲವಲ್ಲ," ಎಂದಳು.
"ಅಡುಗೆ ಮಾತ್ರ ಸ್ವಲ್ಪ ಅವಸರದಲ್ಲೆ ಆಗ್ಬೇಕು."
"ಮಾಡಿದರಾಯ್ತು."
...ಲಕ್ಕಪ್ಪಗೌಡರ ಮನೆಯಲ್ಲಿ ಸೊರಗಿ ಕಡ್ಡಿಯಂತಿದ್ದ ಅವರ ಹೆಂಡತಿಯೂ
ಆಕೆಯ ತಾಯಿಯೂ ಭಾನುವಾರ ಮಧ್ಯಾಹ್ನ ಹಬ್ಬದ ಅಡುಗೆಯನ್ನೆ ಸಿದ್ಧ
ಗೊಳಿಸಿದರು.
"ಅದು ಒಂದರ ಹೊರತಾಗಿ ಉಳಿದದ್ದೆಲ್ಲ ಮಾಡಿದೀವಿ," ಎಂದರು ಗೌಡರು,
ನಗುತ್ತ, ರಹಸ್ಯಮಯವಾಗಿ ಮಾತನಾಡುತ್ತ.
'ಅದು' ಎಂದರೆ ಏನೆಂಬುದು ಸುನಂದೆಗೆ ಅರ್ಥವಾಗಲಿಲ್ಲ.
ಜಯದೇವ ನಸುನಕ್ಕು ನುಡಿದ:
"ಇಷ್ಟೆಲ್ಲ ಮಾಡಿಸಿದೀರಲ್ಲ. ಇದನ್ನೆಲ್ಲ ರುಚಿನೋಡಿ ಜೀರ್ಣಿಸಿದರೆ ಸಾಕಾಗಿದೆ."
ಊಟ, ಮಾತು. ಸಿಹಿಯಾದ ಊಟ; ಸದ್ಯಃ ಮಾತು ಕೂಡ ಕಹಿಯಾಗಿರಲಿಲ್ಲ.
...ನಂಜುಂಡಯ್ಯನೂ ಅವರಾಕೆಯೂ ಜತೆಯಾಗಿ ಜಯದೇವನ ಮನೆಗೆ
ಬರಲೇ ಇಲ್ಲ. ಪಾರ್ವತಮ್ಮ ಮಕ್ಕಳೊಡನೆ ಒಮ್ಮೆ ಬಂದು ಹೋದರು.
ಲಕ್ಕಪ್ಪಗೌಡರ ಹೆಂಡತಿಯಂತೂ ಅನಾರೋಗ್ಯದ ದೆಸೆಯಿಂದ ಮನೆ ಬಿಡುವ
ಹಾಗಿರಲಿಲ್ಲ.
ಸುನಂದಾ ಕೇಳಿದಳು: