ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೩೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಸಬ್ಬೋಧ ಚಂದ್ರಿಕೆ. ಚೌಳ ಮುಚ್ಚಿಕೊಂಡು ಎದ್ದರು • ದಾದ ಇಲ್ಲದ ಶ್ರೀಮಂತರಮನೆಯು ; ಬೆಳ್ಳಿಯ ಬಟ್ಟಲಹೋದದ್ದು ಯಾರಲಕ್ಷದಲ್ಲಿ ಯ ಬರಲಿಲ್ಲ, ಯತಿಗಳು ಗ್ರಾಮಂತರಕ್ಕೆ ತೆರಳಿದರು, ದುರುದಿನ ಭಿಕ್ಷೆಯಕಾಲವು ಒದಗಲು, ಅವರಿಗೆ ತಾವು ಬೆಳ್ಳಿ ಯಬ ಟೈಲು ಕದ್ದ ಬಗ್ಗೆ ಪಶ್ಚಾತ್ತಾಪವಾಯಿತು, ನಾನು ನನ್ನ ಮನೆಯೊಳಗಿನ ಸಕಲವೈ ಭದ ವನ್ನು ತ್ಯಜಿಸಿ ಸನ್ಯಾಸಿಯಾದವನು; ಹೀಗಿದ್ದು ಒಂದು ಕ್ಷುದ್ರ ಬಟ್ಟಲವನ್ನು ಕದ್ದೆ ನಲ್ಲ, ಎಂದು ಪಶ್ಚಾತ್ತಾಪಪಟ್ಟು, ಆಗಿನಿಂದಾಗಲೇ ಹೊರಟು ಮರಳಿ ಶಾನಭೋಗನ ಮನೆ ಗೆಬಂದರು, ಅವರು ಶಾನಭೋಗನ ಮುಂದೆ ಬೆಳ್ಳಿಯ ಬಟ್ಟಲವನ್ನು ಇಟ್ಟ-ಮಹಾ ರಾಯಾ, ಈ ನಿನ್ನ ಬಟ್ಟಲವನ್ನು ತೆಗೆದುಕೋ, ನಿನ್ನೆ ಇದನ್ನು ನಾನು ಕದ್ದುಕೊಂಡು ಹೋಗಿದ್ದೆನು, ಈದುರ್ಬುದ್ದಿ ಖು ನನಗೆ ಯಾಕೆ ಉಂಟಾಯಿತೆಂಬದನ್ನು ತಿಳಿ ಯಲಾರದವನಾಗಿದ್ದೇನೆ ನಿನ್ನೆ ನ್ನು ನಾನು ಈಗ ಪ್ರಾರ್ಥಿಸುವದೇನಂದರೆ , ನೀನು ಇಷ್ಟು ಸಂಪತ್ತನ್ನು ಹ್ಯಾಗೆಗಳಿಸಿರುತ್ತೀಎಂಬದನ್ನು ದಯಡಿಹೇಳು , ಎಂದು ಪ್ರಾರ್ಥಿಸಿದರು, ಯತಿಗಳ ಈ ವಿಲಕ್ಷಣ ಕೃತಿಯನ್ನು ನೋಡಿ ಆಶ್ಚರ್ಯಮಗ್ನ ನಾದ ಕಲಕರಣಿಯ ಸುಳ್ಳು ಹೇಳಲಾರದೆ-ಸ್ವಾ ವಿ, ನಾನು ಕಳವು, ದರವಡೆ, ಹಾದಿಯ ಬಡಿಯುವದು ಮೊದಲಾದ ದುಷ್ಟ ಕೃತಿಗಳಿಂದ ಸಂಪತ್ತನ್ನು ಸಂಪಾದಿಸಿದ್ದೇನೆ, ಎಂದು ಹೇಳಿದನು, ಆಗ ಯತಿಗಳ ತಲೆದೂಗಿ-ಸರಿಸರಿ; ಸಮಧಾನವಾಯಿತು, (gaagraಾಗ:xada ” ಎಂಬಂತೆ, ನಿನ್ನ ಅನ್ನ ವು ನನ್ನ ಹಟ್ಟಿಯಲ್ಲಿ ರುವವರೆಗೆ ನನಗೆ ಕಳವು ಮಾಡುವ ಇಚ್ಛೆ ಯಾಯಿತು, ಈಗ ೨೪ ತಾಸು ಗಳಲ್ಲಿ ನಿನ್ನ ಅನ್ನ ವು ಹೊರಬಿದ್ದು ಹೋಗಿ ಅದರ ಕಸುವು ಕಡಿಮೆಯಾದದ್ದರಿಂದ, ನನ್ನ ಆ ದಂಚ್ಛೆಯು ಅಳಿದು ಹೋಗಿ ಪಶ್ಚಾತ್ತಾಪವಾಯಿತು, ಎಂದು ಹೇಳಿ, ಕುಲಕ ರಣಿಯಮನೆಯಲ್ಲಿ ಕ್ಷಣವಾದರೂ ನಿಲ್ಲದ ಯತಿಗಳು ಹೊರಟು ಹೋದರು! ಪ್ರಿಯವಾಚಕರೇ, ನಿಷ್ಕಲಂಕಾದ ತರುಣಯ ತಿಯ ಮನಸ್ಸಿನಲ್ಲಿ ಶಾನ ಭೂಗನಮನೆಯ ದುರನ್ನದ ಮಲವು ಪಕ್ಕನೆ ಹೊಳೆದು ಅಡಗಿದ್ದನ್ನು ನೋಡಿ ನೀವು ಆಶ್ಚರ್ಯ ಪಡಬಹುದು, ಆದರೆ ದುರನ್ನ ದಿಂದ ಪುಷ್ಟ ಎಂದ ನಮ್ಮ ದೇಹಸ್ಥ ಬದ್ದಿಗ ಒಮ್ಮೊಮ್ಮೆ ನಮ್ಮದುಷ್ಕರ್ಮಕ್ಕೋಸ್ಕರಪಶ್ಚಾತ್ತಾಪವಾಗುತ್ತಿರುವದನ್ನು ಮನಸ್ಸಿನಲ್ಲಿ ತಂದರೆ,ನಿರ್ಮಲಮನಸ್ಸಿನವರಿಗೆ ಹೀಗೆ ಪಶ್ಚಾತ್ತಾಪವಾದದ್ದೇನು ಆಶ್ಚರ್ಯವಲ್ಲೆಂದು ತೋರಬಹುದು, ಸಾಧಕ ಸ್ಥಿತಿಯಲ್ಲಿದ್ದ ಯತಿಗೆ ಒಬ್ಬ ಶಾನಭೋಗನ ಮನೆಯ ಒಪ್ಪತ್ತಿನ ಅನ್ನವು ಬಾಧಿಸಿ ಬುದ್ದಿಯನ್ನು ಕೆಡಿಸಿ ಯ ತಿಧರ್ಮಕ್ಕೆ ಬಾಧೆಯನ್ನುಂಟು ಮೂಡಲು, ಎಷ್ಟೋಗೌಡಶಾನಭೋಗರಮನೆಯು, ಹಾಗು ವಿಧವಿಧದ ಅನ್ಯಾಯದ