ನೋವು ೧೩೯
ದೊಡ್ಡಮ್ಮನಿಗೆ ಅದು ಇಷ್ಟವಾಗಿರಲಿಲ್ಲ. ಆದರೆ ಶ್ರಿನಿವಾಸಯ್ಯ ಅಂದಿದ್ದರು : “ ಇರಲಿ, ಬಿಡಮ್ಮ ಈಗ ಎಲ್ಲಿ ನೋಡಿದರೂ ಕ್ರಾಪೇ.” “ ಕಾಲಕ್ಕೆ ತಕ್ಕಂತೆ ವೇಷ,” ಎಂದು ಹೇಳಿ ದೊಡ್ಡಮ್ಮ ಸುಮ್ಮನಾಗಿದ್ದರು. ಆ ಬೇಸಗೆಯಲ್ಲಿ ಗೋವಿಂದನೂ ಪದ್ಮನಾಭನೂ ಗೋಪಾಲನನ್ನು ಪೀಡಿಸಿ ಛೇಡಿಸಿ
ಹಣ್ಣು ಮಾಡಿದ್ದರು, ಹೊಸಳ್ಳಿಯಿಂದ ಕ್ಷೌರಿಕ ಬಂದಾಗ.
“ ನಿನಗೇನಾದರೂ ಕೊಡ್ತೀವಿ. ಗೋಪಾಲಣ್ಣನ ಜುಟ್ಟು ಕತ್ತರಿಸಿ ಬಿಡಪ್ಪ.”
ಎ೦ದಿದ್ದರು.
ಗೋಪಾಲ ತನ್ನೆದುರು ಕುಳಿತು ತಲೆ ಬಗ್ಗಿಸಿದಾಗ ಕ್ಷೌರಿಕ, “ ಚಿಕ್ಕೋರ ಕ್ರಾಪು
ಚೆಂದಾಗೈತೆ. ನಿಮ್ಮದನ್ನ ಅದಕ್ಕಿಂತ ವೈನಾಗಿ ಮಾಡ್ಬುಡ್ಲ ಬುದ್ಧಿ?” ಎಂದ.
ತಲೆಯೆತ್ತದೆಯೇ ಗೋಪಾಲ, “ ಹೂಂ,” ಅಂದಿದ್ದ. ಗೋವಿಂದನೂ ಪದ್ಮನಾಭನೂ ಮರೆಯಲ್ಲಿದ್ದರು. ಕರಕ್ ಕರಕ್. ಗೋಪಾಲನ ಚಂಡಿಕೆ ಗತಪ್ರಾಣವಾಗಿ ಉರುಳಿ ಬಿತ್ತು. ಅವನ ತಮ್ಮಂದಿರು ಎದುರಿಗೆ ಬಂದು ಚಪ್ಪಾಳೆ ತಟ್ಟಿದರು. ಗೋಪಾಲ ಕ೦ಬನಿ ಸುರಿಸಿದ. ದೊಡ್ಡಮ್ಮ ಹೊರಕ್ಕೆ ಬಂದು, ಗೋಪಾಲನತ್ತ ನೋಡಿ ನಿಟ್ಟುಸಿರು ಬಿಟ್ಟು
“ ಅಯ್ಯೋ ಪಾಪಿಗಳಾ !” ಎಂದು ಉದ್ಗರಿಸಿ, ಒಳಕ್ಕೆ ಹೋದರು.
ಜುಟ್ಟು ಹೋಯಿತೆಂದು ನಾಗರಿಕನಾದನೆ ಗೋಪಾಲ ? ಕ್ರಾಪು ಬಿಟ್ಟವರೆಲ್ಲ
ಸುಸಂಸ್ಕೃತರಾಗುವುದಾದರೆ ಲೋಕ ಹೀಗೆ ಯಾಕಿರುತ್ತಿತ್ತು ? ಹೊಲದಲ್ಲಿ ದುಡಿಯುವ ರೈತರಿಗೂ ಇವನಿಗೂ ಏನು ವ್ಯತ್ಯಾಸ ಅಂತ ? ಓದು ಬರಹ ಬಲ್ಲ. ಆದರೆ ಒಂದು ಪುಸ್ತಕ ವನ್ನಾದರೂ ಓದೋಣವೆಂದು ಎತ್ತಿಕೊಂಡುದುಂಟೆ ಈತ ?
ಪದ್ಮನಾಭನಿಗೆ ಆಶ್ಚರ್ಯವಾಯಿತು : ‘ ಗೋಪಾಲನಿಗೂ ನನಗೂ ಯಾವ ಸಾಮ್ಯವೂ ಇಲ್ಲ : ಗೋವಿಂದನೆ ವಿಷಯದಲ್ಲೂ
ಅಷ್ಟೆ. ಅವನೊಂದು ರೀತಿ, ನಾನೊಂದು ರೀತಿ. ಇಷ್ಟೊಂದು ವ್ಯತ್ಯಾಸ ಇರುತ್ತದಲ್ಲ ಒಡಹುಟ್ಟಿದವರಲ್ಲಿ !’
ಕಣಿವೇಹಳ್ಳಿಯಲ್ಲಿ ಹೈಸ್ಕೂಲು ! ಆ ಹೈಸ್ಕೂಲಿಗೆ ತಾನು ಹೆಡ್ಮೇಸ್ಟ್ರು! ಎಂಥೆಂಥ ಯೋಚನೆ ತಂದೆಯದು, ದೊಡ್ಡಮ್ಮನದು. ಈಗ ಮನೆ ಬಿಡುತ್ತಿದ್ದೇನೆ, ಒಂದು ವರ್ಷದ ವ್ಯಾಸ೦ಗಕ್ಕೆ ಅಂತ. ಆ ಮೋಹನರಾಯರು
ಯಾರೊ ? ಮತ್ತೆರಡು ವರ್ಷ ಓದಿ ವಕೀಲಿ ಪರೀಕ್ಷೆಗೂ ಯಾಕೆ ನಾನು ಕಟ್ಟಬಾರದು ? ಆಗಾಗ್ಗೆ ಈ ಹಳ್ಳಿಗೆ ಬರುತ್ತ ಹೋಗುತ್ತ ಇದ್ದರಾಯಿತು. ಇಲ್ಲಿಯ ಕೇಸುಗಳೆಲ್ಲಾ ಸಿಕ್ಕಿಯೇ ಸಿಗುತ್ತವೆ...
ತಂದೆ ನೋಡಿ ಬಂದಿರುವ ಆ ಹುಡುಗಿ ಹೇಗಿರುವಳೊ ? ಪ್ರಮದೆಯ ಹಾಗೆ ?
ಸುಬ್ಬಿಯ ಹಾಗೆ ?
ಕಿಟಿಕಿಗೆ ಮರದ ಕಂಬಿಗಳನ್ನು ಹಾಕಿದ್ದರು. ಎರಡು ಕಂಬಿಗಳನ್ನು ಅಂಗೈಗಳಲ್ಲಿ ಹಿಡಿದು